


ಶ್ರೀಮತ್ಕಾಶೀ ಜ್ಞಾನಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸುಂದರವಾಗಿ ರಚಿಸಿರುವ ಲಿಂಗಾಷ್ಟಕವನ್ನು ವಿದೂಷಿ ಶ್ರೀಮತಿ. ಸುನಿತಾ ಸುಕುಮಾರನ್ ರವರು ನೃತ್ಯ ಸಂಯೋಜಿಸಿದ್ದರು. ದಿನಾಂಕ 10 ಜನವರಿ ರಂದು ನಡೆದ ” ಶಿವಕಮಲ ಸಾಹಿತ್ಯ ಪ್ರಶಸ್ತಿ ” ಪ್ರದಾನ ಸಮಾರಂಭ ಮತ್ತು ಸಮಾರೋಪ ಸಮಾರಂಭದಲ್ಲಿ ವಿದೂಷಿ ಶ್ರೀಮತಿ ಸುನಿತಾ ಸುಕುಮಾರನ್ ರವರು ಸ್ಥಾಪಿಸಿರುವ ಶ್ರೀ ಕೃಷ್ಣ ಕಲಾಲಯದ ಹಿರಿಯ ವಿದ್ಯಾರ್ಥಿಗಳು ಲಿಂಗಾಷ್ಟಕಂ ನೃತ್ಯ ಪ್ರದರ್ಶನವನ್ನು ಯಶಸ್ವಿಯಾಗಿ ನೀಡಿದರು. ಕು. ಕೀರ್ತನಾ. ಪಿ, ಕು. ಕೀರ್ತನಾ. ರವಿಶಂಕರ್ ,ಕು. ಲಿಕಿತಾ. ಎಸ್, ಕು. ಎಮ್ ಲಿಖಿತ, ಕು ಲೇಖನ.ಡಿ.ಆರ್, ಕು. ಮಾನ್ಯ.ಎಮ್, ಕು. ಕೆ. ಕೆ. ಪಂಚಮಿ ರವರು ನೃತ್ಯ ಪ್ರದರ್ಶನವನ್ನು ನೀಡಿ ಭಕ್ತಾದಿಗಳ ಹಾಗೂ ಕಲಾರಸಿಕರ ಮನ ಸೆಳೆದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಭರತನಾಟ್ಯ ಕಲೆಯ ಮೂಲಕ ಈ ಆಧ್ಯಾತ್ಮಿಕ ಸಂಯೋಜನೆಯನ್ನು ಜೀವಂತಗೊಳಿಸುತ್ತಿರುವುದು ಅಪಾರ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿದೆ.