
ದಿನಾಂಕ 4-11, 2024 ರ ಶನಿವಾರ 4.00 ಗಂಟೆಗೆ ರಾಮನಗರ ಜಿಲ್ಲೆಯ ಬೈರಮಂಗಲದಲ್ಲಿರುವ ಶ್ರೀವೃಷಭಾವತಿ ಗ್ರಾಮಾಂತರ ಶಾಲಾ ಸಮೂಹದ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಿ ಮಾತನಾಡಿದ ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರವರು ವಿದ್ಯಾರ್ಥಿ ಸಮೂಹ -ಆಡಳಿತ ಮಂಡಳಿ – ಪೋಷಕರ ಸಮೂಹ – ಶಿಕ್ಷಕರು ಈ ನಾಲ್ಕು ಮುಖ್ಯ ಕೇಂದ್ರವಾಗಿಸಿಕೊಂಡು ಪುಸ್ತಕದ ಆಸ್ತಿಯ ಬಗ್ಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟುಮೊಬೈಲ್ ಮಾಹಿತಿಯಿಂದ ದೂರವಿರಬೇಕೆಂದು ತಿಳಿಸಿದರು. ಉದ್ಘಾಟನೆಯಲ್ಲಿ ಮಾಜಿಶಾಸಕರಾದ ಸನ್ಮಾನ್ಯ ಸಿ ಪಿ ಲಿಂಗಣ್ಣ.. ಅಧ್ಯಕ್ಷರಾದ ಶ್ರೀವಿಷಕಂಠಯ್ಯ.. ಶಾಲಾ ಆಡಳಿತಮಂಡಳಿಯ ಸದಸ್ಯರು ವಿದ್ಯಾರ್ಥಿಗಳು -ಪೋಷಕರು – ಆಹ್ವಾನಿತರು -ಉಪಸ್ಥಿತರಿದ್ದರು… ಹಳೆಯ ವಿದ್ಯಾರ್ಥಿಗಳೆಲ್ಲಾ ಸೇರಿ ಶಾಲಾ ಆವರಣದಲ್ಲಿ ಗಣೇಶ ದೇವಸ್ಥಾನ ನಿರ್ಮಿಸಿ ಉದ್ಘಾಟಿಸಿದ್ದು ಅತ್ಯಂತ ವಿಶೇಷ ಸಂದರ್ಭ.. ಇಂತಹವುಗಳು ಶಿಕ್ಷಣ ಕ್ಷೇತ್ರಕ್ಕೆ ಶ್ರೇಷ್ಠ ಮಾದರಿ ಆಗುತ್ತವೆ… ಹಳೆಯ ವಿದ್ಯಾರ್ಥಿಗಳ ಸಂಘಗಳು ಶಕ್ತಿಶಾಲಿಯಾಗಲು ಆಡಳಿತ ಮಂಡಳಿ ಸದಾ ಜಾಗೃತವಾಗಿರಬೇಕೆಂದು ಡಾ. ಶೀಲಾ ದೇವಿ ಎಸ್ ಮಳೀಮಠ ರವರು ಮಾತನಾಡುತ್ತಾ ಭಾವುಕರಾದರು