
ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ‘ಮಾರೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಚನ್ನಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ಮಂಜುನಾಥ್ ಪಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿ ಯಾರೂ ಸ್ಪರ್ಧಿಸದ ಕಾರಣದಿಂದ ಸರ್ವಾನುಮತದಿಂದ ಚನ್ನಲಕ್ಷ್ಮಮ್ಮ ಅಧ್ಯಕ್ಷರಾಗಿ, ಮಂಜುನಾಥ್ ಪಿ. ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರ ಆಯ್ಕೆಗಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲಾ 11 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಸಹಕಾರ ಸಂಘ ಕಾಂಗ್ರೆಸ್ ತೆಕ್ಕೆಗೆ ಜಾರಿತ್ತು.
ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಹಲವು ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಅಭಿನಂದಿಸಿ, ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ತಾಲ್ಲೂಕು ಭೂನ್ಯಾಯ ಮಂಡಳಿ ಸದಸ್ಯರು, ತಾ.ಪಂ.ಮಾಜಿ ಅಧ್ಯಕ್ಷರಾದ ನಾಗರಾಜ್, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ (ಪುಟ್ಟು), ಚೊಕ್ಕನಹಳ್ಳಿ ನಂಜೇಗೌಡ, ಡಿ.ಎಂ.ಚೌಡಪ್ಪ, ಗ್ರಾ.ಪಂ.ಹಾಲಿ ಅಧ್ಯಕ್ಷ ಪಿ.ರಾಹುಲ್, ಸದಸ್ಯರಾದ ಗೀತಾ ಆನಂದ್ ಕುಮಾರ್ ಸಹಕಾರ ಸಂಘದ ನಿರ್ದೇಶಕರಾದ ಮುನಿರಾಜು ಸಿ., ಜಗದೀಶ್ ಎನ್., ನಂಜಪ್ಪ, ಚಿಕ್ಕಪ್ಪಯ್ಯ ಸಿ.ಕೆ., ಸತೀಶ್ ಜೆ., ರಾಜಣ್ಣ ಎಚ್., ಬಾಲರಾಜು ವಿ., ಮುನೇಗೌಡ, ಭಾಗ್ಯಮ್ಮ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಲೋಕೇಶ್, ಎಂ ಆರ್ ಎಸ್ ವಿಶ್ವ, ದಾಸನಾಯಕನಹಳ್ಳಿ ಗೋಪಾಲ್, ಮಂಜುನಾಥ್ (ಪೊಲೀಸ್), ಎಂ.ಪಿ. ವಿಶ್ವನಾಥ್, ಯುವ ಮುಖಂಡರಾದ ಮುರಳಿ(ಬಾಬು), ಚೊಕ್ಕನಹಳ್ಳಿ ಮುರಳಿ, ಎಂ.ಆರ್.ಕೆ.ಕುಮಾರ್, ಶರತ್ ಸೇರಿದಂತೆ ಗ್ರಾಮಸ್ಥರಿದ್ದರು.