


ಸಮಾಜಕ್ಕೆ ಒಳಿತು ಮಾಡುವ ಉದ್ದೇಶದಿಂದ 32ನೇ ಐಕೇರ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ಬೆಂಗಳೂರು, 4 ಡಿಸೆಂಬರ್ 2024: ಸಮಾಜಕ್ಕೆ ಒಳಿತು ಮಾಡುವ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸುವ ತನ್ನ ಬದ್ಧತೆಗೆ ಪೂರಕವಾಗಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಬೆಂಗಳೂರಿನ ಕೆಂಗೇರಿ ಸಮೀಪದ ಕನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಡಿಸೆಂಬರ್ 1ರಂದು ಆಯೋಜಿಸಿದ್ದ 32ನೇ ‘ಐಕೇರ್’ (ಎಲ್ಲರನ್ನೂ ತಲುಪುವ ಉದ್ದೇಶದ ಸಮುದಾಯ ಯೋಜನೆ’) ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದೆ.
2017ರಲ್ಲಿ ಪ್ರಾರಂಭಿಸಲಾದ ಐಕೇರ್ ಯೋಜನೆಯು ಟಿಕೆಎಂ ಉದ್ಯೋಗಿಗಳು ಸ್ವಯಂ ಸೇವಕರಾಗಿ ಭಾಗವಹಿಸಿ ನಡೆಸುವ ಕಾರ್ಯಕ್ರಮವಾಗಿದ್ದು, ಇದು ಶಿಕ್ಷಣ, ಪರಿಸರ ರಕ್ಷಣೆ, ರಸ್ತೆ ಸುರಕ್ಷತೆ ಮತ್ತು ಕೌಶಲ್ಯ ಅಭಿವೃದ್ಧಿ ವಿಚಾರದಲ್ಲಿ ನೆರವಾಗಲು ತಮ್ಮ ಉದ್ಯೋಗಿಗಳು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಟಿಕೆಎಂ ಸಂಸ್ಥೆಯು ವಿನ್ಯಾಸ ಮಾಡಿರುವ ವಿನೂತನ ಯೋಜನೆಯಾಗಿದೆ. ಸಮಾಜಕ್ಕೆ ಏನಾದರೂ ವಾಪಸ್ ನೀಡಲು ಉದ್ಯೋಗಿಗಳಿಗೆ ಪ್ರೋತ್ಸಾಹಿಸುವ ಐಕೇರ್ ಯೋಜನೆಯು ಜನ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಟಿಕೆಎಂನ ಬದ್ಧತೆಗೆ ಪೂರಕವಾಗಿ ಮೂಡಿಬಂದಿದೆ.
ಐಕೇರ್ ನ ಈ ಸಲದ ಆವೃತ್ತಿಯನ್ನು ಅಂತರರಾಷ್ಟ್ರೀಯ ಸ್ವಯಂಸೇವಕ ಮಾಸಾಚರಣೆ ಪ್ರಯುಕ್ತ ನಡೆಸಲಾಗಿದ್ದು, ಈ ಸಲದ ಕಾರ್ಯಕ್ರಮದಲ್ಲಿ ಟಿಕೆಎಂನ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರ ಜೊತೆಗೆ ಶಾಲೆಯ 100 ಮಂದಿ ಉತ್ಸಾಹಿ ವಿದ್ಯಾರ್ಥಿಗಳು ಕೂಡ ಕೈಜೋಡಿಸಿದರು. ಎಲ್ಲರೂ ಸೇರಿಕೊಂಡು ಶಾಲೆಯ ತರಗತಿ ಕೋಣೆಗಳ ಗೋಡೆಯ ಮೇಲೆ ಭಿತ್ತಿ ಚಿತ್ರಗಳನ್ನು ಮೂಡಿಸುವ ಮೂಲಕ ಮತ್ತು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಉದ್ದೀಪಿಸುವ ಕಾರ್ಡ್ ಗಳನ್ನು ಸಿದ್ಧಗೊಳಿಸುವ ಮೂಲಕ ಶಾಲಾ ವಾತಾವರಣವನ್ನು ಅತ್ಯಾಕರ್ಷಕಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿಕೆಎಂನ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಸಂವಹನ ಅಧಿಕಾರಿ ಶ್ರೀ ಸುದೀಪ್ ಎಸ್ ದಳವಿ ಅವರು, “ಉದ್ದಿಮೆಗಳು ಸಮಾಜದ ಒಳಿತಿಗೆ ಸಮರ್ಪಕ ಕೊಡುಗೆ ನೀಡಿದಾಗಲೇ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯ ನಂಬಿಕೆಯಾಗಿದೆ. 32ನೇ ಐಕೇರ್ ಕಾರ್ಯಕ್ರಮವು ಈ ನಂಬಿಕೆಗೆ ಉತ್ತಮ ಪುರಾವೆಯಾಗಿದೆ. ತರಗತಿ ಕೋಣೆಯ ಗೋಡೆಗಳಲ್ಲಿ ಸುಂದರ ಭಿತ್ತಿ ಚಿತ್ರಗಳನ್ನು ಮೂಡಿಸುವ ಮೂಲಕ ಮತ್ತು ಕುತೂಹಲ ಹುಟ್ಟುಹಾಕುವ ಶೈಕ್ಷಣಿಕ ಸಾಧನಗಳನ್ನು ರಚಿಸುವ ಮೂಲಕ ಈ ಕಾರ್ಯಕ್ರಮವು ಮೂಲಸೌಕರ್ಯ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಕಲಿಕೆಯ ಮತ್ತು ಬೆಳವಣಿಗೆಯ ಸಂಸ್ಕೃತಿ ಹುಟ್ಟುಹಾಕಲು ಯಶಸ್ವಿಯಾಗಿದೆ. ನಾವು ಟಿಕೆಎಂನಲ್ಲಿ ನಮ್ಮ ಸಮಾಜಕ್ಕೆ ಒಳಿತು ಮಾಡುವ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸುವ ಯೋಜನೆಗಳಲ್ಲಿ ಉದ್ಯೋಗಿಗಳು ತೊಡಗಿಕೊಳ್ಳುವಂತೆ ಮಾಡಲು ಬದ್ಧರಾಗಿದ್ದೇವೆ.
ಜೊತೆಯಾಗಿ ನಾವು ಜನ ಮತ್ತು ಸಮುದಾಯದಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡುವ ಯೋಜನೆಗಳನ್ನು ನಡೆಸುವ ಉದ್ದೇಶ ಹೊಂದಿದ್ದೇವೆ” ಎಂದು ಹೇಳಿದರು.
ಐಕೇರ್ ಯೋಜನೆಯಲ್ಲಿ 2,659ಕ್ಕೂ ಹೆಚ್ಚು ಶ್ರದ್ಧಾವಂತ ಸ್ವಯಂಸೇವಕರು ತೊಂಡಗಿಸಿಕೊಂಡಿದ್ದು, 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದುವರಿಗೂ ಸಮಾಜದ 67,000ಕ್ಕೂ ಹೆಚ್ಚು ಜನರ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಲು ಯೋಜನೆಯು ಯಶಸ್ವಿಯಾಗಿದೆ. ಶಿಕ್ಷಣ, ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ವಿವಿಧ ಕ್ಷೇತ್ರಗಳ ಕಡೆಗೆ ಗಮನ ಕೇಂದ್ರೀಕರಿಸಿರುವ ಈ ಯೋಜನೆಯು ಸಮುದಾಯದ ಉನ್ನತಿಗೆ ಕಾರ್ಯನಿರ್ವಹಿಸುತ್ತಿದೆ. ಟಿಕೆಎಂ ಸಂಸ್ಥೆಯು ತನ್ನ ಅರ್ಥಪೂರ್ಣ ಧ್ಯೇಯಕ್ಕೆ ಪೂರಕವಾಗಿ ನಡೆಯುವ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಉದ್ಯೋಗಿಗಳಿಗೆ ಪ್ರೇರೇಪಣೆ ನೀಡುತ್ತದೆ. ಆ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡುವ ಮತ್ತು ಸಾಮಾಜಿಕ ಜವಾಬ್ದಾರಿ ಮೆರೆಯುವ ಟೊಯೋಟಾದ ಉದ್ದೇಶಕ್ಕೆ ಬಲ ತುಂಬುತ್ತದೆ.