ಪೂರ್ವ ವಲಯದಲ್ಲಿ 4ನೇ ಡಿಸೆಂಬರ್ 2024 ರಂದು ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮ:

ಬೆಂಗಳೂರು: ಡಿ.02:

ಪೂರ್ವ ವಲಯ ವಾಪ್ತಿಯಲ್ಲಿ ದಿನಾಂಕ: 03-12-2024ರ ಮಂಗಳವಾರ ರಂದು ನಡೆಯಬೇಕಿದ್ದ “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮವನ್ನು, ಅನಿವಾರ್ಯ ಕಾರಣಗಳಿಂದ ದಿನಾಂಕ: 04-12-2024ರ ಬುಧವಾರ ರಂದು ಮಧ್ಯಾಹ್ನ 3.00 ರಿಂದ 5.00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹಾಗೂ ವಲಯ ಮಟ್ಟದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವ ಸಲುವಾಗಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಲಯ ಆಯುಕ್ತರ ಕಛೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಪರಿಶೀಲನೆ ಕಾರ್ಯ:

ಪೂರ್ವ ವಲಯ ಆಯುಕ್ತರ ಕಛೇರಿ, 10ನೇ ಮಹಡಿ, ಬಹು ಉಪಯೋಗಿ ಕಟ್ಟಡ(ಸುಭಾಷ್ ಚಂದ್ರಬೋಸ್ ಕಟ್ಟಡ – ಪಿಯುಬಿ), ಎಂ.ಜಿ.ರಸ್ತೆ, ಬೆಂಗಳೂರು ಇಲ್ಲಿ ದಿನಾಂಕ: 04-12-2024ರ ಬುಧವಾರ ರಂದು ಮಧ್ಯಾಹ್ನ 3.00 ರಿಂದ 5.00 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಮುಖ್ಯ ಆಯುಕ್ತರು ಖುದ್ದು ಆಲಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದೆ.

Leave a Reply

Your email address will not be published. Required fields are marked *