
ಆರ್ಥಿಕ ಬೆಳವಣಿಗೆ, ಬಡವರ ಬದುಕು ರೂಪಿಸುವ ಗುರಿ ಸಹಕಾರ ಸಂಘಗಳ ಧ್ಯೇಯವಾಗಬೇಕು : ಜಕ್ಕೂರು ರವಿಕುಮಾರ್ ಕುಮಾರ್
ಬ್ಯಾಟರಾಯನಪುರ : ಆರ್ಥಿಕ ಬೆಳವಣಿಗೆಯ ಜೊತೆಗೆ ಬಡವರ ಬದುಕು ರೂಪಿಸುವ ಗುರಿಯೊಂದಿಗೆ ಸಹಕಾರ ಸಂಘಗಳು ಕಾರ್ಯ ನಿರ್ವಹಿಸಬೇಕು ಎಂದು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಕ್ಕೂರು ರವಿಕುಮಾರ್ ಅಭಿಪ್ರಾಯಪಟ್ಟರು.
ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೊಸೈಟಿಯ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು ‘ಹೋರಾಟದ ಹಾದಿಯಲ್ಲಿ ಬೆಳೆದು ಬಂದಿರುವ ನಾನು ಬಡವರ ಬದುಕುವ ರೂಪಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಾ ಬಂದಿದ್ದೇನೆ. ಸಹಕಾರ ಸಂಘಗಳು ಆರ್ಥಿಕ ಕ್ಷೇತ್ರದಲ್ಲಿ ಸದೃಢವಾಗಿ ಬೆಳೆಯಬೇಕೆಂಬುದು ಪ್ರಮುಖ ಧ್ಯೇಯವಾಗಿದ್ದರೂ ಸಹ ಅದರೊಟ್ಟಿಗೆ ಬಡವರ ಬದುಕು ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದನ್ನು ತಮ್ಮ ಧ್ಯೇಯವಾಗಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಹೊಸ ವರ್ಷ-2025ರ ಕ್ಯಾಲೆಂಡರ್, ಡೈರಿ ಬಿಡುಗಡೆ ಮಾಡಲಾಯಿತು. ಇದೇ ವೇಳೆ ರವಿಕುಮಾರ್ ಅವರ ಜನ್ಮದಿನದ ಪ್ರಯುಕ್ತ ಹಲವು ಗಣ್ಯರು ಅವರಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ವಿ.ನಾಗರಾಜಪ್ಪ, ನಿರ್ದೇಶಕರಾದ ವಿನೋದ್ ಕುಮಾರ್ ವ್ಯಾಸ, ಬಿ.ಜಿ.ರಮೇಶ್, ರತ್ನಮ್ಮ, ಸುಮಿತ್ರಮ್ಮ, ಆರ್.ವೀಣಾ ವೆಂಕಟೇಶ್, ಬಿ.ಕೆ.ರವೀಂದ್ರನಾಥ್ ಗೌಡ, ಎಸ್.ಮಾರುತಿ, ಸಿ.ಎ.ಚಿಕ್ಕಣ್ಣ, ಬಿ.ಎಂ.ಚಂದ್ರಶೇಖರ್, ಜಿ.ಆಂಜಿನಪ್ಪ, ಇ.ಕೃಷ್ಣಪ್ಪ, ಆರ್.ಮಂಜುನಾಥ್, ಶ್ರೀಮಾಲಾ ವಿ.ಭಟ್, ಎಸ್.ವಿ.ರಾಮಚಂದ್ರಪ್ಪ, ವೆಂಕಟೇಶ್, ಸಿಇಓ ಎಸ್.ಟಿ.ರಾಕೇಶ್, ವ್ಯವಸ್ಥಾಪಕಿ ಯಶೋಧ, ಪರಿಚಾರಕಿ ಕೆ.ಲಾವಣ್ಯ, ಕಾಂಗ್ರೆಸ್ ಮುಖಂಡರಾದ ಎನ್ ಎನ್ ಶ್ರೀನಿವಾಸಯ್ಯ, ತಿರುಮಳಪ್ಪ, ಡಿಎಸ್ಎಸ್ ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್, ಬಿಜೆಪಿ ಮುಖಂಡರಾದ ಅಳ್ಳಾಳಸಂದ್ರ ಸೋಮಶೇಖರ್, ಆವಲಹಳ್ಳಿ ಸುರೇಶ್ ಸೇರಿದಂತೆ ಇನ್ನಿತರರಿದ್ದರು.