


45 ದಿನಗಳ ಸರಳ ಯೋಗ ಶಿಬಿರಕ್ಕೆ ಚಾಲನೆ :
ಯಲಹಂಕ : ಶ್ರೀ ಕಣ್ವಮಠ, ಯಲಹಂಕ ವತಿಯಿಂದ ಆಯೋಜಿಸಿರುವ 45 ದಿನಗಳ ಸರಳ ಯೋಗ ಶಿಬಿರಕ್ಕೆ ಶ್ರೀ ಮಠದ ಪೀಠಾಧ್ಯಿಪತಿಗಳಾದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಿದರು.
ಈ ವೇಳೆ ಕಣ್ವ ಟ್ರಸ್ಟ್ ನ ಕಾರ್ಯದರ್ಶಿ, ಶಿಬಿರದ ರುವಾರಿ ಡಾ.ವೈ.ವಿ.ನಾಗರಾಜ್ ಅವರು ಮಾತನಾಡಿ ‘ಯೋಗಾಭ್ಯಾಸದ ಆಧ್ಯ ಪ್ರವರ್ತಕರಾದ ಪತಂಜಲಿ ಮಹರ್ಷಿಗಳಿಂದ ಆರಂಭಗೊಂಡು, ಇಂದಿನವರೆಗೂ ಅವ್ಯಾಹತವಾಗಿ ಸಾಗಿ ಬಂದಿರುವ ಅಪ್ಪಟ ಭಾರತೀಯ ಕಲೆ ಯೋಗಾಭ್ಯಾಸವು ಆರೋಗ್ಯ ಸಂರಕ್ಷಣೆಯ ನಿಟ್ಟಿನಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಯೋಗಾಭ್ಯಾಸ ದಿಂದ ಮನುಷ್ಯ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳುಬಹುದಾಗಿದೆ. ಇತ್ತೀಚಿನ ವರೆಗೂ ಭಾರತಕ್ಕಷ್ಟೇ ಸೀಮಿತವಾಗಿದ್ದ ಯೋಗ ಕಲೆಗೆ ವಿಶ್ವಮಾನ್ಯತೆಯ ಹೆಗ್ಗಳಿಕೆ ತಂದುಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಯೋಗ ಇಂದು ಪಾಶ್ಚಾತ್ಯ ದೇಶಗಳಲ್ಲಿ ದೈನಂದಿನ ಅಭ್ಯಾಸವಾಗಿ ಮಾರ್ಪಟ್ಟಿದೆ. ಯೋಗಕ್ಕಾಗಿಯೇ ಮೀಸಲಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ, ಎಂದು ಯೋಗಾಭ್ಯಾಸ ಆರಂಭದಿಂದ ಇಂದಿನ ವರೆಗೂ ಸಾಗಿ ಬಂದಿರುವ ಹಾದಿ, ಜನಸಾಮಾನ್ಯರಿಗೆ ಯೋಗವನ್ನು ತಲುಪುವಂತೆ ಮಾಡಿದ ಮಹನೀಯರ ಕೊಡುಗೆಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಕಣ್ವ ಟ್ರಸ್ಟ್ ನ ಅಧ್ಯಕ್ಷ ವೈ.ಎನ್.ಗುರುರಾಜರಾವ್, ತಾಲ್ಲೂಕು ಬ್ರಾಹ್ಮಣ ಸಂಘ, ಯಲಹಂಕದ ಕಾರ್ಯದರ್ಶಿ ಭೀಮಸೇನಾಚಾರ್, ಸಂಗೀತ ವಿದುಷಿ ಸೀತಾಲಕ್ಷ್ಮಿ, ರಾಜ್ಯ ಉಚ್ಛ ನ್ಯಾಯಾಲಯದ ವಕೀಲರು, ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಕಾನೂನು ಸಲಹೆಗಾರರಾದ ಅಂಜನ್ ಕುಮಾರ್, ವಿಶ್ರಾಂತ ತಹಶಿಲ್ದಾರ್ ಹನುಮಂತರಾವ್, ಕಣ್ವ ಟ್ರಸ್ಟ್ ನ ಖಜಾಂಚಿ ವೆಂಕಟೇಶ್ ಮೂರ್ತಿ ಸೇರಿದಂತೆ ಟ್ರಸ್ಟ್ ನ ಇತರ ಸದಸ್ಯರಿದ್ದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
Public power R hanumanthu
Kogilu layout Yelahanka
9845085793