ಬಾರ್ ಮುಚ್ಚುವಂತೆ ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ :






ಯಲಹಂಕ
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಕಟ್ಟಿಗೇನಹಳ್ಳಿ ಮುಖ್ಯ ರಸ್ತೆಯ ಜನವಸತಿ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ‘ಅಕ್ಷಿತಾ ವೈನ್ಸ್’ ಎಂಬ ಹೊಸ ಬಾರ್ ತೆರೆಯಲಾಗಿದ್ದು, ಇದರಿಂದ ನಾಗರೀಕರಿಗೆ ಸಮಸ್ಯೆಯಾಗುತ್ತಿದೆ, ಕೂಡಲೇ ಅಬಕಾರಿ ಇಲಾಖೆ ಬಾರ್ ಮುಚ್ಚಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶನಿವಾರ ಬಾರ್ ಮುಂದೆ ಪ್ರತಿಭಟನೆ ನಡೆಸಿದರು.
ಬಾರ್ ನ ಕೂಗಳತೆ ದೂರದಲ್ಲೇ ಉದ್ಯಾನವನ, ಶಾಲೆ ಮತ್ತು ದೇವಾಲಯಗಳಿದ್ದು, ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಮತ್ತು ದೇವಾಲಯಕ್ಕೆ ತೆರಳುವ ಹಲವರಿಗೆ ಬಾರ್ ನಲ್ಲಿ ಕುಡಿದು ತೂರಾಡುವ ಕುಡುಕರಿಂದ ಅಹಿತಕರವಾದ ಘಟನೆಗಳು ನಡೆಯುತ್ತಿವೆ, ಶಾಲೆಗೆ ತೆರಳುವ ಮಕ್ಕಳು ಮಾರ್ಗ ಬದಲಿಸಿ ಶಾಲೆಗೆ ತೆರಳುವ ವಾತಾವರಣ ನಿರ್ಮಾಣವಾಗಿದೆ, ಬಾರ್ ಮುಂದೆ ಇರುವ ತರಕಾರಿ ಮತ್ತು ಕಿರಾಣಿ ಅಂಗಡಿಗಳ ಗ್ರಾಹಕರಿಗೂ ಸಹ ಬಾರ್ ನಿಂದ ಸಮಸ್ಯೆಯಾಗು ತ್ತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಬಾರ್ ಮುಚ್ಚಿಸುವ ಮೂಲಕ ನಾಗರೀಕರಿಗೆ ಸ್ಪಂದಿಸಬೇಕಿದೆ, ದೊಡ್ಡದೊಂದು ದುರಂತ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಬಾರ್ ಮುಚ್ಚಿಸಬೇಕು ಎಂದು ಒತ್ತಾಯಿಸಿದರು.
ಬಾರ್ ತೆರೆದಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು, ಅಬಕಾರಿ ಇಲಾಖೆ, ಬಿಬಿಎಂಪಿ ಆರೋಗ್ಯ ಇಲಾಖೆ ಮತ್ತು ಕಂದಾಯ ಸಚಿವರು, ಸ್ಥಳೀಯ ಶಾಸಕರಾದ ಕೃಷ್ಣಬೈರೇಗೌಡ ರವರಿಗೆ ಮನವಿ ಸಲ್ಲಿಸಲಾಗಿದ್ದು, ಸಚಿವ ಕೃಷ್ಣಬೈರೇಗೌಡ ರವರು ಅಗತ್ಯಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಸಚಿವರ ಮಾತಿಗಾಗಲಿ, ಅಬಕಾರಿ ಇಲಾಖೆ ಮತ್ತು ಬಿಬಿಎಂಪಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಅಕ್ಷಿತಾ ಬಾರ್ ಮಾಲೀಕ ಅವರಿಂದಲೇ ಏನೂ ಮಾಡಲಾಗಿಲ್ಲ, ಇನ್ನು ಗ್ರಾಮಸ್ಥರಿಂದ ಏನು ಮಾಡಲಾದೀತು ಎಂದು ಉಢಾಫೆ ಮಾತುಗಳನ್ನು ಆಡುತ್ತಿರುವುದು ಶೋಚನೀಯ ಸಂಗತಿ, ಸಚಿವ ಕೃಷ್ಣಬೈರೇಗೌಡ ರವರು ಗ್ರಾಮದ ನಾಗರೀಕರ ಹಿತರಕ್ಷಣೆಯನ್ನು ಮನಗಂಡು ಕೂಡಲೇ ಬಾರ್ ಮುಚ್ಚಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ಕೆ.ಎ.ಅನಿಲ್ ಕುಮಾರ್, ವೆಂಕಟೇಶಪ್ಪ, ಲಕ್ಷ್ಮಣಪ್ಪ, ಮುನಿಆಂಜಿನಪ್ಪ, ಶಾಂತರಾಜು, ಅಂಬರೀಶ್, ರಾಜಣ್ಣ, ರಮೇಶ್, ಮಂಜುನಾಥ್, ಆನಂದ್, ದೀಪು, ವೀರಭದ್ರಪ್ಪ, ಅಶ್ವಥ್, ಅರುಣ್ ಕುಮಾರ್, ಲೋಕೇಶ್ ಕೃಷ್ಣಪ್ಪ, ರಾಜಣ್ಣ, ಮುನಿರಾಜು, ವಿಜಯ್, ಬಾಲರಾಜ್, ಮುನೇಗೌಡ, ಸಿದ್ದೇಶ್ ಸೇರಿದಂತೆ ಅನೇಕ ಗ್ರಾಮಸ್ಥರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
Public power
R Hanumanthu
Kogilu layout
Yelahanka
9845085793
7349337989