
ಸಾಧನೆಗಳ ಸರದಾರ,
ಡಿ.ದೇವರಜ್ ಅರಸ್.
111 ನೇ ಜನ್ಮದಿನಾಚರಣೆ.
ಬಾದಾಮಿ 20.ಸ್ಥಳಿಯ ಶ್ರೀ ಶಿವಶರಣ ಹರಳಯ್ಯ ಸಮಗಾರ ಸಮಾಜ ವತಿಯಿಂದ ದೇವರಾಜ್ ಅರಸ್ ಅವರ ಜನ್ಮದಿನಾಚರಣೆಯನ್ನು ಸಮಾಜದ ಅಧ್ಯಕ್ಷ ನಾಗರಾಜ ಹ ಹೊಸಮನಿ. ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನೆರವೇರಿಸಿದರು.
ದೇವರಾಜ್ ಅರಸ್ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಎರಡು ಅವಧಿ ಕಾರ್ಯ ನಿರ್ವಹಿಸಿದ್ದಾರೆ.ಉಳುವವನೇ ಹೊಲದೊಡೆಯ ಕಾನೂನು ಜಾರಿಗೆ ತಂದರು.ಅಸ್ಪೃಶ್ಯರಿಗೆ ಭೂಮಿ, ಉಚಿತ ಶಿಕ್ಷಣ, ಭೂಸುಧಾರಣೆ ಕಾಯ್ದೆ, ಸಾಮಾಜಿಕ ನ್ಯಾಯ ಮೊದಲಾದವು ಇವರು ನೀಡಿದ ಕೊಡುಗೆಗಳಾಗಿದ್ದು, ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಾಗರಾಜ ಹೊಸಮನಿ ಮುಂದುವರೆದು ಮಾತನಾಡಿದರು.ಈ ಸಂದರ್ಭದಲ್ಲಿ ಸಮಾಜದ ಹಿರಿಯರು ಹಾಗೂ ಪದಾಧಿಕಾರಿಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು.
