ಬ್ಯಾಟರಾಯನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಿಜೆಪಿ ತೆಕ್ಕೆಗೆ  :

ಬ್ಯಾಟರಾಯನಪುರ : ಕ್ಷೇತ್ರದ ‘ಬ್ಯಾಟರಾಯನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿದ್ದ ಎ.ಮೋಹನ್ ರಾಜ್ ಅವರ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ತಂಡದ 9 ಅಭ್ಯರ್ಥಿ ಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಸಹಕಾರ ಸಂಘವು ಬಿಜೆಪಿ ಪಾಲಾಗಿದೆ.

ಒಟ್ಟು12 ಸದಸ್ಯ ಬಲ ಹೊಂದಿರುವ ಬ್ಯಾಟರಾಯನ ಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಎ.ಮೋಹನ್ ರಾಜ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಎ.ಮೋಹನ್ ರಾಜ್, ಎಸ್.ಸೋಮಶೇಖರ್, ಅಶೋಕ್ ಗೌಡ, ಮುನೇಗೌಡ, ಬಿ.ಎಸ್.ರಾಜಶೇಖರ್, ಕಾರ್ತಿಕ್, ಸರೋಜಮ್ಮ, ಕಾಂತರಾಜು, ಮಂಜುನಾಥ್ ಎನ್. ಗೆಲುವು ಸಾಧಿಸಿ ಸಹಕಾರ ಸಂಘದ ನೂತನ ನಿರ್ದೇಶಕರಾಗಿ‌ ಆಯ್ಕೆಯಾಗಿದ್ದಾರೆ.

ಉಳಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದ ಭಾಸ್ಕರ್ ಸಿ., ಶ್ರೀನಾಥ್, ಅನುರಾಧ ಕೆ.,ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಪ್ರಾಭಲ್ಯವಿರುವ ಬ್ಯಾಟರಾಯನಪುರ ಕ್ಷೇತ್ರದಲ್ಲಿ ‘ಬ್ಯಾಟರಾಯನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ ಬಿಜೆಪಿ ತೆಕ್ಕೆಗೆ ಜಾರಿರುವುದು ಹೊಸದೊಂದು ಮೈಲುಗಲ್ಲು ಸಾಧಿಸಿದಂತಾಗಿದೆ.

ಬಿಜೆಪಿ ಬೆಂಬಲಿತ ನೂತನ ನಿರ್ದೇಶಕರನ್ನು ಬಿಜೆಪಿ ಮುಖಂಡರು, ಸ್ಥಳೀಯ ಗ್ರಾಮಸ್ಥರು ಗೌರವಿಸಿ, ಅಭಿನಂದಿಸಿದರು.

Leave a Reply

Your email address will not be published. Required fields are marked *