


25.35 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಎಸ್ ಆರ್ ವಿಶ್ವನಾಥ್ ಚಾಲನೆ :
ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಕೆಂಪೇಗೌಡ ವಾರ್ಡ್, ಚೌಡೇಶ್ವರಿ ವಾರ್ಡ್, ಅಟ್ಟೂರು ವಾರ್ಡ್ ಮತ್ತು ಯಲಹಂಕ ಉಪನಗರ ಬಿಬಿಎಂಪಿ ವಾರ್ಡ್ ಗಳಲ್ಲಿ ರಸ್ತೆ ಡಾಂಬರೀಕರಣ, ಒಳಚರಂಡಿ ಕಾಮಗಾರಿ, ಸಮುದಾಯ ಭವನ, ಅಂಗನವಾಡಿ ಕೇಂದ್ರ, ಶಾಲಾ ಕಟ್ಟಡ, ಕಂದಾಯ ಇಲಾಖೆ ಕಟ್ಟಡ ಸೇರಿದಂತೆ ಒಟ್ಟು 25.35 ಕೋಟಿ ರು.ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ಯಲಹಂಕ ನಗರ ವ್ಯಾಪ್ತಿಯ ನಾಲ್ಕೂ ಬಿಬಿಎಂಪಿ ವಾರ್ಡ್ ಗಳಲ್ಲಿ ಇಂದು ಹಲವು ಕಾಮಗಾರಿಗಳಿಗೆ ಭೂಮಿಪೂಜೆ ಮತ್ತು ಕೆಲವು ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಾಗಿದ್ದು, ಕಾಮಗಾರಿ ನಿಗಧಿತ ಅವಧಿಯಲ್ಲಿ ಮತ್ತು ಅಗತ್ಯ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಹಲವು ದಿನಗಳ ನಿರೀಕ್ಷೆಯ ನಂತರ ಯಲಹಂಕ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಒಂದಷ್ಟು ಅನುದಾನ ನೀಡಿ ಸಹಕರಿಸಿದೆ, ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. ಆದರೆ ಕ್ಷೇತ್ರ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಆಗದಿದ್ದರೆ ಜನರಿಗೆ ಉತ್ತರಿಸುವುದು ಬಹಳ ಕಷ್ಟವಾಗುತ್ತದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬರುವುದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಹೊರತು ಸುಮ್ಮನೆ ಕೂರಲಿಕ್ಕಲ್ಲ, ದೊರೆತಿರುವ ಅನುದಾನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಇನ್ನಷ್ಟು ಅನುದಾನ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್, ವಿ.ಪವನ್ ಕುಮಾರ್, ಖಜಾಂಚಿ ಎ.ಸಿ.ಮುನಿಕೃಷ್ಣಪ್ಪ, ಚೌಡೇಶ್ವರಿ ವಾರ್ಡ್ ಬಿಜೆಪಿ ಅಧ್ಯಕ್ಷ ವಿ.ವಿ.ರಾಮಮೂರ್ತಿ, ಕೆಂಪೇಗೌಡ ವಾರ್ಡ್ ಅಧ್ಯಕ್ಷ ನರಸಿಂಹ ಮೂರ್ತಿ, ಅಟ್ಟೂರು ವಾರ್ಡ್ ಅಧ್ಯಕ್ಷ ನಾರಾಯಣಸ್ವಾಮಿ, ಯಲಹಂಕ ಉಪನಗರ ವಾರ್ಡ್ ಅಧ್ಯಕ್ಷ ಎಸ್.ರಾಜಣ್ಣ, ನಗರ ಮಂಡಲ ಉಪಾಧ್ಯಕ್ಷ ಎ.ಎಸ್.ರಾಜಾ, ಎ.ಎನ್.ರಾಜಣ್ಣ, ಯುವ ಮೋರ್ಚಾ ಅಧ್ಯಕ್ಷ ಎ.ಎಸ್.ಕಿರಣ್, ಬಿಜೆಪಿ ಮುಖಂಡರಾದ ದಾಡಿ ರಾಜಣ್ಣ, ಬಿ.ಹರಿನಾಥ್, ವೇಣುಗೋಪಾಲ್, ದಾಮೋದರ್(ಸಾಮಾಜಿಕ ಜಾಲತಾಣ), ನಾಗೇನಹಳ್ಳಿ ಶಿವಕುಮಾರ್, ಅಟ್ಟೂರು ವಿಶ್ವ, ಸುನಿಲ್ ಕುಮಾರ್,ಮುನಿರಾಜು, ಆಟೋಶಿವು, ಶಿವಕುಮಾರ್, ರಂಗಸ್ವಾಮಿ(ಕಂಟ್ರ್ಯಾಕ್ಟರ್), ರಂಗಸ್ವಾಮಿ(ಪೇಪರ್), ಶ್ರೀನಿವಾಸ್, ಮಹಿಳಾ ಮುಖಂಡರಾದ ಜಮುನಾ, ಶಾಂತಮ್ಮ, ಯುವ ಮೋರ್ಚಾದ ಶರತ್, ವಿನೋದ್ ಸೇರಿದಂತೆ ಇನ್ನಿತರರಿದ್ದರು.