





ಬೆಂಗಳೂರು — ಅಗ್ರಹಾರ ಬಡಾವಣೆಯ ಕಾಲಪ್ಪ ರೆಡ್ಡಿ ರಸ್ತೆಯಲ್ಲಿ (ಬೆಂಗಳೂರು-64) ಸಿ.ಹೆಚ್.ಬಿ ಗ್ರೂಪ್ ವತಿಯಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಅದ್ಧೂರಿ ಗಣೇಶ ವಾರ್ಷಿಕೋತ್ಸವ ಮತ್ತು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ ಮುಖಂಡ ಹಾಗೂ ಸಿ.ಹೆಚ್.ಬಿ ಗ್ರೂಪ್ ಸಂಸ್ಥಾಪಕರಾದ ಚಂದ್ರಣ್ಣ (ಚೋಕ್ಕನಹಳ್ಳಿ) ಅವರ ನೇತೃತ್ವದಲ್ಲಿ ಈ ಧಾರ್ಮಿಕ ಮತ್ತು ಸಾಮಾಜಿಕ ಸಪ್ತಾಹ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.
ಕಾರ್ಯಕ್ರಮಗಳ ವಿವರ:
14-09-2026 (ಸಂಜೆ 6:00 ಗಂಟೆಗೆ): ಗಣೇಶನ ಪೂಜೆ ಮತ್ತು ಕಾರ್ಯಕ್ರಮದ ಶುಭಾರಂಭ
15-09-2026: ಗಣೇಶನ ಹೋಮ
17-09-2026: ಸಾರ್ವಜನಿಕ ರಂಗೋಲಿ ಸ್ಪರ್ಧೆ
18-09-2026: ಸಾಂಪ್ರದಾಯಿಕ ಬಾಗಿನ ಕಾರ್ಯಕ್ರಮ
19-09-2026: ಜನಸೇವಾ ಮತ್ತು ಆರೋಗ್ಯ ಕಾರ್ಯಕ್ರಮಗಳು:
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ
ಬೃಹತ್ ರಕ್ತದಾನ ಶಿಬಿರ
ಉಚಿತ ಕಣ್ಣಿನ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರ
20-09-2026: ಅದ್ಧೂರಿ ಗಣೇಶನ ವಿಸರ್ಜನೆ
ಸಿ.ಹೆಚ್.ಬಿ ಗ್ರೂಪ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಅಂಜನ ಅಕ್ಷಯ ಡೆವಲಪರ್ಸ್ ಹಾಗೂ ಅರುಂಧತಿ ಸೇವಾ ನೌಕರರ ಸಂಘದ ನಿರ್ದೇಶಕರು ಮತ್ತು ಪದಾಧಿಕಾರಿಗಳು ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿ, ಕಾರ್ಯಕ್ರಮಕ್ಕೆ ಆದರದ ಸುಸ್ವಾಗತ ಬಯಸಿದ್ದಾರೆ. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ
