ವಿಶ್ವವಿದ್ಯಾಲಯದ ಮಹಿಳಾ ಮಹಾವಿದ್ಯಾಲಯ ಮಲ್ಲೇಶ್ವರಂ ಬೆಂಗಳೂರು ಇವರು ಆಯೋಜಿಸಿದ್ದ ರಾಷ್ಟ್ರೀಯ ಸೇವಾಯೋಜನೆಯವಾರ್ಷಿಕ ವಿಶೇಷಶಿಬಿರ 2024, ಈ ಸಮಾರಂಭದ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ದಿನಾಂಕ 14-12- 2024 ರಂದು 3.30 ಗಂಟೆಗೆ ಶ್ರೀಮೇಲಣ ಗವಿ ವೀರಸಿಂಹಾಸನ ಸಂಸ್ಥಾನವರ ಶಿವಗಂಗಾ ಕ್ಷೇತ್ರ ನೆಲಮಂಗಲ ಇಲ್ಲಿ ಭಾಗವಹಿಸಿ “ಸೇವಾಯೋಜನೆಗಳು ಹಾಗೂ ಯುವ ಸಬಲೀಕರಣ” ವಿಷಯವನ್ನು ಕುರಿತು ಸರ್ಕಾರಿ ಸೇವಾ ಯೋಜನೆಗಳು ಹಾಗೂ ಸರ್ಕಾರೇತರ ಸೇವಾಯೋಜನೆಗಳಿಂದ ಪ್ರೇರೇಪಿತರಾಗಬೇಕೆಂದು ವಿವರಿಸಿ ಇಂತಹ ಸೇವೆಗಳ ಅನುಭವ ಮುಂದೆ ಭವಿಷ್ಯತ್ತಿನಲ್ಲಿ ಸ್ವಾವಲಂಬಿಗಳಾಗಲು ದಾರಿದೀಪವಾಗಲಿವೆ ಎಂದು ಸ್ವಯಂಸೇವಕರಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ಎನ್ ಎಸ್ ಎಸ್ ಅಧಿಕಾರಿಗಳಾದ ಶ್ರೀಗಿರೀಶ್ ವೈ ಅವರು ವಿಶೇಷಶಿಬಿರದ ಮಹತ್ವವನ್ನು ತಿಳಿಸಿದರು.. ಕನ್ನಡ ಸಂಘ ಮಹಾಮನೆ ಸಂಚಾಲಕರಾದ ಶ್ರೀಗಿರೀಶ ಪಿ ಹೆಚ್. ಅವರು ಮಾತನಾಡಿ ಯುವಕರು ಶಿಬಿರಗಳಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.. ಹಳೆಯ ವಿದ್ಯಾರ್ಥಿ ಕುಮಾರ ಆಂಟೋನಿ ಪ್ರಕಾಶ್ ಶಿಬಿರಾಧಿಕಾರಿಗಳಾದ ಶ್ರೀ.ದೇವರಾಜು ಕೆ.ಜಿ. ಸಹಾಯಕ ಕಾರ್ಯಕ್ರಮಾಧಿಕಾರಿಗಳಾದ ಕುಮಾರಿ ಅಕ್ಷತಾ ಐಶ್ವರ್ಯ ದೀಪ್ತಿ… ಯಶ್ವಂತ ಎನ್..ಕೆ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *