ನವರತ್ನ ಪ್ರಿಮಿಯರ್ ಲೀಗ್ ಸೀಸನ್-3 ಕ್ರಿಕೆಟ್ ಪಂದ್ಯಾವಳಿ

ಗ್ರಾಮೀಣ ಕ್ರಿಕೆಟ್ ಗೆ ಐಪಿಎಲ್ ಟಚ್ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ನವರತ್ನ ಅಗ್ರಹಾರ ದಲ್ಲಿ ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ನವರತ್ನ ಪ್ರಿಮಿಯರ್ ಲೀಗ್ (ಎನ್.ಪಿ.ಎಲ್.) ಕ್ರಿಕೆಟ್ ಪಂದ್ಯಾವಳಿಯ 3ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಕಾರ್ಯಕ್ರಮ ವನ್ನು ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಸ್ಥಳೀಯ ಗ್ರಾಮಸ್ಥರಾದ ಎನ್.ಕೆ.ಮಹೇಶ್ ಕುಮಾರ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ‘ನವರತ್ನ ಪ್ರಿಮಿಯರ್ ಲೀಗ್'(ಎನ್.ಪಿ.ಎಲ್) ಕ್ರಿಕೆಟ್ ಪಂದ್ಯಾವಳಿ ಐಪಿಎಲ್ ಮಾದರಿ ಯಲ್ಲೇ ನಡೆಯುವ ರಾಜ್ಯದ ಪ್ರಥಮ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಮೂರನೇ ಆವೃತ್ತಿ ಕ್ರಿಕೆಟ್ ಪಂದ್ಯಾವಳಿಗಾಗಿ ಇಂದು ಹರಾಜು ಪ್ರಕ್ರಿಯೆ ನಡೆಯು ತ್ತಿದ್ದು, ಇದರಲ್ಲಿ ನವರತ್ನ ಲಯನ್ಸ್ (ಸಿ.ಶ್ರೀನಿವಾಸ್), ನವರತ್ನ ಈಗಲ್ಸ್ (ಎ.ಸಿ. ಗೋವಿಂದರಾಜು),ನವರತ್ನ ಟೈಗರ್ಸ್ (ಎಂ.ಶ್ರೀನಿವಾಸ್), ನವರತ್ನ ಕಿಂಗ್ ಫೈಟರ್ಸ್ (ನರಸಿಂಹಯ್ಯ), ನವರತ್ನ ಡೈಮಂಡ್ಸ್ (ಎಸ್.ಪ್ರಕಾಶ್) ಮತ್ತು ನವರತ್ನ ಲೆಜೆಂಡ್ಸ್ (ರಮೇಶ್) ಎಂಬ ಐಪಿಎಲ್ ಮಾದರಿಯ 6 ತಂಡಗಳಿವೆ. ಇಂದು ನಡೆದ ಹರಾಜು ಪ್ರಕ್ರಿಯೆ ಯಲ್ಲಿ ಆರು ತಂಡಗಳ ಮಾಲೀಕರು ಪ್ರತಿ ತಂಡಕ್ಕೆ 15 ಆಟಗಾರರನ್ನು ಬಿಡ್ ಮೂಲಕ ಖರೀದಿಸಿದ್ದು, ಮೂರನೇ ಆವೃತ್ತಿ ಪಂದ್ಯಾವಳಿಗೂ ಮುನ್ನ ನುರಿತ ಕ್ರಿಕೆಟ್ ತರಬೇತುದಾರ ರಿಂದ ಹಲವು ದಿನಗಳ ಕಠಿಣ ತರಬೇತಿ ನೀಡುತ್ತಾರೆ. ನವರತ್ನ ಪ್ರಿಮಿಯರ್ ಲೀಗ್ ನಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರು ನವರತ್ನ ಅಗ್ರಹಾರ ಗ್ರಾಮದವರೇ ಆಗಿರುವುದು ವಿಶೇಷತೆ ಯಾಗಿದೆ. ಗ್ರಾಮದ ಯುವ ಜನತೆಗೆ ಕ್ರೀಡಾ ಪ್ರೋತ್ಸಾಹ ನೀಡುವುದು ನವರತ್ನ ಪ್ರಿಮಿಯರ್ ಲೀಗ್ ಆಯೋಜನೆ ಯ ಪ್ರಮುಖ ಧ್ಯೇಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತಂಡಗಳ ಮಾಲೀಕರಾದ ಸಿ.ಶ್ರೀನಿವಾಸ್, ಎ.ಸಿ.ಗೋವಿಂದರಾಜು, ಎಂ.ಶ್ರೀನಿವಾಸ್, ನರಸಿಂಹಯ್ಯ, ಎಸ್.ಪ್ರಕಾಶ್, ರಮೇಶ್, ತರಬೇತುದಾರರಾದ ಎಸ್ ಎಲ್ ಎನ್ ಲಕ್ಷ್ಮೀನಾರಾಯಣ, ಚಂದ್ರಶೇಖರ್ ಎನ್., ತಂಡಗಳ ಕ್ಯಾಪ್ಪನ್ ಗಳಾದ ಪ್ರದೀಪ್ (ಮುತ್ತು), ಶರತ್, ಆನಂದ್, ಚೇತನ್(ಎಂ.ಎಸ್.ಸಿ.), ಕೇಶವ ಕೆ., ಸುಬ್ರಮಣಿ, ಯುವ ಕಾಂಗ್ರೆಸ್ ಮುಖಂಡರಾದ ಎ.ಜಿ.ರಾಜೇಶ್, ಸತೀಶ್, ಸುನಿಲ್, ಸಂತೋಷ್, ಮೋಹನ್ ಕುಮಾರ್, ಗಜೇಂದ್ರ, ಎ.ಎಚ್. ಮಹೇಶ್, ಮನೋಹರ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *