Month: January 2024

Public power. R Hanumanthu. 9845085793. ಬಂದನ್ ಬ್ಯಾಂಕ್ ಉದ್ಘಾಟನೆ ಡಾ. ಶೀಲಾ ದೇವಿಎಸ್ ಮಳಿಮಠ – ಪ್ರಾಂಶುಪಾಲರು

ರಾಜಾಜಿನಗರದಲ್ಲಿ ಪ್ರತಿಷ್ಠಿತ ಆರ್ಥಿಕ ವ್ಯವಸ್ಥೆಗೆ ಭದ್ರ ಬುನಾದಿಯಂತಿರುವ ಬಂದನ್ ಬ್ಯಾಂಕ್ ನ 28ನೇ ಬ್ರ್ಯಾಂಚ್ ಸ್ಥಾಪನೆಯಾಯ್ತು ದಿನಾಂಕ 30 – 12 – 2023ರ ಶನಿವಾರ 11 ಗಂಟೆಗೆ ರಾಜಾಜಿನಗರದ ಮುಖ್ಯವಾಹಿನಿಯಾಗಿ ಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ…

ಕೋರೆಗಾಂವ್ ವಿಜಯಸ್ತಂಭ ಸ್ವರಚಿತ ಚಿತ್ರಕವನ ಸ್ಪರ್ಧೆಯಲ್ಲಿ ಕುಮಾರಗೆ ಪ್ರಥಮ ರವಿಗೆ ದ್ವೀತಿಯ ಸುಹೇಚಗೆ ತೃತೀಯ ಬಹುಮಾನ ಧಾರವಾಡದ ಗಣಕರಂಗವು ಮಾನವ ಸಮಾನತೆಗಾಗಿ ೦೧ ಜನವರಿ 1818 ರಲ್ಲಿ ಪೇಶ್ವೆ ಮತ್ತು ಮಹಾರ್ ಯೋಧದರ ನಡುವೆ ನಡೆದ ನಿರ್ಣಾಯಕ ಐತಿಹಾಸಿಕ ಕದನದ ನಿಮಿತ್ತ 2೦6ನೇ ಭೀಮಾ ಕೊರೆಗಾವ್ ಶೌರ್ಯ ದಿನ ಆಚರಣೆ ಪ್ರಯುಕ್ತ 'ಕೋರೆಗಾಂವ್ ವಿಜಯಸ್ತಂಬ ಚಿತ್ರಕವನ ಸ್ಪರ್ಧೆ' ಗೂಗಲ್ ಮೀಟ್ ಕಾರ್ಯಕ್ರಮವನ್ನು ೦1 ಜನವರಿ 2024ರ ಸಂಜೆ 7 ಗಂಟೆಯಿಂದ 9 ಗಂಟೆವರೆಗೆ ಗೂಗಲ್ ಮೀಟ್ ನಲ್ಲಿ ಆಯೋಜಿಸಲಾಗಿತ್ತು. ನಾಡಿನ ವಿವಿಧ ಜಿಲ್ಲೆಗಳಿಂದ 64 ಕವಿ ಕವಯತ್ರಿಯರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಹಾಸನದ ಕುಮಾರ್ ಚಲವಾದಿಯವರ ವಿಜಯಸ್ತಂಭದ ಸ್ವಗತ, ಹುಬ್ಬಳ್ಳಿಯ ರವಿ ಚಲವಾದಿಯವರ ಮೂಲನಿವಾಸಿಗಳ ವಿಜಯ ಹಾಗೂ ಸುಹೇಚ ಪರಮವಾಡಿ ಕಾವ್ಯನಾಮದ ಸುಭಾಷ್ ಚವ್ಹಾಣ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದಿದ್ದು; ವಿಜೇತ ಕವಿಮಹನೀಯರಿಗೆ ಅನುಕ್ರಮವಾಗಿ ₹ 1೦೦೦, ₹5೦೦, ₹3೦೦, ನಗದು ಹಾಗೂ ಇ - ಪ್ರಮಾಣ ಪತ್ರಗಳ ಜೊತೆಗೆ ಪುಸ್ತಕ ಬಹುಮಾನಗಳನ್ನು ನೀಡಿ ಅಭಿನಂದಿಸಲಾಗುದೆ. ತೀರ್ಪುಗಾರರ ಮೆಚ್ಚುಗೆ ಸ್ಥಾನವನ್ನು ಪಡೆದಿರುವಂತಹ ಮಂಡ್ಯದ ಸುಮನ್ ರಾವರವರ 'ಜೀವಂತ ಸಾಕ್ಷಿ', ಹುನುಗುಂದದ ಡಾಕ್ಟರ್ ನಾಗರತ್ನ ಭಾವಿಕಟ್ಟಿ ಅವರ 'ವಿಜಯ ಸ್ಮರಣೆ', ಕಾರ್ಕಳದ ಡಾ. ಸುಮತಿ ಪಿ ಅವರ 'ಆತ್ಮ ಗೌರವದ ಸಂಕೇತ', ಹುಬ್ಬಳ್ಳಿಯ ಪದ್ಮಜಾ ಉಮರ್ಜಿ ಅವರ 'ಮಾನವತೆ ಸಾರುವ ಸ್ತಂಭ', ಕಾರವಾರದ ದ್ಯಾವಪ್ಪ ಮಾದರ ಅವರ 'ಕೋರೆಗಾಂವ್ ವಿಜಯಸ್ತಂಭ', ಮಂಗಳೂರಿನ ಡಾ. ಸುರೇಶ್ ನೆಗಳಗುಳಿ ಅವರ 'ದಲಿತ ಲಾಲಿತ್ಯ', ಗದಗದ ಅನುಷಾ ಉಗ್ರದ್ ಅವರ 'ವೀರ ವಿಜಯಸ್ತಂಭ' ಕವಿತೆಗಳಿಗೆ ಇ - ಪ್ರಮಾಣ ಮತ್ತು ಪುಸ್ತಕ ನೀಡಿ ಗೌರವಿಸಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿ, ವೈಚಾರಿಕ ಚಿಂತಕರು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಕಲಘಟಗಿಯ ಹಿರಿಯ ಬರಹಗಾರಾದ ವೈ. ಜಿ. ಭಗವತಿಯವರು ಕೋರೆಗಾಂವ್ ವಿಜಯಸ್ತಂಭ ಚಿತ್ರಕವನ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಜೇತಕವಿಗಳಿಗೆ ಹಾಗೂ ಭಾಗವಹಿಸಿದ ಕವಿಮಹನೀಯರಿಗೆ ಅಂಚೆ ಮೂಲಕ ಇ - ಪ್ರಮಾಣಪತ್ರದ ಮುದ್ರಣ ಪ್ರತಿ ಮತ್ತು ಪುಸ್ತಕ ಗೌರವವನ್ನು ಅಂಚೆ ಮೂಲಕ ಕಳುಹಿಸಲಾಗುವುದೆಂದು ಗಣಕ ರಂಗದ ಮುಖ್ಯಸ್ಥರು ಮತ್ತು ಸ್ಪರ್ಧೆಯ ಆಯೋಜಕರಾದ ಗಣಪತಿ ಚಲವಾದಿಯವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವರದಿ: ಆಯುಷ್ಮಾನ ಸಿದ್ಧರಾಮ ಹಿಪ್ಪರಗಿ ವ ಗಣಪತಿ ಚಲವಾದಿ, ಸ್ಪರ್ಧಾ ಆಯೋಜಕರು ಗಣಕರಂಗ, ಧಾರವಾಡ

ಎಂ ವಿಜಯರವರ ಹುಟ್ಟುಹಬ್ಬ ಆಚರಣೆ

ಯಲಹಂಕ ಕೋಗಿಲು ಬಡಾವಣೆಮಾನವ ಹಕ್ಕುಗಳ ಹಿತ ರಕ್ಷಣಾ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಎಂ ವಿಜಯರವರ ಹುಟ್ಟುಹಬ್ಬವನ್ನು ಮಾನವ ಹಕ್ಕುಗಳ ಹಿತಕ್ಷಣ ಸೇವಾ ಸಮಿತಿಯ ಗೌರವ ದಕ್ಷರು ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಅವರ ಅವರ…

ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ

(೧೯ ನೇ ಶತಮಾನದಲ್ಲಿ ಸಮಾಜದ ಅಂಧ ಶ್ರದ್ಧೆ, ಅಸ್ಪೃಶ್ಯತೆ, ಮನುವಾದ ತೊಡೆದು ಹಾಕಿ, ಶೋಷಿತ ಜನಾಂಗದ ಮಹಿಳೆಯರ, ಮಕ್ಕಳ ಮತ್ತು ಅನಾಥರ ಬಾಳನ್ನು ಅಕ್ಷರ ಜ್ಯೋತಿಯ ಮೂಲಕ ಬೆಳಗಿದ ಶಿಕ್ಷಕಿ, ಕವಯತ್ರಿ ಸಾವಿತ್ರಿ ಬಾಯಿ ಪುಲೆಯವರ ಜನ್ಮದಿನ ಜನವರಿ ೦೩ ಇದ್ದು…

N ನರಸಿಂಹಮೂರ್ತಿಅಣ್ಣನವರಿಗೆ ಹುಟ್ಟು ಹಬ್ಬ. ಆಚರಣೆ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ನಂಬರ್ 5. ಅಗ್ರಹಾರ ಗ್ರಾಮದಲ್ಲಿ ವಾಸವಾಗಿರುವ. ಅಗ್ರಹಾರ ಬಡಾವಣೆಯಲ್ಲಿ ಶ್ರೀ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ. ಜೈ ಕರ್ನಾಟಕ ಗೌರವಾಧ್ಯಕ್ಷರಾದ ಸಮಾಜಸೇವಕರಾದ ಕಾಂಗ್ರೆಸ್ ಮುಖಂಡರಾದ ಎನ್ ನರಸಿಂಹಮೂರ್ತಿ ಅವರಿಗೆ ಇಂದು ಹುಟ್ಟು ಹಬ್ಬದ…