Category: Blog

Your blog category

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಸೇವೆ ಅವಶ್ಯಕ: ಸಚಿವ ಸಂತೋಷ ಲಾಡ್

ಧಾರವಾಡ:- ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು. ನಗರದ ಜೆ.ಎಸ್.ಎಸ್. ಕಾಲೇಜಿನ ಸನ್ನಿಧಿ…

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಸೇವೆ ಅವಶ್ಯಕ: ಸಚಿವ ಸಂತೋಷ ಲಾಡ್

ಧಾರವಾಡ:- ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು. ನಗರದ ಜೆ.ಎಸ್.ಎಸ್. ಕಾಲೇಜಿನ ಸನ್ನಿಧಿ…

ಭೈರಿದೇವರಕೊಪ್ಪ ಮಾಯಕಾರ ಕಾಂಪ್ಲೆಕ್ಸ್ ಉದ್ಘಾಟನೆ .
** ಹುಬ್ಬಳ್ಳಿ :- ಬೈರಿದೇವರಕೊಪ್ಪ ಮಾಯಕಾರ ಸ್ಟೋನ್ ಪ್ಲಂಬರ ಮತ್ತು ಹಾರ್ಡವೇರ್ ಕಟ್ಟಡ ಕಾಮಗಾರಿಯ ಎಲ್ಲಾ ಪರಿಕರಗಳ ಮಳಿಗೆ ಉದ್ಘಾಟನೆ ಬೈರಿದೇವರಕೊಪ್ಪದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳವರ ತಪೋಭೂಮಿ ಶಿವಾನಂದ ಮಠದ ಹಿಂಭಾಗದ ರೇಣುಕಾ ನಗರ ಮುಖ್ಯ ರಸ್ತೆಗೆ ಹೊಂದಿ ಮಾಯಕರ ಸ್ಟೋನ್ ಪ್ಲಂಬರ್ ಮತ್ತು ಹಾರ್ಡ್
ವೇರ್ ನೂತನ ಮಳಿಗೆಯ ಪೂಜಾ ಸಮಾರಂಭವು ಇಂದು ಅದ್ದೂರಿಯಾಗಿ ಜರುಗಿತು ಹಳೇ ಹುಬ್ಬಳ್ಳಿ ಆನಂದನಗರ ರಸ್ತೆ ರಾಜವಿದ್ಯಾಶ್ರಮದ ಪೂಜ್ಯ ನವ ಭಾರತ ಭೂಷಣ ಶ್ರೀ ಷಡಕ್ಷರಿ ಮಹಾಸ್ವಾಮಿಗಳವರ ಸನ್ನಿಧಾನದಲ್ಲಿ ಜರುಗಿತು.
ನಂತರ ಪೂಜ್ಯರಿಗೆ ಶಿವಾನಂದ ಮಾಯಕಾರ ದಂಪತಿಗಳು ಪರಿವಾರದವರು ಅವರು ಶಾಲಹೊದಿಸಿ ಫಲಪುಷ್ಪ ದೊಂದಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ,ಗಣ್ಯರಾದ ವೆಂಕನಗೌಡ ಕಂಟೆಪ್ಪಗೌಡರ ,ಬಸವರಾಜ ಬಿರಾದಾರ, ಶಿವಬಸವ ಗಚ್ಚನವರ, ವಿರೂಪಾಕ್ಷಯ್ಯ ಜಂಗಿನಮಠ ,ಬಸವರಾಜ ಮಾಯಕಾರ, ವಿನಾಯಕ ಮಾಯಕಾರ ,ಪ್ರಕಾಶ್ ಪಾಟೀಲ, ಕಲ್ಲಪ್ಪ ಸಿಸನಳ್ಳಿ ,ಚಂದ್ರಣ್ಣ ಉಣಕಲ, ಕೊಪ್ಪದಶೆಟ್ರು ಕಿರಣ ಮಾಯಕಾರ, ಸಂಪತ್ ಮಾಯಕಾರ…

ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಿ
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿನ್ನಣ್ಣವರ ಆರ್. ಎಸ್

ಹುಬ್ಬಳ್ಳಿ:- ರೈತರು ಮತ್ತು ಬ್ಯಾಂಕಿನವರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ರಾಜಿ ಸಂಧಾನ ಕಾರ್ಯಕ್ರಮ ಸಹಕಾರಿಯಾಗಿದೆ. ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿನ್ನಣ್ಣವರ ಆರ್.…

ಛಾಯಾಚಿತ್ರ ಶೀರ್ಷಿಕೆ: ನೀಲಿ ಆಕಾಶಕ್ಕಾಗಿ ಶುದ್ದ ಗಾಳಿಯ ಅಂತರಾಷ್ಟ್ರೀಯ ದಿನಾಚರಣೆಯನ್ನು ಸೆಪ್ಟೆಂಬರ್ 07 ರಂದು ರಾಯಾಪುರದ ವಾಹನಗಳ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪರಿಸರ ಅಧಿಕಾರಿ ಸೈಯದ ಖಾಜಾ ಮೊಹಿನುದ್ದಿನ, ಪರಿಸರ ಅಧಿಕಾರಿ ಜಗದೀಶ ಐ. ಹೆಚ್, ಸಾರಿಗೆ ಇನ್ಸ್‍ಪೇಕ್ಟರ್‍ಗಳಾದ ರಮೇಶ ಮಾಳಗಿ, ಬೆಲ್ಲದ ಬನಹಟ್ಟಿ, ಹಾಗೂ ಇತರರು ಭಾಗವಹಿಸಿದ್ದರು.

ನವೆಂಬರ್ 26 ರಂದು ಬೆಳಗಾವಿಯಲ್ಲಿ ಮಾಜಿ ಸೈನಿಕರ
ಹಾಗೂ ಅವರ ಅವಲಂಬಿತರ ಕುಂದು ಕೊರತೆ ಸಭೆ

ಧಾರವಾಡ:- ಬೆಳಗಾವಿ ನಗರದ ಮರಾಠಾ ಲೈಟ್ ಇನಫೆಂಟ್ರಿ, ಶಿವಾಜಿ ಸ್ಟೇಡಿಯಂನಲಿ,್ಲ ನವೆಂಬರ 26 ರಂದು ಬೆಳಿಗ್ಗೆ 8-30 ರಿಂದ ಸಂಜೆ 4 ಗಂಟೆವರೆಗೆ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳ ಕುಂದು ಕೊರತೆ ನಿವಾರಣಾ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮಾಜಿ…

ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಎಟಿ & ಟಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ವತಿಯಿಂದ ಕಿರು ವಿಜ್ಞಾನ ಮೇಳ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ : ದಿನಾಂಕ :7/9/2023ನೇ ಗುರುವಾರ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಎಟಿ & ಟಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ನೆಲಮಂಗಲ ವಿಭಾಗದ ವತಿಯಿಂದ ಜಿಎಚ್ಎಸ್ ಪ್ರೌಢಶಾಲೆ ಯಂಟಗಾನಹಳ್ಳಿ ಈ ಶಾಲೆಯಲ್ಲಿ ಕಿರು ವಿಜ್ಞಾನ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಟ್ಟು 50 ವಿಜ್ಞಾನ ಮಾದರಿಗಳನ್ನು 62 ಮಾರ್ಗದರ್ಶಕರಿಂದ ವಿವರಣೆಯನ್ನು ಮಾಡಿಸಲಾಯಿತು. ಈ ಕಾರ್ಯಕ್ರಮವನ್ನು ಮುಖ್ಯೋಪಾಧ್ಯರಾದಂತಹ ಶ್ರೀಮತಿ ಶಾರದಾ (ಎಚ್ .ಎಂ.ಜಿಎಚ್ಎಸ್ ಯಂಟಗಾನಹಳ್ಳಿ ಶಾಲೆ)ಇವರು ಉದ್ಘಾಟಿಸಿದರು. ನಂತರ ಕಾರ್ಯಕ್ರಮದ ಬಗ್ಗೆ ಉತ್ತಮ ಮಾತುಗಳನ್ನು ಆಡಿದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು ಹಾಗೂ ಅಗಸ್ತ್ಯ ಕಾರ್ಯ ವೈಖರಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ 3 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು ಒಟ್ಟಾರೆ 53 ಮಾರ್ಗದರ್ಶಕರು 613 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರು 10 ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ವಲಯ ಅಧಿಕಾರಿಯಾದ ಶ್ರೀಯುತ ಮಂಜುನಾಥ್ ರವರು ಹಾಗೂ .ಅಗಸ್ತ್ಯ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಶ್ರೀಯುತ ಮೌನೇಶ್‍ರವರು, ಐ ಎಂ ಟಿ ಮಹೇಶ್ ರವರು ಯೋಗೇಶ್ ಮತ್ತು ಮೋಹನ್ ರವರು ಉಪಸ್ಥಿತರಿದ್ದರು.

ಹೊಸಕೋಟೆ ತಾ.ಪ್ರಾಥಮಿಕ ಆರೋಗ್ಯ ಕೇಂದ್ರ ನಂದಗುಡಿ,ಸುಗುಣ ಫುಡ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ” ರಕ್ತದಾನ ಶಿಬಿರ ” ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ನಂದಗುಡಿ ಹಾಗೂ ಸುಗುಣ ಫುಡ್ ಪ್ರೈವೇಟ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ " ರಕ್ತದಾನ ಶಿಬಿರ " ವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್ ರವರು ಮಾತನಾಡುತ್ತಾ ಜಗತ್ತಿನ ವೈದ್ಯಕೀಯ ರಂಗದಲ್ಲಿ ಒಬ್ಬರ ರಕ್ತವನ್ನು ಇನ್ನೊಬ್ಬರ ದೇಹಕ್ಕೆ ವರ್ಗಾಯಿಸುವ ಪ್ರಕ್ರಿಯೆಯೇ ಮಹತ್ತರವಾದ ಅನ್ವೇಷಣೆ ಮತ್ತು ರಕ್ತದಾನ - ಶ್ರೇಷ್ಠದಾನ ಎಂದೂ, ರಕ್ತಕ್ಕೆ ಪರ್ಯಾಯವಾದ ಇನ್ನೊಂದು ವಸ್ತುವಿಲ್ಲವೆಂದು ಹಾಗಾಗಿ ಸಾರ್ವಜನಿಕರು ಮುಕ್ತವಾಗಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ ಭಾಸ್ಕರ್ ರೆಡ್ಡಿ, ಮತ್ತು ಬೆಂಗಳೂರು ಸರ್ ಸಿವಿ ರಾಮನ್ ಸಾರ್ವಜನಿಕ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಮುಖ್ಯಸ್ಥರಾದ ಡಾ. ಶೀಲಾ ಮತ್ತು ಸುನಿಲ್ ಆಚಾರ್ಯರ ತಂಡ ಆಂಬುಲೆನ್ಸ್ ವಾಹನದೊಂದಿಗೆ ಆಗಮಿಸಿ, ಶಿಷ್ಟಾಚಾರದಂತೆ ಕ್ರಮಬದ್ಧವಾಗಿ ರಕ್ತ ಸಂಗ್ರಹಿಸಿ, ಅಭಿನಂದನ ಪ್ರಮಾಣ ಪತ್ರವನ್ನು ರಕ್ತ ದಾನಿಗಳಿಗೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಹೊಸಕೋಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಸತೀಶ್ ರವರ ನಿರ್ದೇಶನದ ಮೇರೆಗೆ ರಕ್ತನಿಧಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಯಾದ ಶ್ರೀ ಸುಭಾನ್, ತಾಲೂಕು ಕ್ಷಯ ರೋಗ ಘಟಕದ ಚಿಕಿತ್ಸಾ ಮೇಲ್ವಿಚಾರಕರಾದ ಮುಖ್ಯಸ್ಥರಾದ ಶ್ರೀ ಸುದೀಪ್ ಮತ್ತು ಆಪ್ತ ಸಮಾಲೋಚಕರಾದ ಶ್ರೀಮತಿ ಅಂಬಿಕಾ ಹಾಜರಿದ್ದು, ಹೆಚ್ಐವಿ ಏಡ್ಸ್ ಕುರಿತಂತೆ ಆರೋಗ್ಯ ಶಿಕ್ಷಣ ನೀಡಿದರು. ಸದರಿ ರಕ್ತದಾನ ಶಿಬಿರದಲ್ಲಿ ಒಟ್ಟು 47 ಯೂನಿಟ್ (350 ಎಮ್ ಲ್ ರಂತೆ ) ರಕ್ತ ಸಂಗ್ರಹಿಸಲಾಯಿತು.ಶಿಬಿರದಲ್ಲಿ ಪಾಲ್ಗೊಂಡ ಸರ್ವರಿಗೂ ಹಣ್ಣುಗಳು, ಬಾದಾಮಿ ಹಾಲು ಮತ್ತು ಊಟ ದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಟೇಕ್ವಾಂಡೋ ಕ್ರೀಡಾಪಟು ಲಕ್ಷ್ಮಿಗೆ ಪಕ್ಷ ಮಹಿಳಾ ಸಂಘದಿಂದ ಸತ್ಕಾರ

ಮೂಡಲಗಿ: ಲೆಬೆನಾನದಲ್ಲಿ ದೇಶದಲ್ಲಿ ಸೆ.8 ರಿಂದ 11 ರವರಿಗೆ ಜರುಗಲಿರುವ ಅಂತರ್‌ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಪ್ಯಾರಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪ ರಡರಟ್ಟಿಯನ್ನು ಪಟ್ಟಣದ ಲಕ್ಷ್ಮೀ ನಗರದ ಪಕ್ಷ ಮಹಿಳಾ ಸಂಘದವರು ಸತ್ಕರಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ಸುಧಾ ಕೊಕಟನೂರ…

ಶುದ್ಧ ಕುಡಿಯುವ ನೀರಿನ ಘಟಕಗಳ ಮಾಲೀಕರು ಎಚ್ಚರಿಕೆ ವಹಿಸಲಿ: ಕೆಜಿಎಫ್: ಮಲೀನಗೊಂಡ ನೀರು ಸೇವಿಸಿದರೆ ಅತಿಸಾರ, ಡೆಂಗ್ಯೂ, ಟೇಪ್ಹಾಯ್ಡ್ ಚಿಕನ್ ಗುನ್ಯಾ, ದಂತಹ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ. ಕುಡಿಯುವ ನೀರಿನ ಘಟಕಗಳ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಬಿ.ನಾಗವೇಣಿ ತಿಳಿಸಿದರು. ಕೆಜಿಎಫ್ ತಾಲೂಕ್ ಆಡಳಿತ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನಧಿಕೃತವಾಗಿ ಕುಡಿಯುವ ನೀರಿನ ಮಾರಾಟ. ಕೆರೆ ಪಕ್ಕದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸುವುದು, ಚರಂಡಿಗಳ ಪಕ್ಕದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಿ ನೀರು ಪೂರೈಕೆ ಮಾಡುವವರ ಮೇಲೆ ಕ್ರಮ ಜರಗಿಸಲಾಗುವುದು ಎಂದರು. ಸಾರ್ವಜನಿಕರಿಗೆ ಕುಡಿಯುವ ನೀರು ಮಾರಾಟ ಮಾಡುವವರು ಆ ನೀರು ಕುಡಿಯಲು ಯೋಗ್ಯ ಇದೆಯೇ ಎಂಬುದನ್ನು ಪರೀಕ್ಷೆ ಮಾಡಿಸಿಕೊಳ್ಳಿ, ಯೋಗ್ಯವಲ್ಲದ ನೀರನ್ನು ಕ್ಲೋರಿ ನೀ ಕರೆಸಿ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕವಷ್ಟೇ ಸರೋಜನಿಕರಿಗೆ ಮಾರಾಟ ಮಾಡಬೇಕು . ಒಂದು ವೇಳೆ ಕುಡಿಯುವ ನೀರಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರಿದ್ದಲ್ಲಿ ಅಂತಹ ನೀರಿನ ಘಟಕಗಳ ಮಾಲೀಕರ ಮೇಲೆ ಕ್ರಿಮಿನಲ್ ಮೊ ಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ನಗರದಲ್ಲಿ ಕುಡಿಯುವ ನೀರು ಮಾರಾಟ ಮಾಡುವವರು ತಿಂಗಳಗೊಮ್ಮೆ ನೀರಿನ ಪರೀಕ್ಷೆ ಮಾಡಿಸಿಕೊಳ್ಳಿ ಶೇಕಡ 2.3ರಷ್ಟು ಮಾದರಿಗಳಲ್ಲಿ ಎಸ್ ಎಸ್ ಪಿ ಪಿ ಕಂಡು ಬಂದರೆ ಕುಡಿಯಲು ನೀರು ಯೋಗ್ಯವಾಗಿರುವುದಿಲ್ಲ. ಇಂತಹ ನೀರನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಯೋಗ್ಯವಾಗಿರುವುದಿಲ್ಲ ಆದ್ದರಿಂದ ಅಂತಹ ನೀರನ್ನು ಮಾರಾಟ ಮಾಡಬೇಡಿ ಎಂದು ಹೇಳಿದರು. ನಗರದ ಹಲವು ಬಡಾವಣೆಗಳಲ್ಲಿ ಖಾಸಗಿ ವ್ಯಕ್ತಿಗಳು ನಗರಸಭೆ ಅಥವಾ ಜಲ ಮಂಡಳಿಯಿಂದ ಯಾವುದೇ ಪರವಾನಗಿ ಪಡೆಯದೆ ಆರ್ ಓ ಪ್ಲಾಂಟ್ಗಳನ್ನು ಸ್ಥಾಪಿಸಿಕೊಂಡು ಕುಡಿಯುವ ನೀರನ್ನು ಮಾರಾಟ ಮಾಡುತ್ತಿದ್ದು, ಅಂತಹ ಆರ್ ಓ ಘಟಕಗಳ ವಿರುದ್ಧ ಸಂಬಂಧ ಪಟ್ಟ ಇಲಾಖೆಯವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರಿಂದ ದೂರುಗಳು ಬಂದಿವೆ ಎಂದರು.