ಯಲಹಂಕ : ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರು ನಗರ ಜಿಲ್ಲೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಬೆಂ. ಉತ್ತರ ತಾಲ್ಲೂಕು ಇವರ ಸಹಯೋಗದೊಂದಿಗೆ, ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಮಾದಪ್ಪನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಸೀಮಂತ ಮತ್ತು ಅನ್ನಪ್ರಶನ ಕಾರ್ಯಕ್ರಮದಲ್ಲಿ ಗ್ರಾ.ಪಂ‌.ಅಧ್ಯಕ್ಷೆ ಅಮರಾವತಮ್ಮ, ಗ್ರಾ.ಪಂ.ಸದಸ್ಯರಾದ ಚೈತ್ರ ಕೆಂಪೇಗೌಡ, ಮುನಿರತ್ನಮ್ಮ ಅವರು ಗ್ರಾಮದ ಗರ್ಭಿಣಿ ಮಹಿಳೆ ರಾಣಿ ಎಂಬುವವರಿಗೆ ಸೀಮಂತ ಕಾರ್ಯ ನಡೆಸಿ, ಸೀರೆ, ಕುಪ್ಪಸ, ಹಸಿರು ಬಳೆ, ಅರಿಶಿಣ-ಕುಂಕುಮ, ಹೂ, ಹಣ್ಣು, ತಾಂಬೂಲ ನೀಡುವ ಮೂಲಕ ಉಡಿತುಂಬಿ ಗೌರವಿಸಿ, ಅಕ್ಷತೆ ಪ್ರೋಕ್ಷಣೆ ಮಾಡಿ ಹರಸಿದರು.

ಇದೇ ವೇಳೆ ಗ್ರಾಮದ ಪುಟಾಣಿ ಬಾಲಕ ಪುನರ್ ಗೌಡನಿಗೆ ಪೋಷಕಾಂಶ ಯುಕ್ತವಾದ ಅನ್ನ ತಿನ್ನಿಸುವ ಮೂಲಕ ಅನ್ನಪ್ರಶನ ಕಾರ್ಯಕ್ರಮ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ವೇತ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಸೀಮಂತ ಕಾರ್ಯಕ್ರಮಕ್ಕೆ ಗ್ರಾ.ಪಂ.ಸದಸ್ಯರಾದ ಚೈತ್ರ ಕೆಂಪೇಗೌಡ ಧನಸಹಾಯದ ಸಂಪೂರ್ಣ ನೆರವು ನೀಡಿದ್ದು, ಗ್ರಾಮದಲ್ಲಿ ಇನ್ನೂ ಗರ್ಭಿಣಿ ಮಹಿಳೆಯರು ಇದ್ದರೆ, ಅವರಿಗೂ ಸಹ ಇದೇ ರೀತಿಯಲ್ಲಿ ಶಾಸ್ತ್ರೋಕ್ತವಾಗಿ ಸೀಮಂತ ನಡೆಸಲು ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.

Leave a Reply

Your email address will not be published. Required fields are marked *