











ಕವಿಗಳು, ರಾಜರು ಕಲೆತು ಸೃಷ್ಟಿಸುವ ಮಾರ್ಗ ಯಶಸ್ವಿಯಾಗುತ್ತದೆ : ಡಾ.ಎಂ.ಎಸ್.ಆಶಾದೇವಿ
ಯಲಹಂಕ : ಭಾಷಾ ಬೆಳವಣಿಗೆಯ ವಿಷಯದಲ್ಲಿ ಕವಿಗಳು, ರಾಜರು ಕಲೆತು ಸೃಷ್ಟಿಸುವ ಮಾರ್ಗ ಯಶಸ್ವೀ ಮಾರ್ಗವಾಗುತ್ತದೆ ಎಂದು ಮಹಾರಾಣಿ ವಿಜ್ಞಾನ ಕಾಲೇಜು ಪ್ರಾಧ್ಯಾಪಕರು, ಅನುವಾದರು, ವಿಮರ್ಶಕರಾದ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.
ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಭಾಷಾ ಬೆಳವಣಿಗೆ ಎಂಬುದೊಂದು ಸಮಷ್ಟಿ ಪ್ರಯತ್ನ, ಕವಿಗಳು, ಕಲಾವಿದರು, ವಿಮರ್ಶಕರು, ಸಂಗೀತಗಾರರು ಹೀಗೆ ಎಲ್ಲಾ ಪ್ರಾಕಾರದ ಸಹೃದಯಿ ಮನಸ್ಸುಗಳು ಸಮಷ್ಟಿಯಾಗಿ ಕಲೆತು ಪ್ರಯತ್ನಿಸುವುದರ ಜತೆಗೆ, ಇವರಿಗೆ ಪ್ರಭುತ್ವದ ಬೆಂಬಲ ದೊರೆಯುವಂತಾದರೆ ಭಾಷೆಯ ಬೆಳವಣಿಗೆ ಅತ್ಯದ್ಭುತವಾಗಿ ಸಾಗುತ್ತದೆ. ಪ್ರಾಚೀನ ಕಾಲದ ಕನ್ನಡ ಭಾಷೆ, ಸಾಹಿತ್ಯದ ಶ್ರೀಮಂತಿಗೆ ಕವಿಗಳು, ಕಲಾವಿದರು, ರಾಜರು ಕಲೆತು ಸಾಗಿರುವುದೇ ಮೂಲ ಕಾರಣ ಎಂದರು.
ಇದೇ ಸಂದರ್ಭದಲ್ಲಿ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಎಸ್.ಎನ್.ವೆಂಕಟೇಶ್, ಆಡಳಿತ ಮಂಡಳಿ ಸದಸ್ಯರಾದ ಡಾ.ಗೋದಾಮಣಿ, ಪ್ರೊ.ಗೋಪಾಲಕೃಷ್ಣ, ಪ್ರಾಧ್ಯಾಪಕರಾದ ಡಾ.ಎಂ.ಎಲ್. ಅಶೋಕ್, ಡಾ.ಗೀತಾ ಡಿ.ಸಿ., ಪವಿತ್ರ ಕುಮಾರಿ ಬಿ.ಪಿ., ವಿದ್ಯಾರ್ಥಿ ಸಂಘದ ಗಗನ್, ಕನ್ನಡ ಸಂಘದ ಧಾತ್ರಿ ಸೇರಿದಂತೆ ಇನ್ನಿತರರಿದ್ದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭಾಷೆ, ಸಾಹಿತ್ಯ, ಪರಂಪರೆ, ಸಂಸ್ಕೃತಿಯನ್ನು ಸಾರುವ ಸ್ತಬ್ಧ ಚಿತ್ರಗಳ ಪ್ರದರ್ಶನ, ಆಹಾರ ಪದಾರ್ಥಗಳ ಮೇಳ, ದೇಸೀ ಆಟಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.