













‘ಅನಂತ ವಿಶ್ವಮ್ ಪ್ರಾಪರ್ಟೀಸ್’ ಕಚೇರಿ
ಉದ್ಘಾಟನೆ :ನೂತನ ಕಚೇರಿ ಉದ್ಘಾಟಿಸಿದ ಮೇಜರ್ ಗಣಪತಿ ಹೆಗ್ಡೆ :
ಯಲಹಂಕ : ಯಲಹಂಕ ನಗರ ಮಂಡಲ ಬಿಜೆಪಿ ಸಾಮಾಜಿಕ ಜಾಲ ತಾಣ ಪ್ರಕೋಷ್ಠದ ಮುಖ್ಯ ಸಂಚಾಲಕರು, ‘ಟೀಮ್ ಯೋಧನಮನ’ ಸಂಚಾಲಕರು ಹಾಗೂ ಹಿಂದೂಪರ ಸಂಘಟನೆಯ ಮುಖಂಡರಾದ ದಾಮೋದರ್ ಅವರ ಸಾರಥ್ಯದಲ್ಲಿ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಯಲಹಂಕದ ಕಾಮಾಕ್ಷಮ್ಮ ಬಡಾವಣೆಯಲ್ಲಿ ಸಜ್ಜಾಗೊಂಡಿರುವ ‘ಅನಂತ ‘ವಿಶ್ವಮ್ ಪ್ರಾಪೆರ್ಟೀಸ್’ ಸಂಸ್ಥೆಯ ನೂತನ ಕಚೇರಿಯನ್ನು ನಿ.ಮೇಜರ್ ಗಣಪತಿ ಹೆಗ್ಡೆ ಅವರು ಶುಕ್ರವಾರ ಸಂಜೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ‘ಹಿಂದೂ ಧರ್ಮ ಮತ್ತು ರಾಷ್ಟ್ರದ ಹಿತರಕ್ಷಣೆಯ ನಿಟ್ಟಿನಲ್ಲಿ ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಾಮೋದರ್ ಅವರು ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿರುವುದು ಸಂತೋಷದ ಸಂಗತಿ, ಇದಕ್ಕೆ ನಮ್ಮ ಅಗತ್ಯ ಸಹಕಾರ ಇರಲಿದೆ.
ಇದುವರೆಗೂ ನೈತಿಕಶಕ್ತಿಯ ಹಾದಿಯಲ್ಲಿ ಸಾಗುತ್ತಿದ್ದ ದಾಮೋದರ್ ಅವರು ಆರ್ಥಿಕ ಶಕ್ತಿಯತ್ತ ಗಮನ ಹರಿಸಿ, ಹೊಸ ಕಚೇರಿ ಉದ್ಘಾಟಿಸಿರುವುದು ಉತ್ತಮ ಬೆಳವಣಿಗೆ. ರಾಷ್ಟ್ರೀಯವಾದಿ ಮತ್ತು ಹಿಂದೂಪರ ಚಿಂತನೆಯುಳ್ಳ ಇಂತಹ ಯುವಕರು ಆರ್ಥಿಕ ಶಕ್ತಿಯಾಗಿ ಬೆಳೆದರೆ ಇವರಿಗಷ್ಟೇ ಒಳಿತಾಗುವುದಿಲ್ಲ ಬದಲಿಗೆ ರಾಷ್ಟ್ರೀಯವಾದಿ ಮತ್ತು ಹಿಂದೂಪರ ಚಿಂತನೆಗಳಿಗೆ ಹೊಸದೊಂದು ಶಕ್ತಿ ತುಂಬಿದಂತಾಗುತ್ತದೆ, ಎಲ್ಲರ ಸಹಕಾರ ಇವರಿಗೆ ಇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯವಾದಿ ಚಿಂತನೆಗಳ ಪ್ರಚಾರ ಕಾರ್ಯದಲ್ಲಿ ತೊಡಗಿರುವ ‘ಭಾರತ್ ಭಾರತಿ ಫೌಂಡೇಶನ್’ ನ ಸಂಚಾಲಕರಾದ ಅನಿತಾ ಆಚಾರ್ಯ, ಸಮಾಜ ಸೇವಕರಾದ ರಘುಪತಿ ಆಚಾರ್ಯ, ರಾಷ್ಟ್ರ ರಕ್ಷಣಾ ಪಡೆಯ ಮುಖ್ಯ ಸಂಚಾಲಕ ಪುನೀತ್ ಕೆರೆಹಳ್ಳಿ, ಚೌಡೇಶ್ವರಿ ವಾರ್ಡ್ ನ ಬಿಜೆಪಿ ಮುಖಂಡರಾದ ಎ.ಎಸ್.ರಾಜ, ಈಶ್ವರಪ್ಪ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮ ವಿಕಾಸ ಪ್ರಾಂತ ಸಹ ಸಂಯೋಜಕ, ಜಾಲಹಳ್ಳಿ ನಗರ ಸರಸಂಘ ಚಾಲಕರು, ಸ್ಪಿನ್ ಸಮೂಹ ಸಂಸ್ಥೆ ಮಾಲೀಕರು ಮಾಲೀಕರಾದ ನಾಮದೇವ್, ಯಲಹಂಕದ ಮಾರುತಿ ನಗರದ ಸರಸಂಘ ಚಾಲಕರಾದ ಲಕ್ಷ್ಮಿ ನಾರಾಯಣ್, ನಿವೃತ್ತ ಯೋಧರಾದ ಜಯರಾಮ್, ಟೀಮ್ ಯೋಧ ನಮನ ಸದಸ್ಯರಾದ ಬಿ.ಎಲ್.ಸೂರಿ, ಧನು, ಅಂಜಿ, ಕೆ.ಸಿ.ಬಾಲಾಜಿ, ಪರಶುರಾಮ್, ಸಿಟಿ ವೆಂಕಟೇಶ್, ಅಕುಲಪ್ಪರೆಡ್ಡಿ, ಸಂತೋಷ್, ಬಿ.ವಿ.ಎಸ್.ಮಂಜು, ಈಶ್ವರ್, ಪ್ರಪಂಚ ಚಿರಂಜೀವಿ ಯುವ ಸೇನಾ ಅಧ್ಯಕ್ಷರಾದ ಪುರುಷೋತ್ತಮ್, ಅನಂತ ವಿಶ್ವಮ್ ಪ್ರಾಪರ್ಟೀಸ್ ನ ಅಮರೇಶ್ವರ್ ವರ್ಮಾ, ದೇವರಾಜ್ ಸೇರಿದಂತೆ ಇನ್ನಿತರರಿದ್ದರು.
ಅನಂತ ವಿಶ್ವಮ್ ಪ್ರಾಪರ್ಟೀಸ್ ನ ಉದ್ಘಾಟನೆಗೆ ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್.ಆರ್.ವಿಶ್ವನಾಥ್, ಬಿಜೆಪಿ ಯುವ ಮುಖಂಡರಾದ ಅಲೋಕ್ ವಿಶ್ವನಾಥ್ ಅವರು ತಮ್ಮ ಅನುಪಸ್ಥಿತಿಯಲ್ಲಿ ಕರೆ ಮಾಡಿ ಶುಭ ಹಾರೈಸಿದ್ದಾರೆ.