




ವಿವಿಧ ವಿಮೆಗಳ ಕುರಿತು ಗುಂಡೂರ್ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಬಸವಕಲ್ಯಾಣ ಸುದ್ದಿ
ಬಸವಕಲ್ಯಾಣ: ಜಿಲ್ಲಾ ಪಂಚಾಯತ್ ಬೀದರ, ತಾಲೂಕಾ ಪಂಚಾಯತ್ ಬಸವಕಲ್ಯಾಣ ಹಾಗೂ ಗ್ರಾಮ ಪಂಚಾಯತ್ ಒಕ್ಕೂಟದ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳಡಿ ಮಹಿಳೆಯರಿಗಾಗಿ ವಿವಿಧ ವಿಮೆಗಳ ಕುರಿತು ಗುಂಡೂರ್ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಅಭಿಯಾನ ಜರುಗಿತು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಮರ್ಸಿ ಬಿ. CS. ಹಾಗೂ ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಗುರುರಾಜ ಕಾಂಬಳೆವಾಡಿ ಅವರು ಬ್ಯಾಂಕಗಳಲ್ಲಿ ಸಿಗುವ ಮಹಿಳೆಯರ ಜೀವನ ಭದ್ರತೆಗಾಗಿ ಹಲವು ಸರ್ಕಾರದ ಯೋಜನೆಗಳಾದ ಪ್ರಧಾನಮಂತ್ರಿ ಭೀಮಾ ಜ್ಯೋತಿ ವಿಮಾ ಸೇರಿದಂತೆ ಹಲವು ಯೋಜನೆಗಳ ಕುರಿತು ಮಾತನಾಡಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಗುಂಡೂರ್ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಾಧವರಾವ ಸೇರಿ ಯೋಜನೆಗಳಡಿ ಕಾರ್ಯ ನಿರ್ವಹಿಸುವ ಸದಸ್ಯರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಪಂಚಾಯತ ಒಕ್ಕೂಟದ ಮಹಿಳಾ ಸಂಘದ ಎಂ.ಬಿ.ಕೆ ಆಶಾ ಜಗನ್ನಾಥ, ಪಶು ಸಖಿ, ಕೃಷಿ ಸಖಿ, ಬಿ.ಸಿ. ಸಖಿ ಸದಸ್ಯರು ಹಾಗೂ ಸಹಾಯಕ ಅನೇಕ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು