




ಮಕ್ಕಳಲ್ಲಿ ಕ್ರೀಡಾಮನೋಭಾವನೆ ಬೆಳೆಸುವುದು ಶಾಲೆ ಹಾಗೂ ಪೋಷಕರ ಕರ್ತವ್ಯ . _ಶ್ರೀಮತಿ ಪ್ರಮೀಳಾ ರಾಜೇಶ್ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ವ್ಯಸನಿಗಳಾಗಿ ಆಟಗಳನ್ನು ಆಡುವುದು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಎಂದರೆ ತಪ್ಪಾಗಲಾರದು. ಇದನ್ನು ತಪ್ಪಿಸಿ ಮಕ್ಕಳು ಆಟಗಳಲ್ಲಿ ಭಾಗವಹಿಸುವಂತೆ ಮಾಡುವುದು ಎಲ್ಲ ಶಾಲೆಗಳು ಹಾಗೂ ಪೋಷಕರ ಕರ್ತವ್ಯವಾಗಿದೆ ಎಂದು ಆಕ್ಸ್ಫರ್ಡ್ ಶಾಲೆ ಹಾಗೂ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಹೇಳಿದರು. ಅವರು 1.2.25 ಶನಿವಾರದಂದು ನಡೆದ ಆಕ್ಸ್ಫರ್ಡ್ ಆಂಗ್ಲ ಶಾಲೆಯಲ್ಲಿ ನಡೆದ ಕ್ರೀಡಾ ಕೂಟವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಂದುವರೆದ ಅವರು ಕ್ರೀಡೆಗಳು ಮಕ್ಕಳ ಮನಸ್ಸನ್ನು ಹಾಗೂ ದೇಹವನ್ನು ಚುರುಕುಗೊಳಿಸಿ ಸ್ವಾಸ್ಥ್ಯವನ್ನು ಕಾಪಾಡುತ್ತದೆ ಆದ್ದರಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವನೆಯನ್ನು ಬೆಳೆಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ಹೂಪ್ಸ್ದೊಂದಿಗೆ ಬಾಲ್, ಜಿಗಿತ, ಕಪ್ಪೆ ಜಿಗಿತ, 100 ಮೀಟರ್ 200 ಮೀಟರ್ ಓಟದ ಸ್ಪರ್ಧೆ, ತ್ರೋಬಾಲ್, ಹ್ಯಾಂಡ್ ಬಾಲ್, ಗುಂಡು ಎಸೆತ, ಬುಕ್ ಬ್ಯಾಲೆನ್ಸಿಂಗ್ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ವಿಜೇತರಾದ ಮಕ್ಕಳಿಗೆ ಆಕ್ಸ್ಫರ್ಡ್ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಬಹುಮಾನ ವಿತರಿಸಿದರು.
ಡಾ. ರಾಜು ಸಾರ್ , ಶ್ರೀಮತಿ ಶೋಭರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲ ಶಿಕ್ಷಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.