ಬೀದರ ನಗರದ ಮೈಲೂರ ವೃತ್ತದನವ ನವಜೀವನ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ವಿಜೃಂಭಣೆಯಿAದ ಆಚರಿಸಲಾಯಿತು.
ಧ್ವಜಾರೋಹಣ ನೆರೆವರಿಸಿ ಮಾತನಡಿದ ಎನ್.ಎಸ್.ಎಸ್. ಅಧಿಕಾರಿಗಳಶದ ಪ್ರೊ. ಮಲ್ಲಿಕಾರ್ಜುನ ಪಾಟೀಲ ಅವರು ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನವು 1950ರ ಜನವರಿ 26ರಂದು ಜಾರಿಗೆ ಬಂದಿತು. 1946ರ ಡಿಸೆಂಬರ್ 9ರಂದು ಭಾರತದ ಮೊಟ್ಟ ಮೊದಲ ಸಂವಿಧಾನ ಸಂಬAಧಿ ಸಭೆ ನಡೆಸಲಾಯಿತು. 1949ರ ನವೆಂಬರ್ 26ರಂದು ಅಂತಿಮ ಬಾರಿ ಸಭೆ ಸೇರಿತು. ಈ ದಿನವನ್ನು ಸಂವಿಧಾನ ದಿನವಾಗಿಯೂ ಆಚರಿಸಲಾಗುತ್ತದೆ ಎಮದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮತನಾಡಿದ ಅನೀಲಕುಮಾರ ಬೆಲ್ದಾರ್ ಅವರು ಡಾ. ಬಾಬಾ ಸಾಹೇಬ ಅಂಬೇಡ್ಕರ ಸಂವಿಧಾನದ ಪಿತಾಮಹರಾಗಿದ್ದಾರೆ, 75 ವರ್ಷಗಳು ಕಳೆದಿರುತ್ತವೆ. ಸಂವಿಧಾನವನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಕಾಶಿನಾಥ ನೌಬಾದೆ, ಅಥಿತಿಯಾಗಿ ಆಗಮಿಸಿದ ಸಮಾಜ ಸೇವಕರಾದ ಅನೀಲಕುಮಾರ ಕಪಲಾಪೂರ ಚಿದ್ರಿ ವೇದಿಕೆಯನ್ನು ಉದ್ದೇಶಿಸಿ ಮಾತನಡಿದ್ದರು.
ಇದೇ ಸಂದರ್ಭದಲ್ಲಿ ವಿಶೇಷ ಮಕ್ಕಳ ಮುಖ್ಯ ಗುರುಗಳಾದ ಪ್ರವೀಣ ಪಾಟೀಲ, ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕರಾದ ಮಲಾಕಿ ಮೈಕಲ್, ಆಪ್ತ ಸಮಾಲೋಚಕರಾದ ರೇಣುಕಾ, ಬಾಲಾಜಿ, ರೈಚಲ್ ರಾಣಿ, ಶಿಕ್ಷಕರಾದ ನಾಗನಾಥ, ಚಂದ್ರಶೇಖರ ಪಾಟೀಲ, ಸಂತೋಷ ಬಿರಾದಾರ, ಸುಮನ, ಸುಭಾಷ ರೆಡ್ಡಿ, ಸಂತೋಷ ಸೋನಾರೆ, ಮಾರುತಿ ಕಾಂಬಳೆ ಹಾಗೂ ವಿಶೇಷ ಮಕ್ಕಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಸ್ವಾಗತವನ್ನು ವಿಜಯಲಕ್ಷಿö್ಮ ಮಾಡಿದರು, ವಂದನಾರ್ಪಣೆಯನ್ನು ರೇಣುಕಾ ರವರು ನೆರವೇರಿಸಿಕೊಟ್ಟರು, ವಂದನಾರ್ಪಣೆಯನ್ನು ಸುಮನ ರವರು ನೆರವೇರಿಸಿಕೊಟ್ಟರು.

Leave a Reply

Your email address will not be published. Required fields are marked *