




ಚೌಡೇಶ್ವರಿ ವಾರ್ಡ್ ಬಿಜೆಪಿ ಮುಖಂಡರಿಂದ ಡಾ.ವಾಣಿಶ್ರೀ ವಿಶ್ವನಾಥ್ ರವರಿಗೆ ಜನ್ಮದಿನದ ಶುಭ ಹಾರೈಕೆ :
ಯಲಹಂಕ : ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್ ಅವರ ಜನ್ಮದಿನದ ಪ್ರಯುಕ್ತ ಯಲಹಂಕ ನಗರ ವ್ಯಾಪ್ತಿಯ ಚೌಡೇಶ್ವರಿ ವಾರ್ಡ್-2 ಬಿಜೆಪಿ ಮುಖಂಡರು, ಕಾರ್ಯಕರ್ತರು ಯಲಹಂಕ ನಗರ ಮಂಡಲ ಬಿಜೆಪಿ ಉಪಾಧ್ಯಕ್ಷ ಎ.ಎಸ್.ರಾಜ ಮತ್ತು ಬಿಜೆಪಿ ಮುಖಂಡರಾದ ಜಿ.ಈಶ್ವರಪ್ಪ ಅವರ ನೇತೃತ್ವದಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ಅವರಿಗೆ ಗೌರವ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ಶಾಸಕರು, ಬಿಡಿಎ ಮಾಜಿ ಅಧ್ಯಕ್ಷರಾದ ಎಸ್.ಆರ್. ವಿಶ್ವನಾಥ್, ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಚೌಡೇಶ್ವರಿ ವಾರ್ಡ್ ಬಿಜೆಪಿ ಮುಖಂಡರಾದ ಕೆ.ವಿ.ರವಿಶಂಕರ್, ಎ.ಎಸ್.ರಾಮದಾಸ್, ಆರ್.ನಾರಾಯಣ, ಜಿ.ಶಂಕರಪ್ಪ, ಬಿ.ವಿ.ಕೃಷ್ಣಮೂರ್ತಿ, ಬಿ.ಹರಿನಾಥ್, ವೇಣುಗೋಪಾಲ್, ನಾಗೇನಹಳ್ಳಿ ಶಿವಕುಮಾರ್, ಸಾಮಾಜಿಕ ಜಾಲ ತಾಣ ವಿಭಾಗದ ದಾಮೋದರ್, ಸುನಿಲ್ ಕುಮಾರ್, ಜಿ.ಹರಿಕೃಷ್ಣ, ಬಿ.ಸಿ.ಮಂಜುನಾಥ್, ಜಿ.ಎಂ. ಕುಮಾರ್, ಎ.ಎನ್.ರಾಜಣ್ಣ, ಬಿ.ಕೇಶವ, ಧನಂಜಯ, ಆಂಜಿ, ದೇವರಾಜ್, ನಾಗ, ಮಹಿಳಾ ಮುಖಂಡರಾದ ಜಮುನಾ, ನಾಗರತ್ನ ಸೇರಿದಂತೆ ಇನ್ನಿತರರಿದ್ದು, ಡಾ.ವಾಣಿಶ್ರೀ ವಿಶ್ವನಾಥ್ ಅವರಿಗೆ ಜನ್ಮದಿನದ ಶುಭ ಹಾರೈಸಿದರು.