
ಮರಳಕುಂಟೆ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನೆರವೇರಿದ ವೈಕುಂಠ ಏಕಾದಶಿ :
ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿ ಮಾರೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಮರಳಕುಂಟೆ(ಸೈಕತಪುರಿ)ಯಲ್ಲಿ ನೆಲೆಸಿರುವ ಐತಿಹಾಸಿಕ ಮಹತ್ವದ ಸ್ಥಳ ‘ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ’ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ 12ನೇ ವರ್ಷದ ವೈಕುಂಠ ಏಕಾದಶಿ ಮಹೋತ್ಸವ ಅತ್ಯಂತ ವಿಜೃಂಭಣೆ ಮತ್ತು ಶಾಸ್ತ್ರೋಕ್ತವಾಗಿ ನೆರವೇರಿತು.
ಮಹತ್ವದ ಈ ವೈಕುಂಠ ಏಕಾದಶಿ ಮಹೋತ್ಸವ ದಲ್ಲಿ ಗಣ್ಯಾತಿಗಣ್ಯರು ಸೇರಿದಂತೆ ಸ್ವಾಮಿಯ ಸಹಸ್ರಾರು ಭಕ್ತರು ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಗೆ ಭಕ್ತಿಯಿಂದ ನಮಿಸಿ ಕೃತಾರ್ಥರಾದರು.
ಶ್ರೀಯವರ ಕ್ಷೇಮಾಭಿವೃದ್ಧಿ ಸಮಿತಿ, ಶ್ರೀ ಯವರ ಜೀರ್ಣೋದ್ಧಾರ ಸಮಿತಿ, ಮರಳಕುಂಟೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವೈಕುಂಠ ಏಕಾದಶಿ ಪ್ರಯುಕ್ತ ಬೆಳಿಗ್ಗೆ 3.30ರಿಂದ ಲೋಕ ಕಲ್ಯಾಣಾರ್ಥವಾಗಿ ಶ್ರೀ ಯವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಬೆಳಿಗ್ಗೆ 4.30ಕ್ಕೆ ವೈಕುಂಠ ದ್ವಾರ ಪೂಜೆ, ಬೆಳಿಗ್ಗೆ 6ಕ್ಕೆ ಮಹಾಮಂಗಳಾರತಿ ನೆರವೇರಿಸಿದರು. ನಂತರ ಭಕ್ತಾಧಿಗಳಿಗೆ ದೇವರ ದರ್ಶನ ಮತ್ತು ವೈಕುಂಠ ದ್ವಾರ ಪ್ರವೇಶ ನೆರವೇರಿತು. ವೈಕುಂಠ ಏಕಾದಶಿ ಪ್ರಯುಕ್ತ ಬೆಳಿಗ್ಗೆ ಯಿಂದ ಸಂಜೆಯವರೆಗೂ ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ, ಲಾಡು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಈ ದೈವ ಕಾರ್ಯದ ಪ್ರಯುಕ್ತ ದೇವಾಲಯದ ಮುಖ್ಯ ರಸ್ತೆಗೆ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ದೇವಾಲಯಕ್ಕೆ, ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದ ಮಂಜುದಾಸರು ಮತ್ತು ಗಿರಿಜಾ ರಘು ಇವರಿಂದ ಭಕ್ತಿ ಗೀತೆಗಳ ಗಾಯನ, ಗಿರೀಶ್ ಸೂಲಿಬೆಲೆ, ದೇವರಾಜ್ ಇವರ ತಂಡದಿಂದ ವಾದ್ಯವೃಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಜೆ 6.30ಕ್ಕೆ ಪ್ರಖ್ಯಾತ ಜಾದೂಗಾರ ಪ್ರಹ್ಲಾದ್ ಆಚಾರ್ಯ ಇವರಿಂದ ಮ್ಯಾಜಿಕ್ ಶೋ ಕಾರ್ಯಕ್ರಮ, ಮಾತನಾಡುವ ಬೊಂಬೆ, ಯಕ್ಷಗಾನ ನೃತ್ಯ, ನೆರಳು ಬೆಳಕು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ವೈಕುಂಠ ಏಕಾದಶಿಯ ವಿಜೃಂಭಣೆಯ ಈ ದೈವ ಕಾರ್ಯಕ್ರಮದಲ್ಲಿ ಯಲಹಂಕ ತಾಲ್ಲೂಕು ತಹಶಿಲ್ದಾರ್, ಮುಜರಾಯಿ ಅಧಿಕಾರಿಗಳಾದ ಶ್ರೇಯಸ್ ಜಿ.ಎಸ್., ಬಾಗಲೂರು ನಾಡ ಕಚೇರಿಯ ಉಪ ತಹಶಿಲ್ದಾರ್ ಆನಂದ್, ಬಾಗಲೂರು ಠಾಣೆಯ ವೃತ್ತ ನಿರೀಕ್ಷಕರಾದ ಶಬರೀಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಶ್ರೀ ಯವರ ಅಸಂಖ್ಯಾತ ಭಕ್ತರು ಪಾಲ್ಗೊಂಡು, ವೈಕುಂಠ ಏಕಾದಶಿ ಮಹೋತ್ಸವಕ್ಕೆ ವಿಶೇಷತೆಯ ಮೆರಗು ತಂದುಕೊಟ್ಟರು.
ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಯವರ ಕ್ಷೇಮಾಭಿವೃದ್ಧಿ ಟ್ರಸ್ಟ್, ಶ್ರೀ ಯವರ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಿಗೆ ಮತ್ತು ಮರಳಕುಂಟೆ ಗ್ರಾಮದ ಹಿರಿಯ ನಾಗರೀಕರಿಗೆ ಗ್ರಾಮದ ಮುಖಂಡರು, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕಮಲಮ್ಮ ಮುನಿರಾಮಣ್ಣ, ವಿ.ನಾರಾಯಣಸ್ವಾಮಿ, ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಸುಧಾರಮೇಶ್, ಗ್ರಾ.ಪಂ.ಸದಸ್ಯ ಎಂ.ಕೃಷ್ಣಪ್ಪ, ಮಾಜಿ ಸದಸ್ಯ ಎಂ.ಸಿ.ನಾರಾಯಣಸ್ವಾಮಿ ಇವರ ಪ್ರಾಯೋಜಕತ್ವದಲ್ಲಿ ಗೌರವ ಸನ್ಮಾನ ಏರ್ಪಡಿಸಲಾಗಿತ್ತು.
ಮಹತ್ವದ ಈ ಕಾರ್ಯಕ್ರಮದಲ್ಲಿ ಶ್ರೀ ಯವರ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಅಂಗಡಿ ತಿಮ್ಮಣ್ಣ, ಗ್ರಾಮದ ಮುಖಂಡರಾದ ಸುರೇಶ್, ಬೈರಪ್ಪ, ಮರಳಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಮಣ್ಣ (ಎಂ.ಆರ್.),ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಸುಧಾರಮೇಶ್, ಗ್ರಾ.ಪಂ.ಸದಸ್ಯರಾದ ವಿ.ನಾರಾಯಣಸ್ವಾಮಿ, ಕೃಷ್ಣಪ್ಪ, ಮುಖಂಡರಾದ ಮಂಜುನಾಥ್, ಶ್ಯಾಮಣ್ಣ, ವಿಜಯಕುಮಾರ್, ಶಶಿಕುಮಾರ್, ಚನ್ನಕೇಶವ, ಪ್ರಮೋದ್, ಭಾಸ್ಕರ್, ಪ್ರಕಾಶ್, ಮುನಿಕೃಷ್ಣಪ್ಪ, ರಾಮಣ್ಣ, ಹಾಲು ಮಂಜುನಾಥ್ ಸೇರಿದಂತೆ ಮರಳಕುಂಟೆ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
Public power
Kogilu layout Yelahanka
9845085793