
ರಾಜಾಜಿನಗರದಲ್ಲಿ ಪ್ರತಿಷ್ಠಿತ ಆರ್ಥಿಕ ವ್ಯವಸ್ಥೆಗೆ ಭದ್ರ ಬುನಾದಿಯಂತಿರುವ ಬಂದನ್ ಬ್ಯಾಂಕ್ ನ 28ನೇ ಬ್ರ್ಯಾಂಚ್ ಸ್ಥಾಪನೆಯಾಯ್ತು ದಿನಾಂಕ 30 – 12 – 2023ರ ಶನಿವಾರ 11 ಗಂಟೆಗೆ ರಾಜಾಜಿನಗರದ ಮುಖ್ಯವಾಹಿನಿಯಾಗಿ ಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದ ಪ್ರಾಂಶುಪಾಲರಾದ ಡಾ ಶೀಲಾದೇವಿ ಎಸ್ ಮಳಿಮಠರವರು ಉದ್ಘಾಟನೆ ಮಾಡಿ ಶುಭಕೋರಿದರು, ಇಂತಹ ಬ್ಯಾಂಕ್ ವ್ಯವಸ್ಥೆಯಿಂದ ಬಡಾವಣೆಯ ಸಾರ್ವಜನಿಕರಿಗೆ ಸಮಯದ ಉಳಿತಾಯದೊಂದಿಗೆ ತಮ್ಮ ಹಣಕಾಸು ಜವಾಬ್ದಾರಿಯನ್ನು ಪರಿಣಾಮಕಾರಕವಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಸಮಗ್ರ ಭಾರತದ ಅಭಿವೃದ್ಧಿಯಲ್ಲಿಬ್ಯಾಂಕ್ ಮುಖ್ಯ ಪಾತ್ರವಹಿಸುತ್ತದೆ. ಗ್ರಾಹಕರನ್ನು ಶೀಘ್ರವಾಗಿ ಸೆಳೆಯುವುದಕ್ಕೆ ಯೋಗ್ಯ ಮಾನದಂಡಗಳ ಯೋಜನೆ ಮುಖ್ಯ ಎ೦ದು ಪ್ರತಿಕ್ರಿಯೆ ನೀಡಿದರು. ಕರ್ನಾಟಕದ ಬಂಧನ್ ಬ್ಯಾಂಕ್ ನ ವ್ಯವಸ್ಥಾಪಕ ಸೌರಭ – ರಾಜಾಜಿನಗರ ಮ್ಯಾನೇಜರ್ ಭೂಪಾಲ್ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.