ಸೈಟ್ ಕೇರ್ ಆಸ್ಪತ್ರೆ ವತಿಯಿಂದ ‘ಕ್ಯಾನ್‌ಕಾನ್ 2024’ ಕ್ಯಾನ್ಸರ್ ಅರಿವು ಸಮಾವೇಶ :

ಯಲಹಂಕ : ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿಯಲ್ಲಿರುವ ಸೈಟ್‌ಕೇರ್ ಆಸ್ಪತ್ರೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ  ‘ಕ್ಯಾನ್‌ಕಾನ್ 2024’ ಕ್ಯಾನ್ಸರ್ ಅರಿವು ಸಮಾವೇಶವನ್ನು ಸೈಟ್‌ಕೇರ್ ಆಸ್ಪತ್ರೆಗಳ ಸಹ-ಸಂಸ್ಥಾಪಕ, ಸಿಇಒ ಡಾ.ಸುರೇಶ್ ರಾಮು ಉದ್ಘಾಟಿಸಿದರು.

ನಂತರ ಅವರು ಮಾತನಾಡಿ “ಬಾಯಿ ಕ್ಯಾನ್ಸರ್ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸಾಂಕ್ರಾಮಿಕ ರೋಗವಾಗಿದ್ದು, ರೋಗದ ಆರಂಭಿಕ ಪತ್ತೆಯು ಫಲಿತಾಂಶಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ‘ಕ್ಯಾನ್‌ಕಾನ್ 2024’ ಸಮಾವೇಶವು ಈ ಸವಾಲನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಅತ್ಯಾಧುನಿಕ ಪರಿಕರಗಳು ಮತ್ತು ಜ್ಞಾನದೊಂದಿಗೆ ವೈದ್ಯಕೀಯ ವೃತ್ತಿಪರರಿಗೆ ಅಧಿಕಾರ ನೀಡುತ್ತದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಭಾರತವು ವಾರ್ಷಿಕವಾಗಿ ಸುಮಾರು 1.2 ಲಕ್ಷ ಹೊಸ ಬಾಯಿ ಕ್ಯಾನ್ಸರ್ ಪ್ರಕರಣಗಳನ್ನು ದಾಖಲಿಸುತ್ತದೆ, ಕಿರಿಯ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ಹರಡುವಿಕೆಯನ್ನು ತಡೆಗಟ್ಟಲು ಅಗತ್ಯ ಜಾಗೃತಿ ಮೂಡಿಸುವ ದಿಸೆಯಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಸೈಟ್ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್, ನಿರ್ದೇಶಕ ಡಾ.ಅಕ್ಷಯ್ ಕುದ್ಪಾಜೆ ಮಾತನಾಡಿ “ಬಾಯಿ ಕ್ಯಾನ್ಸರ್ ನ ನವೀಕೃತ ನಿರ್ವಹಣೆ ‘ಕ್ಯಾನ್‌ಕಾನ್ 2024’ ಸಮಾವೇಶದ ಈ ವರ್ಷದ ವಿಷಯವಾಗಿದ್ದು, ಬಾಯಿಯ ಕುಹರದ ಕ್ಯಾನ್ಸರ್‌ ನ ರೋಗನಿರ್ಣಯ, ಚಿಕಿತ್ಸೆ ಮತ್ತು ನಿರ್ವಹಣೆಯಲ್ಲಿನ ಇತ್ತೀಚಿನ ಪ್ರಗತಿಗಳ ಮೇಲೆ ಈ ಸಮಾವೇಶ ಕೇಂದ್ರೀಕರಿಸಿದೆ. ರೋಗದ ಆರಂಭಿಕ ಪತ್ತೆ, ಶಸ್ತ್ರಚಿಕಿತ್ಸಾ ಮಧ್ಯಸ್ಥಿಕೆಗಳು ಮತ್ತು ರೋಗಿಗಳ ಅಭಿಪ್ರಾಯಗಳ ಆಧಾರದ ಮೇಲೆ ಫಲಿತಾಂಶಗಳಿಗೆ ವಿಶೇಷ ಒತ್ತು ನೀಡುವುದು ಈ ವರ್ಷದ ಸಮಾವೇಶದ ಪ್ರಮುಖ ಧ್ಯೇಯವಾಗಿದೆ.

ಬಾಯಿಯ ಕ್ಯಾನ್ಸರ್ ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಯ ಪ್ರಕಾರ ಜಾಗತಿಕ ಬಾಯಿಯ ಕ್ಯಾನ್ಸರ್ ಪ್ರಕರಣಗಳಲ್ಲಿ ಮೂರನೇ ಒಂದು ಭಾಗವನ್ನು ಭಾರತ  ಹೊಂದಿದೆ. ತಂಬಾಕು ಸೇವನೆ, ಆಲ್ಕೋಹಾಲ್ ಸೇವನೆ, ರೋಗದ ಬಗೆಗಿನ ಕನಿಷ್ಟ ಅರಿವು ಭಾರತದಲ್ಲಿ ಬಾಯಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗಿರಲು ಕಾರಣವಾಗಿದೆ. ಭಾರತದಲ್ಲಿ ಪ್ರತಿ ವರ್ಷ 1.2 ಲಕ್ಷ  ಜನರನ್ನು ಬಾಯಿಯ ಕ್ಯಾನ್ಸರ್ ಬಾಧಿಸುತ್ತಿದೆ,  ‘ಕ್ಯಾನ್‌ಕಾನ್ 2024’ ಸಮಾವೇಶವು ಆರಂಭಿಕ ಸ್ಕ್ರೀನಿಂಗ್ ಮತ್ತು ಚಿಕಿತ್ಸೆಯ ಮೇಲೆ ಹೆಚ್ಚು ಕೇಂದ್ರೀಕರಿಸಿದೆ ಎಂದರು.

ಸಮಾವೇಶದಲ್ಲಿ ಬಾಯಿಯ ಕ್ಯಾನ್ಸರ್‌ ಗೆ ತುತ್ತಾಗಿ, ಸೈಟ್ ಕೇರ್ ಆಸ್ಪತ್ರೆಯಲ್ಲಿ ಯಶಸ್ವೀ ಚಿಜಿತ್ಸೆ ಪಡೆದು,  ಬದುಕುಳಿದಿರುವ ಹಯಾತ್ ಷರೀಫ್ ತಮ್ಮ ಚೇತರಿಕೆ ಕುರಿತು ಸ್ಪೂರ್ತಿದಾಯಕ ಮಾತುಗಳನ್ನು ಹಂಚಿಕೊಂಡರು.

ಸಮಾವೇಶದಲ್ಲಿ ಸಿಡ್ನಿಯ ಸಿಓಬಿಎಲ್ ಎಚ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಕರ್ಸ್ಟನ್ ಪಾಮೆ, ಸೈಟ್ ಕೇರ್ ಆಸ್ಪತ್ರೆಯ ಕಾರ್ಯನಿರ್ವಾಹಕ ಸಹ ಸಂಸ್ಥಾಪಕ ಡಾ.ಫರ್ಝಾನ್, ಕಿದ್ವಾಯ್ ಆಸ್ಪತ್ರೆಯಗ್ರಂಥಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಪ್ಪ ಆರ್. ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *