ಕರವೇ ಆಟೋ ಚಾಲಕರ ಘಟಕದಿಂದ ಕನ್ನಡ ರಾಜ್ಯೋತ್ಸವ :

ನೂತನ ಧ್ವಜ ಸ್ಥಂಭ ಉದ್ಘಾಟನೆ :

ಯಲಹಂಕ : ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ಯಲಹಂಕ ಕ್ಷೇತ್ರ ಆಟೋ ಘಟಕದ ವತಿಯಿಂದ ಯಲಹಂಕ ಉಪನಗರದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇದೇ ವೇಳೆ ನೂತನ ಧ್ವಜ ಸ್ಥಂಭವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ರಾಜ್ಯ ಉಪಾಧ್ಯಕ್ಷರಾದ ಪುಟ್ಟೇಗೌಡ್ರು, ದಾ.ಕೃ.ದೇವರಾಜ್, ದಲಿತಪರ, ಕನ್ನಡಪರ ಹೋರಾಟಗಾರ, ಯಲಹಂಕ ನಗರ ಮಂಡಲ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಮುರಳಿ, ಯುವ ಮುಖಂಡ ಸಲ್ಮಾನ್(Wtbi) ಸೇರಿದಂತೆ ಹಲವು ಗಣ್ಯರು ಕನ್ನಡ ನಾಡು, ನುಡಿಯ ಐತಿಹಾಸಿಕ ಮಹತ್ವ, ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಇರುವ ಗರಿಮೆಯ ಸ್ಥಾನ, ಕನ್ನಡ ನೆಲ, ಜಲ, ಗಡಿಯ ಸಂರಕ್ಷಣೆಗಾಗಿ ಕೈಗೊಳ್ಳಬೇಕಿರುವ ಕ್ರಮ, ಮಾಡಿರುವ ಹೋರಾಟಗಳು, ನಾಮಫಲಕಗಳಲ್ಲಿ ಶೇ.70% ಕನ್ನಡ ಕಡ್ಡಾಯಗೊಳಿಸಿರುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯಲ್ಲಿ ಆಟೋ ಚಾಲಕರು ನಿರ್ವಹಿಸುತ್ತಿರುವ ಮಹತ್ವದ ಪಾತ್ರ ಸೇರಿದಂತೆ ಹಲವು ವಿಷಯಗಳನ್ನು ಕುರಿತು ಮನೋಜ್ಞವಾಗಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಪರ ಹೋರಾಟಗಾರರು, ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ ಸಮಾಜ ಸೇವಕರು ಸೇರಿದಂತೆ ಹಲವು ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಅನ್ನಪೂರ್ಣ, ಯಲಹಂಕ ಕ್ಷೇತ್ರ ಘಟಕದ ಅಧ್ಯಕ್ಷ ಪ್ರಕಾಶ್ ಗೌಡ, ಉಪಾಧ್ಯಕ್ಷ ಪ್ರಕಾಶ್ ಎ., ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಇತರ ಪದಾಧಿಕಾರಿಗಳಾದ ಬೈಲಪ್ಪ, ನವೀನ್ ಗೌಡ, ಕೃಷ್ಣಮೂರ್ತಿ, ರಘು, ಅಭಿಷೇಕ್, ರಾಮಮೂರ್ತಿ, ಭಾಸ್ಕರ್, ಮಧು, ಕರವೇ ಯಲಹಂಕ ಕ್ಷೇತ್ರ ಆಟೋ ಚಾಲಕರ ಘಟಕದ ಅಧ್ಯಕ್ಷ ರಾಮಪ್ಪ ಬಿಸನಳ್ಳಿ, ಯಲಹಂಕ ಉಪನಗರದ ಶಂಕರ್ ನಾಗ್ ಆಟೋ ನಿಲ್ದಾಣ(ಕೆ.ಕೆ.ಆಸ್ಪತ್ರೆ)ದ ಅಧ್ಯಕ್ಷ ಅಯ್ಯಪ್ಪ, ಆಟೋ ಚಾಲಕರ ಘಟಕದ ಸಂಚಾಲಕ ಸಮೀರ್ ಪಟೇಲ್, ಯಲಹಂಕ ನಗರ ಮಂಡಲ ಬಿಜೆಪಿ ಎಸ್ ಸಿ ಮೋರ್ಚಾ ಕಾರ್ಯದರ್ಶಿ ಬೆಟ್ಟಹಳ್ಳಿ ಗುರುಮೂರ್ತಿ, ಕರವೇ ಸಾಮಾಜಿಕ ಜಾಲ ತಾಣ ವಿಭಾಗದ ಕನ್ನಡಿಗ ಸಂತು ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *