


ಪದ್ಮಭೂಷಣ ಡಾ ಬಿ ಕೆ ಎಸ್ ಅಯ್ಯಂಗಾರ್ 106ನೇ ಜನ್ಮದಿನಾಚರಣೆ ಮತ್ತು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ
ಕೋಲಾರ : ನೀವುಗಳು ನಮ್ಮ ರಾಜ್ಯದ ಹಾಗೂ ದೇಶದ ಭವಿಷ್ಯ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲ ಕಚಿವರು ಮೌಲ್ಯಮಾಪನ ಡಾ|| ಕೆ. ತಿಪ್ಪೇಸ್ವಾಮಿ ರವರು ತಿಳಿಸಿದರು,
ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮದ ರಮಾಮಣಿ ನಗರದ ಎಸ್ ಆರ್ ಎಸ್ ಐ ಶೈಕ್ಷಣಿಕ ಸಮೂಹ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪದ್ಮಭೂಷಣ ಡಾ || ಬಿಕೆಎಸ್ ಅಯ್ಯಂಗಾರ್ ರವರ 106 ನೇ ಜನ್ಮದಿನಾಚರಣೆ ಮತ್ತು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿ ಮೊದಲು ಏನಾಗಲಿ ಅಥವಾ ಬಿಡಲಿ ಮೊದಲು ಮಾನವನಾಗಬೇಕು, ಇಂದಿನ ಸಮಾಜದಲ್ಲಿ ವಿದ್ಯಾವಂತ ವಿದ್ಯಾರ್ಥಿಗಳ ಅವಶ್ಯಕತೆ ಬಹಳ ಇದ್ದು, ಅವರು ಸಮಾಜಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಬೇಕಾಗಿರುವ ಪರಿಸ್ಥಿತಿ ಬಂದಿದೆ, ಇದು ವಿದ್ಯಾರ್ಥಿಗಳಿಗೆ ಮಹತ್ವದ ಕ್ಷಣವಾಗಿದ್ದು, ಪದವಿ ಪಡೆದವರು ಶಿಕ್ಷಣಕ್ಕೆ ಒತ್ತು ನೀಡಬೇಕು, ಇದು ಆರಂಭ ಹೊರತು ಅಂತ್ಯವಲ್ಲ ತಂತ್ರಜ್ಞಾನ ಮತ್ತು ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತಿ ಆಧುನಿಕ ತಂತ್ರಗಳೊಂದಿಗೆ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕೆಂದು ಸಲಹೆ ನೀಡಿದರು,
ಕೋಲಾರದ ಟಮಕಾದ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜಿನ ಉಪ ಕುಲಪತಿಗಳಾದ ಡಾ ಬಿ. ವೆಂಗಮ್ಮ ಮಾತನಾಡಿ ಮುಂದಿನ ದಿನಗಳಲ್ಲಿ ನೀವು ಕಷ್ಟಪಟ್ಟು ಓದಿದರೆ, ನಿಮ್ಮ ಶ್ರೇಣಿಯನ್ನು ಸುಧಾರಿಸಬಹುದು ನೀವು ಜನರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿದರೆ ನೀವು ಶಿಕ್ಷಣದಲ್ಲಿ ಮುಂದುವರೆಯಲು ಸಹಕಾರಿಯಾಗುತ್ತದೆ, ಮುಂದಿನ ಹಂತಕ್ಕೆ ಶ್ರಮಿಸುವುದು ಮುಖ್ಯ, ನಿಮ್ಮ ಆರೋಗ್ಯ ಸಂಬಂಧಗಳು ಉತ್ತಮವಾಗಿರ ಬೇಕಾದರೆ ಯೋಗವು ಬಹಳ ಮುಖ್ಯವಾಗಿದೆ, ಬಿಕೆಎಸ್ ಅಯ್ಯಂಗಾರ್ ರವರು ಯೋಗ ಕ್ಷೇತ್ರದಲ್ಲಿ ಬಹಳ ಬದಲಾವಣೆ ಮಾಡಿ, ಯೋಗ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ನೆಮ್ಮದಿಯಲ್ಲಿರುವಂತೆ ಸಾಧಿಸಿ ತೋರಿಸಿದ್ದಾರೆ ಎಂದರು,
ಕಾಲೇಜಿನ ಪ್ರಾಂಶುಪಾಲೆ ಛಾಯಾದೇವಿ ಮಾತನಾಡಿ ಮುಂದಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸಿ ಶಾಲೆ ರಾಜ್ಯದ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು, ಗುರೂಜಿ ರವರು ಬಡವರಿಗಾಗಿ ಸ್ಥಾಪಿಸಿದಂತಹ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಎಲ್ಲಾ ರಂಗಗಳಲ್ಲಿಯೂ ಗುರೂಜಿಯವರ ಕನಸನ್ನು ನನಸ್ಸು ಮಾಡಬೇಕೆಂಬು ಉದ್ದೇಶ ಹೊಂದಬೇಕು, ಎಂದರು, ಕಾರ್ಯಕ್ರಮದಲ್ಲಿ ಯೋಗ ವಿದ್ಯಾರ್ಥಿಗಳು ಯೋಗವನ್ನು ಪ್ರದರ್ಶಿಸಿದರು,
ಪದವಿ ಪಡೆದಂತಹ ವಿದ್ಯಾರ್ಥಿಗಳಿಗೆ ಹಾಗೂ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಮತ್ತು ಪದವಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು,
ಈ ಕಾರ್ಯಕ್ರಮದಲ್ಲಿ ಬಿ.ಕೆ.ಎಸ್.ಎಸ್ ನ ವ್ಯವಸ್ಥಾಪಕ ಟ್ರಸ್ಟಿ ಆರ್, ಶರಣ್ ಕುಮಾರ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮಾಹಂತೇಶ್, ಕೋಲಾರ ಕೆಎಸ್ಆರ್ಟಿಸಿ ವಿಭಾಗ ನಿಯಂತ್ರಕರು ಎನ್ ಶ್ರೀನಾಥ್, ಬೋಧಕ ಮತ್ತು ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.