








ಬ್ಯಾಟರಾಯನಪುರ : ಯಲಹಂಕ ತಾಲ್ಲೂಕು ಭೂನ್ಯಾಯ ಮಂಡಳಿಯ ನೂತನ ಸದಸ್ಯರಾಗಿ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮಾರೇನಹಳ್ಳಿ ನಾಗರಾಜ್, ಸೊಣ್ಣಪ್ಪನಹಳ್ಳಿಯ ಕಿರಣ್ ಕುಮಾರ್, ಶೆಟ್ಟಿಗೆರೆಯ ಅಪ್ಪಾಜಿ, ಯಲಹಂಕದ ವೈ.ಸಿ.ವೆಂಕಟೇಶ್ ಆಯ್ಕೆಯಾಗಿದ್ದಾರೆ.
ಭೂನ್ಯಾಯ ಮಂಡಳಿ ನೂತನ ಸದಸ್ಯರನ್ನು ಸಚಿವ ಕೃಷ್ಣಬೈರೇಗೌಡ ಅವರು ತಮ್ಮ ಗೃಹ ಕಚೇರಿಯಲ್ಲಿ ಅಭಿನಂದಿಸಿ, ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಮಾಜಿ ಜಿ.ಪಂ.ಸದಸ್ಯರಾದ ದಾನೇಗೌಡ, ಕೆ.ಅಶೋಕನ್, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು), ಚೊಕ್ಕನಹಳ್ಳಿ ನಂಜೇಗೌಡ, ಮಾರೇನಹಳ್ಳಿ ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಡಿ.ಎಂ.ಚೌಡಪ್ಪ, ದೊಡ್ಡಜಾಲ ಗ್ರಾ.ಪಂ. ಅಧ್ಯಕ್ಷ ಆರ್.ಬೈರೇಗೌಡ, ಗ್ರಾ.ಪಂ. ಸದಸ್ಯರಾದ ಚೇತನ್, ಆನಂದ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಶೆಟ್ಟಿಗೆರೆ ರಾಜಣ್ಣ, ಮೈಲನಹಳ್ಳಿ ರಾಜಕುಮಾರ್, ಜೈಕುಮಾರ್, ಬಾಗಲೂರು ಅಮರ ನಾರಾಯಣ್, ವೀರೇಶ್, ಸಲ್ಲೇಗೌಡ, ಬೆಟ್ಟಹಲಸೂರು ಅಜಯ್, ಶೆಟ್ಟಿಗೆರೆ ಮೋಹನ್ ಸೇರಿದಂತೆ ಇನ್ನಿತರರಿದ್ದು, ನೂತನ ಸದಸ್ಯರಿಗೆ ಶುಭ ಹಾರೈಸಿದರು.