




ಬಾಗಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ವೆಂಕಟರಾಜು ಅವಿರೋಧ ಆಯ್ಕೆ :
ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ಬಾಗಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ವೆಂಕಟರಾಜು ಉಪಾಧ್ಯಕ್ಷರಾಗಿ ಸಿ.ಶಿವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಾಗಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು 11 ಮಂದಿ ಸದಸ್ಯರಿದ್ದು, ಭಾನುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕ್ರಮವಾಗಿ ಎ.ವೆಂಕಟರಾಜು ಅಧ್ಯಕ್ಷರಾಗಿ, ಸಿ.ಶಿವಣ್ಣ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಈ ವೇಳೆ ನೂತನ ಅಧ್ಯಕ್ಷ ಎ.ವೆಂಕಟರಾಜು ಮಾತನಾಡಿ ‘ಸಹಕಾರ ಸಂಘದ ನೂತನ ನಿರ್ದೇಶಕರ ಆಯ್ಕೆಗಾಗಿ ನಮ್ಮ ತಂಡವನ್ನು ಬೆಂಬಲಿಸಿ, ಅಗತ್ಯ ಸಲಹೆ, ಮಾರ್ಗದರ್ಶನ ನೀಡಿರುವ ಸಚಿವ ಕೃಷ್ಣಬೈರೇಗೌಡರಿಗೆ, ನಮ್ಮ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿರುವ ಬಾಗಲೂರು ಗ್ರಾ.ಪಂ.ಅಧ್ಯಕ್ಷರಾದ ಎ.ಕೆಂಪೇಗೌಡರು, ಮಾಜಿ
ಅಧ್ಯಕ್ಷರಾದ ಡಿ.ಜಗನ್ನಾಥ್, ಅನಿಲ್ ಕುಮಾರ್ ಮತ್ತು ತಂಡದವರಿಗೆ ಅನಂತ ಧನ್ಯವಾದಗಳು. ಹಾಗೆಯೇ ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಾವು ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿರುವ ಸಂಘದ ಎಲ್ಲಾ ನಿರ್ದೇಶಕರಿಗೆ ಚಿರ ಋಣಿಯಾಗಿರುತ್ತೇನೆ. ಸಹಕಾರ ಸಂಘದ ಸರ್ವಾಂಗೀಣ ಪ್ರಗತಿಯ ದಿಸೆಯಲ್ಲಿ ನಮ್ಮ ಮೇಲೆ ಹಲವು ನಿರೀಕ್ಷೆಗಳಿವೆ, ವಿಶೇಷವಾಗಿ ಸಹಕಾರ ಸಂಘದ ಆಸ್ತಿಗಳ ಪೋಡಿ ಅಗಬೇಕಿದೆ, ಕೆಲವು ಆಸ್ತಿಗಳ ಖಾತೆ ಬಾಕಿ ಇದೆ, ಹಾಗೆಯೇ ಸಹಕಾರ ಸಂಘಕ್ಕೆ ನೂತನ ಕಟ್ಟಡ ನಿರ್ಮಿಸಬೇಕಿದೆ ಇವುಗಳನ್ನು ಆಧ್ಯತೆಯ ಮೇರೆಗೆ ಕೈಗೊಳ್ಳಲು ಶ್ರಮಿಸಲಾಗುವುದು. ನಮ್ಮ ಅಧಿಕಾರದ ಅವಧಿಯಲ್ಲಿ ಸಹಕಾರ ಸಂಘದ ಅಭಿವೃದ್ಧಿಗಾಗಿ ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಬಾಗಲೂರು ಗ್ರಾಮದ ಹಲವು ಮುಖಂಡರು, ಸಹಕಾರ ಸಂಘದ ನಿರ್ದೇಶಕರು, ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬಾಗಲೂರು ಗ್ರಾ.ಪಂ.ಅ಼ಧ್ಯಕ್ಷ ಎ.ಕೆಂಪೇಗೌಡ, ಮಾಜಿ ಅಧ್ಯಕ್ಷ ಡಿ.ಜಗನ್ನಾಥ್, ಗ್ರಾ.ಪಂ.ಸದಸ್ಯರಾದ ಅನಿಲ್ ಕುಮಾರ್, ಪ್ರಭುಸ್ವಾಮಿ, ಸುಧೀಂದ್ರ, ಧನಂಜಯ, ಮುಖಂಡರಾದ ಎ.ಮೂರ್ತಿ, ಬಿ.ಎಸ್.ಪಿಳ್ಳೇಗೌಡ, ಬಿ.ಸಿ.ಪಿಳ್ಳೇಗೌಡ, ಬಿ.ಸಿ.ಮಂಜುನಾಥ್, ಟಿ.ವೆಂಕಟೇಶ್, ಮುನಿನಾರಾಯಣಪ್ಪ, ಬಿ.ಸಿ.ನಾಗರಾಜ್, ಸೈಯದ್ ಶಬ್ಬೀರ್, ನವಾಜ್, ಸಲ್ಲಪ್ಪ, ಮೌಲಾ ಅಲಿ, ಚಾಂದ್ ಪಾಷಾ, ಸಹಕಾರ ಸಂಘದ ನಿರ್ದೇಶಕರಾದ ಪ್ರಕಾಶ್ ಎನ್., ಎಸ್.ಯಶವಂತ, ಬಿ.ಎಸ್.ಹರ್ಷ, ಬಿ.ಆರ್.ಹನುಮಂತಗೌಡ, ಆನಂದಮ್ಮ, ಎಚ್.ಕೆ.ನಾಗರತ್ನ, ಮಹಮ್ಮದ್ ಮಜರ್, ಶಿವಪ್ರಕಾಶ್, ನವೀನ್ ಕುಮಾರ್ ಬಿ.ಎನ್. ಉಪಸ್ಥಿತರಿದ್ದರು.