ಯಲಹಂಕ ಕೋಗಿಲು ರಸ್ತೆ ಶ್ರೀನಿವಾಸಪುರದಲ್ಲಿರುವ ಆಕ್ಸ್ಫರ್ಡ್ ಶಾಲಾ ಕಾಲೇಜು 75ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು

ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆ ಎಂದರೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಮಾಡಲಾಯಿತು ಹಾಗೂ ಶಾಲಾ ಶಿಕ್ಷಕಿಯರಾದ ಪೌಸೀಯಾ ಮೇಡಂ ಮತ್ತು ಮಾನಸ ಮೇಡಂ ಅವರ ನೃತ್ಯ ಮಾರ್ಗದರ್ಶನದೊಂದಿಗೆ ಭಾರತೀಯ ಸೊಬಗಿನ್ನು ಬೆಳಗಿಸಿತು. ಶಾಲಾ ಕನ್ನಡ ಶಿಕ್ಷಕರ ಮಾರ್ಗದರ್ಶನದೊಂದಿಗೆ ಪ್ರಾಥಮಿಕ ಬಾಲಕರ ಪೀರಮಿಡ್ಎಲ್ಲರ ಗಮನ ಸೆಳೆಯಿತು. ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಕ್ಕಳಿಗೆ ರಾಷ್ಟ್ರನಾಯಕರ ಚಿತ್ರ ಪರಿಚಯ ಮಾಡುವುದರೊಂದಿಗೆ ಎಲ್ಲರನ್ನು ಬೆರಗುಗೊಳಿಸಿತು.

ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಬಂದ ಅತಿಥಿಗಳಿಗೆ ಶುಭಾಶಯ ಕೋರುವುದರೊಂದಿಗೆ ಸಾಮಾನ್ಯ ಜ್ಞಾನ ಪ್ರಶ್ನೆಗಳಾದ ಹಾಲಿ ರಾಷ್ಟ್ರಪತಿಯ ಹೆಸರೇನು ಸಂವಿಧಾನದ ಶಿಲ್ಪಿ ಯಾರು? ಈ ಬಾರಿ ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ಬಂದ ವಿದೇಶಿ ಅತಿಥಿ ಯಾರು? ಕೇಳುತ್ತಾ ಪ್ರಶ್ನೆಗೆ ಉತ್ತರ ಸಿಕ್ಕ ವಿದ್ಯಾರ್ಥಿಗಳಿಗೆ ಅಭಿನಂದಿಸುವುದರೊಂದಿಗೆ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗದೆ ಸಾಮಾನ್ಯ ಜ್ಞಾನದ ಅವಶ್ಯಕತೆ ಇದೆ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಸಿಹಿ ಹಂಚುವುದರೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು

Leave a Reply

Your email address will not be published. Required fields are marked *