ಜಿಲ್ಲಾ ವಕೀಲರ ಸಂಘದ ಖಜಾಂಚಿಯಾಗಿ ಆಯುಬ್ ಖಾನ್ ಆಯ್ಕೆ

ಚಿಕ್ಕಬಳ್ಳಾಪುರ: ಜಿಲ್ಲಾ ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಖಜಾಂಚಿಯಾಗಿ ನೂತನವಾಗಿ ಯುವ ವಕೀಲರಾದ ಅಯುಬ್ ಖಾನ್ ಆಯ್ಕೆಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯ ಆವರಣದ ವಕೀಲರ ಸಭಾಂಗಣದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ವಕೀಲರ ಚುನಾವಣೆಯಲ್ಲಿ ಖಜಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳ ಪೈಕಿ ಆಯುಬ್ ಖಾನ್ ರವರು 178 ಮತಗಳನ್ನು ಪಡೆದರೆ ವಕೀಲ ದೇವರಡ್ಡಿ 126 ಹಾಗೂ ಶಿವಾರೆಡ್ಡಿ 108 ಮತಗಳನ್ನು ಪಡೆದಿದ್ದು,
178 ಮತಗಳನ್ನು ಪಡೆದ ಆಯುಬ್ ಖಾನ್ ರವರು ಆಯ್ಕೆಯಾಗಿದ್ದಾರೆ.
ಒಟ್ಟು 420 ಮತದಾರರಿದ್ದು ಇದರಲ್ಲಿ 413 ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು.
( ಮುಬಷೀರ್ ಅಹಮದ್ )

Leave a Reply

Your email address will not be published. Required fields are marked *