


ನಾಲ್ಕನೇ ರಾಜ್ಯಮಟ್ಟದ ಜ್ಯೋತಿಷ್ಯ ಕಾರ್ಯಾಗಾರ :
ಬ್ಯಾಟರಾಯನಪುರ : ಜ್ಯೋತಿಷ್ಯ ವಿಜ್ಞಾನ ಸಮಾಜದ ಒಳಿತಿಗೆ ಉಪಯೋಗವಾಗಬೇಕು ಎಂದು ಗೋಲ್ಡ್ ಟ್ರೀ ಆಸ್ಟ್ರೋ ಸಂಸ್ಥೆಯ ವ್ಯವಸ್ಥಾಪಕ ಹಾಗೂ ನಕ್ಷತ್ರನಾಡಿ ಖ್ಯಾತಿಯ ಅಂತಾರಾಷ್ಟ್ರೀಯ ಜ್ಯೋತಿಷಿ ಡಾ. ದಿನೇಶ್ ಗುರೂಜಿ ಅಭಿಪ್ರಾಯಪಟ್ಟರು.
ನಗರದ ವಿದ್ಯಾರಣ್ಯಪುರದಲ್ಲಿ ಗೋಲ್ಡ್ ಟ್ರೀ ಆಸ್ಟ್ರೋ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನಾಲ್ಕನೇ ರಾಜ್ಯಮಟ್ಟದ ಜ್ಯೋತಿಷ್ಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸನಾತನ ಧರ್ಮದ ಭಾಗವಾದ ಜ್ಯೋತಿಷ್ಯವನ್ನು ಉಳಿಸಬೇಕು ಎನ್ನುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದ್ದು, ಸಮಾಜದಲ್ಲಿನ ಬಹಳಷ್ಟು ಜನರಿಗೆ ಸೂಕ್ತ ಜ್ಞಾನದಿಂದ, ವೈಜ್ಞಾನಿಕವಾಗಿ ಜ್ಯೋತಿಷ್ಯವನ್ನು ಕಲಿಸುವುದೇ ನಮ್ಮ ಗುರಿ. ಇದು ಸಮಾಜದ ಒಳಿತಿಗೆ ಉಪಯೋಗವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ, ಶೈಕ್ಷಣಿಕ, ಸಾಹಿತ್ಯ, ವಾಣಿಜ್ಯ, ಕಲಾ ಕ್ಷೇತ್ರ, ಜ್ಯೋತಿಷ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಗೈದಿರುವ 183 ಸಾಧಕರಿಗೆ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಭಾಗವಾಗಿ ಲೋಕಕಲ್ಯಾರ್ಥವಾಗಿ ಪ್ರತ್ಯಂಗಿರಾ ಹೋಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರನಟಿ ನಾಗಿಣಿಭರಣ, ಬಿಮಲ್ ಆಟೋ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ಎಂ.ನವೀನ್ ಕುಮಾರ್, ವಿಸ್ತಾರ ನ್ಯೂಸ್ನ ಉಪಾಧ್ಯಕ್ಷ ನವನೀತ್ ಸಿ.ಎಂ., ಆಸ್ಟ್ರೋಲೈಟ್ನ ಸಿಇಒ ಅರುಣ್ ಕುಮಾರ್ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ
R ಹನುಮಂತು. 9845085793
R ಹನುಮಂತು. 7349337989
ರಾಹುಲ್ H 9035282296
Happy to know about the function arranged by Astro Light of Dr Dinesh Guruji and the Prathyangira Homa for welfare of all. Please convey our regards to Guruji.