Post navigation BAYALU SIMHA daily News paper ಕೋರೆಗಾಂವ್ ವಿಜಯಸ್ತಂಭ ಸ್ವರಚಿತ ಚಿತ್ರಕವನ ಸ್ಪರ್ಧೆಯಲ್ಲಿ ಕುಮಾರಗೆ ಪ್ರಥಮ ರವಿಗೆ ದ್ವೀತಿಯ ಸುಹೇಚಗೆ ತೃತೀಯ ಬಹುಮಾನ ಧಾರವಾಡದ ಗಣಕರಂಗವು ಮಾನವ ಸಮಾನತೆಗಾಗಿ ೦೧ ಜನವರಿ 1818 ರಲ್ಲಿ ಪೇಶ್ವೆ ಮತ್ತು ಮಹಾರ್ ಯೋಧದರ ನಡುವೆ ನಡೆದ ನಿರ್ಣಾಯಕ ಐತಿಹಾಸಿಕ ಕದನದ ನಿಮಿತ್ತ 2೦6ನೇ ಭೀಮಾ ಕೊರೆಗಾವ್ ಶೌರ್ಯ ದಿನ ಆಚರಣೆ ಪ್ರಯುಕ್ತ 'ಕೋರೆಗಾಂವ್ ವಿಜಯಸ್ತಂಬ ಚಿತ್ರಕವನ ಸ್ಪರ್ಧೆ' ಗೂಗಲ್ ಮೀಟ್ ಕಾರ್ಯಕ್ರಮವನ್ನು ೦1 ಜನವರಿ 2024ರ ಸಂಜೆ 7 ಗಂಟೆಯಿಂದ 9 ಗಂಟೆವರೆಗೆ ಗೂಗಲ್ ಮೀಟ್ ನಲ್ಲಿ ಆಯೋಜಿಸಲಾಗಿತ್ತು. ನಾಡಿನ ವಿವಿಧ ಜಿಲ್ಲೆಗಳಿಂದ 64 ಕವಿ ಕವಯತ್ರಿಯರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಹಾಸನದ ಕುಮಾರ್ ಚಲವಾದಿಯವರ ವಿಜಯಸ್ತಂಭದ ಸ್ವಗತ, ಹುಬ್ಬಳ್ಳಿಯ ರವಿ ಚಲವಾದಿಯವರ ಮೂಲನಿವಾಸಿಗಳ ವಿಜಯ ಹಾಗೂ ಸುಹೇಚ ಪರಮವಾಡಿ ಕಾವ್ಯನಾಮದ ಸುಭಾಷ್ ಚವ್ಹಾಣ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದಿದ್ದು; ವಿಜೇತ ಕವಿಮಹನೀಯರಿಗೆ ಅನುಕ್ರಮವಾಗಿ ₹ 1೦೦೦, ₹5೦೦, ₹3೦೦, ನಗದು ಹಾಗೂ ಇ - ಪ್ರಮಾಣ ಪತ್ರಗಳ ಜೊತೆಗೆ ಪುಸ್ತಕ ಬಹುಮಾನಗಳನ್ನು ನೀಡಿ ಅಭಿನಂದಿಸಲಾಗುದೆ. ತೀರ್ಪುಗಾರರ ಮೆಚ್ಚುಗೆ ಸ್ಥಾನವನ್ನು ಪಡೆದಿರುವಂತಹ ಮಂಡ್ಯದ ಸುಮನ್ ರಾವರವರ 'ಜೀವಂತ ಸಾಕ್ಷಿ', ಹುನುಗುಂದದ ಡಾಕ್ಟರ್ ನಾಗರತ್ನ ಭಾವಿಕಟ್ಟಿ ಅವರ 'ವಿಜಯ ಸ್ಮರಣೆ', ಕಾರ್ಕಳದ ಡಾ. ಸುಮತಿ ಪಿ ಅವರ 'ಆತ್ಮ ಗೌರವದ ಸಂಕೇತ', ಹುಬ್ಬಳ್ಳಿಯ ಪದ್ಮಜಾ ಉಮರ್ಜಿ ಅವರ 'ಮಾನವತೆ ಸಾರುವ ಸ್ತಂಭ', ಕಾರವಾರದ ದ್ಯಾವಪ್ಪ ಮಾದರ ಅವರ 'ಕೋರೆಗಾಂವ್ ವಿಜಯಸ್ತಂಭ', ಮಂಗಳೂರಿನ ಡಾ. ಸುರೇಶ್ ನೆಗಳಗುಳಿ ಅವರ 'ದಲಿತ ಲಾಲಿತ್ಯ', ಗದಗದ ಅನುಷಾ ಉಗ್ರದ್ ಅವರ 'ವೀರ ವಿಜಯಸ್ತಂಭ' ಕವಿತೆಗಳಿಗೆ ಇ - ಪ್ರಮಾಣ ಮತ್ತು ಪುಸ್ತಕ ನೀಡಿ ಗೌರವಿಸಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿ, ವೈಚಾರಿಕ ಚಿಂತಕರು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಕಲಘಟಗಿಯ ಹಿರಿಯ ಬರಹಗಾರಾದ ವೈ. ಜಿ. ಭಗವತಿಯವರು ಕೋರೆಗಾಂವ್ ವಿಜಯಸ್ತಂಭ ಚಿತ್ರಕವನ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಜೇತಕವಿಗಳಿಗೆ ಹಾಗೂ ಭಾಗವಹಿಸಿದ ಕವಿಮಹನೀಯರಿಗೆ ಅಂಚೆ ಮೂಲಕ ಇ - ಪ್ರಮಾಣಪತ್ರದ ಮುದ್ರಣ ಪ್ರತಿ ಮತ್ತು ಪುಸ್ತಕ ಗೌರವವನ್ನು ಅಂಚೆ ಮೂಲಕ ಕಳುಹಿಸಲಾಗುವುದೆಂದು ಗಣಕ ರಂಗದ ಮುಖ್ಯಸ್ಥರು ಮತ್ತು ಸ್ಪರ್ಧೆಯ ಆಯೋಜಕರಾದ ಗಣಪತಿ ಚಲವಾದಿಯವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.