
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ
ಸುರಿಯುತ್ತಿದ್ದ ಮಳೆ ಸೋಮವಾರ ರಾತ್ರಿ, ಮಂಗಳವಾರ ಮಧ್ಯಾಹ್ನ ನಿರಂತರವಾಗಿ ಧಾರಾಕಾರವಾಗಿ ಸುರಿದಿದ್ದರಿಂದ ಜಿಲ್ಲಾದ್ಯಂತ ನಾನಾ ಅವಾಂತರಗಳು ಸಂಭವಿಸಿವೆ.
ಅದರಲ್ಲೂ ಚಿಕ್ಕಬಳ್ಳಾಪುರ, ಗೌರಿಬಿದನೂರು,ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು, ತೋಟಗಳು, ತಗ್ಗು ಪ್ರದೇಶದ ಮನೆಗಳಿಗೆ ನೀರು
ನುಗ್ಗಿ ಅಪಾರ ನಷ್ಟ ಸಂಭವಿಸಿದೆ.
ನಿರಂತರ ಮಳೆಯಿಂದ ಜಿಲ್ಲಾದ್ಯಂತ
ಅವಾಂತರ: ಮನೆ, ತೋಟಗಳಿಗೆ
ನುಗ್ಗಿದ ನೀರು, ಕೊಚ್ಚಿಹೋದ ವಾಹನ
ಜಿಲ್ಲೆಯ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸರಿಯಾದ ವಿದ್ಯುತ್ ಪೂರೈಕೆ
ಯಿಲ್ಲದೆ ಜನರು ಪರದಾಡುವಂತಾಯಿತು. ಮನೆಗಳಿಗೆ ನೀರು ನುಗ್ಗಿ ಜನರು ಅವಸ್ಥೆ ಪಡುವಂತಾಯಿತು. ಇನ್ನೊಂದೆಡೆ ನಗರ ಮತ್ತು ಪಟ್ಟಣಗಳಲ್ಲಿ ಭಾರಿ ಮಳೆ ಸುರಿದ ಕಾರಣ ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿದು ಸಾಕಷ್ಟು ಸಮಸ್ಯೆಯಾಗಿತ್ತು.
ಮತ್ತೊಂದೆಡೆ ತಗ್ಗುಪ್ರದೇಶದಲ್ಲಿರುವ ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಕಳೆದ 15 ದಿನಗಳಿಂದಲೂ ಮಳೆ ಆಗಾಗ್ಗೆ ಸುರಿಯುತ್ತಿರುವ ಹಿನ್ನೆಲೆ ಈಗಾಗಲೇ ಸಾಕಷ್ಟು ಬೆಳೆಗಳು ಹಾಳಾಗಿದ್ದವು. ಈಗ ಸುರಿದಿರುವ ಭಾರಿ ಮಳೆಯಿಂದ ಉಳಿದುಕೊಂಡಿದ್ದ ಬೆಳೆಗಳಲ್ಲೂ
ನೀರು ನಿಂತು ಸಮಸ್ಯೆಯಾಗಿದೆ.
ನಗರ ಹೊರವಲಯದ ನಂದಿ ಕ್ರಾಸ್ ಬಳಿ ಅಂಗಡಿಗಳಿಗೆಲ್ಲ ನೀರು ನುಗ್ಗಿದ್ದು ಅಪಾರ ನಷ್ಟ ಸಂಭವಿಸಿದೆ. ಅಲ್ಲದೇ ವಾಹನಗಳ ಸಂಚಾರಕ್ಕೂ
ತೊಂದರೆಯಾಗಿದೆ. ಮಳೆ ನೀರಿನ ರಭಸಕ್ಕೆ ಕೆಲವು ಕಾರು,ವಾಹನಗಳು ನೀರು ಪಾಲಾಗಿವೆ. ಇನ್ನು ನಾಲೈದು ದಿನ ಜಿಲ್ಲೆಯಲ್ಲಿ ಭಾರಿ ಮಳೆಯ
ಮುನ್ಸೂಚನೆ ಇದ್ದು, ಎಚ್ಚರಿಕೆ ವಹಿಸದಿದ್ದರೆ ಸಾಕಷ್ಟು ಸಮಸ್ಯೆಯಾಗಲಿದೆ.
ಬಾಕ್ಸ್..
ಭಾರೀ ಮಳೆಗೆ ಎರಡು ಕಾರುಗಳು
ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಘಟನೆ ಚಿಕ್ಕಬಳ್ಳಾಪುರ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ಯಲ್ಲಿ ನಡೆದಿದೆ.ಸೋಮವಾರ ರಾತ್ರಿ,
ಮಂಗಳವಾರ ಮಧ್ಯಾಹ್ನ ಸುರಿದ ಮಳೆಗೆ ಕಾರುಗಳು ಕಾಲುವೆಯಲ್ಲಿ ಕೊಚ್ಚಿ ಹೋಗಿವೆ. ದೇವನಹಳ್ಳಿ ತಾಲೂಕಿನ ನಾಗಾರ್ಜುನ ಕಾಲೇಜು ಸಮೀಪದ ಅಂಡರ್ ಪಾಸ್ನಲ್ಲಿ
ಒಂದು ಮಾರುತಿ ಅಸ್ಟರ್ ಕಾರು ಸಂಪೂರ್ಣ ಮುಳುಗಡೆಯಾಗಿದೆ. ಇನ್ನೊಂದು ಕಾರು ದಡದಲ್ಲಿ
ಸಿಲುಕಿಕೊಂಡಿದೆ. ಭಾರೀ ಮಳೆಗೆ ರಸ್ತೆಯಲ್ಲಿ ನೀರು ತುಂಬಿತ್ತು, ಹುರಾಳಗೂರ್ಕಿ ಗ್ರಾಮದ ಕಾರಿನ ಮಾಲೀಕ ಆಸ್ಪತ್ರೆಗೆ ತೆರಳುತ್ತಿದ್ದಾಗ ವೇಳೆ ಈ ಘಟನೆ ನಡೆದಿದೆ. ಅದೃಷ್ಟವಸ ಅರು ಜನ ಪ್ರಾಣಾಪಾಯಾದಿಂದಪಾರಾಗಿದ್ದಾರೆ.ದೇವನಹಳ್ಳಿ- ಚಿಕ್ಕಬಳ್ಳಾಪುರ ಗಡಿಯಲ್ಲಿ ಹರಿದು ಹೋಗುವ ಕಾಲುವೆಯಲ್ಲಿ ಘಟನೆ ನಡೆದಿದೆ.