ಬೀದರ ನಗರದ ಚಿದ್ರಿ ರಸ್ತೆಯಲ್ಲಿರುವ ಕ.ವಿ.ಪ್ರ.ನಿ ನೌಕರರ ಸಭಾ ಭವನದಲ್ಲಿ ಸೆ.17 ರಂದು ಕರ್ನಾಟಕ ವಿದ್ಯುತ ಪ್ರಸರಣ ನಿಗಮ ನೌಕರರ ಪತ್ತಿನ ಸಹಕಾರ ಸಂಘ/ಜೇಸ್ಕA ನೌಕರರ ಪತ್ತಿನ ಸಹಕಾರ ಸಂಘದ 40ನೇ ವಾರ್ಷಿಕ ಮಹಾಸಭೆಯು ಜರುಗಿತ್ತು.
ಸಭೆಯ ಅಧ್ಯಕ್ಷತೆ ಕ.ವಿ.ಪ್ರ.ನಿ./ಜೇಸ್ಕಂ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಹೇಶ ಘಾಳೆ ಅಧ್ಯಕ್ಷತೆ ವಹಿಸಿದರು.
ಅಧ್ಯಕ್ಷರಾದ ಮಹೇಶ ಘಾಳೆ, ಉಪಾಧ್ಯಕ್ಷರಾದ ರಾಜಕುಮಾರ ಕರಣೆ, ಮತ್ತು ಸಂಘದ ನಿರ್ದೇಶಕರು ಹಾಗೂ ಅಧಿಕಾರಿಗಳು ಜ್ಯೋತಿ ಬೆಳಗಿಸುವ ಮುಖಾಂತರ ಸಭೆಯು ಉದ್ಘಾಟಿಸಲಾಯಿತು.
ಅಧ್ಯಕ್ಷರಾದ ಮಹೇಶ ಘಾಳೆ ಅವರು 40ನೇ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಮತ್ತು ಸಂಘಕ್ಕೆ 2022-23ನೇ ಸಾಲಿನ ನಿವ್ವಳ ಲಾಭ ರೂ.2,50,94,518.88 ಆಗಿದೆ ಮತ್ತು ಶೇ12%ಪ್ರತಿಶತ ಲಾಭಾಂಶ ವಿತರಿಸಲಾಗುವದು ಎಂದು ತಿಳಿಸಿದರು. ವರದಿ ಮೇಲೆ ದೀರ್ಘವಾಗಿ ಚರ್ಚಿಸಿ ಸದಸ್ಯರು ಸಭೆಗೆ ಒಪ್ಪಿಗೆ ನೀಡಿದರು.
ಈ ಸಂದರ್ಭದಲ್ಲಿ ಕ.ವಿ.ಪ್ರ.ನಿ. ನೌಕರರ ಸಂಘದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಭೆಯಲ್ಲಿ ಭರತ ಭೂಷಣ, ಕವಿರಾಜ, ರಾಜಕುಮಾರ ರಟಕಲೆ, ರಾಜೇಂದ್ರ, ವಿಠಲ,ಪರಮೇಶ, ಮಲ್ಲಿಕಾರ್ಜುನ ಕಟಗಿ, ಥಾಮಸ, ಧನಶೇಟ್ಟಿ, ಶ್ರೀಮತಿ ಸಕೀನಾ ಬಾನು ಎಲ್ಲಾ ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸಿದರು. ಹಾಗೂ ವಂದನಾರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
