2.5 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಕೃಷ್ಣಬೈರೇಗೌಡ ಚಾಲನೆ :

ಬ್ಯಾಟರಾಯನಪುರ : ಕ್ಷೇತ್ರದ ಮಾರೇನಹಳ್ಳಿ ಗ್ರಾಮದಲ್ಲಿ  2.5 ಕೋಟಿ ರು.ಅಂದಾಜು ವೆಚ್ಚದಲ್ಲಿ ಬಾಗಲೂರು-ಮಾರೇನಹಳ್ಳಿ ಮುಖ್ಯರಸ್ತೆ ಅಭಿವೃದ್ಧಿಗೆ ಸಚಿವ ಕೃಷ್ಣಬೈರೇಗೌಡ ಶನಿವಾರ ಚಾಲನೆ ನೀಡಿದರು.

ಇದೇ ವೇಳೆ ಮಾರೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಕಾಂಗ್ರೆಸ್ ಮುಖಂಡರಾದ ದಾಸನಾಯಕ ನಹಳ್ಳಿ ಜಗದೀಶ್ ಎನ್. ಅವರಿಗೆ ಸಚಿವ ಕೃಷ್ಣಬೈರೇಗೌಡ ಜನ್ಮದಿನದ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿತಾ.ಪಂ.ಮಾಜಿ ಅಧ್ಯಕ್ಷರು, ಭೂನ್ಯಾಯ ಮಂಡಳಿ ಸದಸ್ಯರಾದ ನಾಗರಾಜ್, ಮಾರೇನಹಳ್ಳಿ ಗ್ರಾ.ಪ.ಸದಸ್ಯರು, ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು), ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್,  ಮಾರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಪಿ.ರಾಹುಲ್, ಮಾಜಿ ಅಧ್ಯಕ್ಷರಾದ ಚೊಕ್ಕನಹಳ್ಳಿ ನಂಜೇಗೌಡ, ಡಿ.ಎಂ.ಚೌಡಪ್ಪ, ಹೊಸಹಳ್ಳಿ ಮುನಿರಾಜಪ್ಪ, ವೆಂಕಟಸ್ವಾಮಿ,  ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡರಾದ ಜಯಕುಮಾರ್, ಮರಳಕುಂಟೆ ಸುರೇಶ್, ಮುನಿರಾಮಣ್ಣ (ಎಂ.ಆರ್.), ರಮೇಶ್, ಬೈರೇಗೌಡ, ಸಾತನೂರು ಮುನಿರಾಜು, ದಾಸನಾಯಕನಹಳ್ಳಿ ಗೋಪಾಲ್, ಮಂಜುನಾಥ್ (ಪೊಲೀಸ್),  ಬಲ್ಲಯ್ಯ, ಗೋಪಾಲಪುರ ಸತೀಶ್, ಅವಿನಾಶ್, ಮಂಜುನಾಥ್, ರಂಜಿತ್, ಸುಂದರೇಶ್, ವಿಶ್ವನಾಥ್,  ಮಾರೇನಹಳ್ಳಿ ವಿಎಸ್ಎಸ್ಎನ್ ನಿರ್ದೇಶಕರಾದ ನಂಜಪ್ಪ, ಜಗದೀಶ್, ಚಿಕ್ಕಪ್ಪಯ್ಯ, ಸಿ.ಮುನಿರಾಜು, ಬೈರಪ್ಪ, ಡೈರಿ ರಾಜಣ್ಣ, ಜೆ.ಸತೀಶ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *