

ಹೆಸರಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ :
ಬಿಜೆಪಿ ಬೆಂಬಲಿತ ಆಕಾಂಕ್ಷಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ :
ಯಲಹಂಕ : ಡಿ.15ರಂದು ನಡೆಯಲಿರುವ ಹೆಸರಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಆಕಾಂಕ್ಷಿ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದರು.
ಸಹಕಾರ ಸಂಘದ ಚುನಾವಣಾ ನಿಯಮಾವಳಿಯ ಅನ್ವಯ ಸಾಮಾನ್ಯ ವರ್ಗದ ಅಭ್ಯರ್ಥಿಗಳಾಗಿ ಮಾದಪ್ಪನಹಳ್ಳಿಯ ಕೃಷ್ಣಮೂರ್ತಿ ಎಂ.ಬಿ., ಹನಿಯೂರಿನ ಹೆಚ್.ಡಿ. ಕೃಷ್ಣಪ್ಪ, ಹೆಸರಘಟ್ಟದ ಕೇಶವ ಹೆಚ್.ಎನ್., ಕಾರ್ಲಾಪುರದ ಸಿ.ನಂಜುಂಡಪ್ಪ, ಕೊಲುವರಾಯನಹಳ್ಳಿ ಕೆ.ಜೆ.ರಾಘವೇಂದ್ರ(ಬಾಬು), ಬ್ಯಾಲಕೆರೆಯ ಎಂ.ಲಕ್ಷ್ಮಣ(ಸಿಂಗ್) ನಾಮಪತ್ರ ಸಲ್ಲಿಸಿದರು. ಬಿ.ಸಿ.ಎಂ(ಬಿ) ವರ್ಗದಿಂದ ಬ್ಯಾತ ಗ್ರಾಮದ ಬಿ.ಹೆಚ್.ಸುರೇಶ್, ಬಿ.ಸಿ.ಎಂ.(ಎ) ವರ್ಗದಿಂದ ಹೆಸರಘಟ್ಟದ ಬಿ.ಅಶ್ವಥ್ ನಾಮಪತ್ರ ಸಲ್ಲಿಸಿದರು. ಸಾಮಾನ್ಯ ಮಹಿಳಾ ವರ್ಗದಿಂದ ಹೆಸರಘಟ್ಟದ ಅನಸೂಯ ಹೆಚ್.ಎ., ಹೆಚ್.ಸಿ.ರತ್ನ ನಾಮಪತ್ರ ಸಲ್ಲಿಸಿದ್ದು, ಪರಿಶಿಷ್ಟ ಜಾತಿ ವರ್ಗದಿಂದ ಬ್ಯಾಲಕೆರೆ ಗ್ರಾಮದ ಚಂದ್ರಪ್ಪ, ಪರಿಶಿಷ್ಟ ಪಂಗಡ ವರ್ಗದಿಂದ ತರಬನಹಳ್ಳಿಯ ಜಯಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಿಜೆಪಿ ಬೆಂಬಲಿತ ಆಕಾಂಕ್ಷಿ ಅಭ್ಯರ್ಥಿಗಳಿಗೆ ಬಿಜೆಪಿ ಮುಖಂಡರು ಅಭಿನಂದಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ದಿಬ್ಬೂರು ಜಯಣ್ಣ, ಹೆಚ್.ಬಿ.ಹನುಮಯ್ಯ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಹೆಚ್.ಸಿ.ರಾಜೇಶ್, ಶಿವಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಮಾವಳಿಪುರ ರಮೇಶ್, ವಸಂತಲಕ್ಷ್ಮಿ, ತಾ.ಪಂ. ಮಾಜಿ ಸದಸ್ಯ ಜಿ.ರಾಮಣ್ಣ, ಬ್ಯಾಲಕೆರೆ ಮಂಜುನಾಥ್, ಆರ್ ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ಚಂದ್ರು ಸೇರಿದಂತೆ ಇನ್ನಿತರರಿದ್ದರು.