ರೈತರ ಸೇವಾ ಸಹಕಾರ ಸಂಘನಿ. ಸಿಂಗನಾಯಕನಹಳ್ಳಿ ಅಧ್ಯಕ್ಷರಾಗಿ ಡಾ.ವಾಣಿಶ್ರೀ ವಿಶ್ವನಾಥ್ ಅವಿರೋಧ ಆಯ್ಕೆ : 

ಯಲಹಂಕ : ಕ್ಷೇತ್ರದ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆಗಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ಅವರು ಸತತ 5ನೇ ಬಾರಿಗೆ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 ಹಾಗೆಯೇ 2025-30ರ ಅವಧಿಗೆ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ಅವರ ನೇತೃತ್ವದ 12 ಜನ ಹಾಲಿ ನಿರ್ದೇಶಕರ ತಂಡ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸತತ ಐದನೆಯ ಬಾರಿಗೆ ಸಹಕಾರ ಸಂಘವು ಬಿಜೆಪಿ ತೆಕ್ಕೆಗೆ ಜಾರಿದೆ.

 ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ರವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಮತ್ತು ಅಧ್ಯಕ್ಷರ ಆಯ್ಕೆ ಚುನಾವಣೆ ನಡೆದಿತ್ತು. ಇದರಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ಅವರ ನೇತೃತ್ವದ 12 ಜನ ಹಾಲಿ ನಿರ್ದೇಶಕರ ತಂಡ ಅವಿರೋಧವಾಗಿ ಆಯ್ಕೆಯಾಗಿದ್ದು, ಬುಧವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ಅವರು ಅಧ್ಯಕ್ಷರಾಗಿ 5ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಹಕಾರ ಸಂಘದ ಚುನಾವಣಾ ಇತಿಹಾಸದಲ್ಲಿ ರಾಜ್ಯದಲ್ಲೇ ಹೊಸದೊಂದು ಮೈಲುಗಲ್ಲು ಮೂಡಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡಾ.ವಾಣಿಶ್ರೀ ವಿಶ್ವನಾಥ್ ಮಾತನಾಡಿ ‘ಸತತ ಐದನೆಯ ಬಾರಿಗೆ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಈ ಕ್ಷಣ  ಒಂದು ಅಪೂರ್ವ ಕ್ಷಣವಾಗಿದೆ. ಸಹಕಾರ ಸಂಘದ ಎಲ್ಲಾ 12 ನಿರ್ದೇಶಕರನ್ನು ಅವಿರೋಧವಾಗಿ ಪುನರಾಯ್ಕೆ ಮಾಡಿರುವುದು, ಅದೇ ರೀತಿ ಸತತ 5ನೇ ಬಾರಿಗೆ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿರುವ ಮುಖಂಡರು, ಮತದಾರರು, ಸಹಕಾರ ಸಂಘದ ಸದಸ್ಯರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲಿಚ್ಛಿಸುತ್ತೇನೆ.

ಸಹಕಾರ ಸಂಘದಲ್ಲಿ 7 ಸಾವಿರಕ್ಕೂ ಹೆಚ್ಚು ಷೇರುದಾರರಿದ್ದು, ವಾರ್ಷಿಕವಾಗಿ1200 ಕೋಟಿ ರು.ಗಳಷ್ಟು ವಹಿವಾಟು ನಡೆಯುತ್ತದೆ. ಸುಮಾರು 300 ಕೋಟಿ ರು.ಗಳಷ್ಟು ಠೇವಣಿ ಹೊಂದಿರುವ ನಮ್ಮ ಸಹಕಾರ ಸಂಘವು ಕಳೆದ ವರ್ಷ 6 ಕೋಟಿ ರು.ಗಳಷ್ಟು ಲಾಭ ಗಳಿಸಿತ್ತು, ಮುಂದಿನ ಆರ್ಥಿಕ ವರ್ಷದಲ್ಲಿ 8 ಕೋಟಿ ರು.ಲಾಭ ಗಳಿಸುವ ನಿರೀಕ್ಷೆಯಿದೆ. ಸಹಕಾರ ಸಂಘದ ವತಿಯಿಂದ 12 ಸಾವಿರ ಜನರಿಗೆ ಉಚಿತ ಪಡಿತರ ಧಾನ್ಯ ವಿತರಿಸಲಾಗುತ್ತಿದ್ದು, ಇದನ್ನು ಇನ್ನೂ ಹೆಚ್ಚಿಸಬೇಕೆಂಬ ಇಂಗಿತವಿದೆ. ಸಹಕಾರ ಸಂಘದ ವತಿಯಿಂದ ಹೆಚ್ಚಿನ ರೈತರು, ಆರ್ಥಿಕವಾಗಿ ದುರ್ಬಲರಿರುವ ಕಾರ್ಮಿಕರು, ವಿಶೇಷವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ದಿಸೆಯಲ್ಲಿ ಸಹಕಾರ ಸಂಘ ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದೆ. ನಮ್ಮ ಸಹಕಾರ ಸಂಘದ ಈ ಮಟ್ಟಿನ ಯಶಸ್ಸಿಗೆ ಕಾರಣಕರ್ತರಾದ ಎಲ್ಲಾ ನಿರ್ದೇಶಕರು, ಷೇರುದಾರರು, ಠೇವಣಿದಾರರು, ಸಹಕಾರ ಸಂಘದ ಸಿಬ್ಬಂದಿಗಳು ಸೇರಿದಂತೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿರುವ ಎಲ್ಲರಿಗೂ ಈ ಶುಭ ಸಂದರ್ಭದಲ್ಲಿ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ ಎಂದರು.

ಶಾಸಕ ಎಸ್ ಆರ್ ವಿಶ್ವನಾಥ್ ಅವರು ಸಹಕಾರ ಸಂಘದ ನೂತನ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ಅಭಿನಂದಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಅಲೋಕ್ ವಿಶ್ವನಾಥ್, ಬಿಜೆಪಿ ಮುಖಂಡರಾದ  ಎಸ್ ಎನ್ ರಾಜಣ್ಣ, ದಿಬ್ಬೂರು ಜಯಣ್ಣ, ಡಿ.ಜಿ‌.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಸತೀಶ್ ಕಡತನಮಲೆ, ವಿ.ಪವನ್ ಕುಮಾರ್, ಈಶ್ವರ್, ಸೋಮಶೇಖರ್, ಶಿವಮಾದು, ಎಚ್.ಸಿ.ರಾಜೇಶ್, ಪಿ.ಕೆ.ರಾಜಣ್ಣ,  ಶ್ರೀನಿವಾಸಯ್ಯ, ಲಿಂಗನಹಳ್ಳಿ ವೆಂಕಟೇಶ್, ಜಗದೀಶ್, ವಿ.ವಿ‌.ರಾಮಮೂರ್ತಿ, ನರಸಿಂಹಮೂರ್ತಿ, ನಾರಾಯಣ ಸ್ವಾಮಿ, ರಾಜಣ್ಣ, ಟಿ.ಮುನಿರೆಡ್ಡಿ, ವಸಂತ್ ಅರಕೆರೆ, ಎಸ್ ಜಿ ಪ್ರಶಾಂತ್ ರೆಡ್ಡಿ, ಕಿರಣ್, ಲಕ್ಷ್ಮೀಪತಿಗೌಡ, ಮುನಿದಾಸಪ್ಪ, ಸಿಂಗನಾಯಕನಹಳ್ಳಿ ಗ್ರಾ.ಪಂ‌.ಅಧ್ಯಕ್ಷೆ ಅಮರಾವತಮ್ಮ, ಸಿಂಗನಾಯಕ ನಹಳ್ಳಿ ರೈತರ ಸೇವಾ ಸಹಕಾರ ಸಂಘದ ನೂತನ ನಿರ್ದೇಶಕರಾದ ಎ.ತಿಮ್ಮರಾಯಿಗೌಡ, ಕೆ.ಆರ್.ಪುಟ್ಟರಾಜು, ಎಂ.ಮಂಜುನಾಥ್, ಎನ್.ಶಿವಕುಮಾರ್, ಎಂ.ಪಿ.ಈಶ್ವರಾಚಾರ್, ಎಸ್ ಎನ್ ರಾಮಚಂದ್ರರೆಡ್ಡಿ, ಪುಷ್ಪಲತ ಚಂದ್ರಶೇಖರ್, ಎನ್.ಮುನಿಯಪ್ಪ ಕೂರ್ಲಪ್ಪ, ವೈ.ಕೆ.ಮುರಾರಿ ರಾಮು, ಎನ್.ಎ.ಚಂದ್ರು, ಅಮರಾವತಿ, ಸಹಕಾರ ಸಂಘದ ಸಿಇಓ ಶಶಿಧರ್ ಸೇರಿದಂತೆ ಅಪಾರ ಸಂಖ್ಯೆಯ ಬಿಜೆಪಿ ಮುಖಂಡರು, ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *