ಚಾಮರಾಜಪೇಟೆಯಲ್ಲಿ ನಿನ್ನೆ ರಾತ್ರಿ ಮಲಗಿರುವ ಮೂರು ಹಸುಗಳ ಕೆಚ್ಚಲು ಕತ್ತರಿಸಿರುವ ಘಟನೆ ಅತ್ಯಂತ ಕ್ರೂರ ಮತ್ತು ಅಮಾನವೀಯವಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಇದೊಂದು ಭಯೋತ್ಪಾದಕ ಕೃತ್ಯ. ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ದುರುದ್ದೇಶದಿಂದ ಮಾಡಿದ್ದಾರೆ. 33 ಕೋಟಿ ದೇವತೆಗಳ ವಾಸಸ್ಥಾನವಾದ ಪವಿತ್ರ ಗೋಮಾತೆಯ ಮೇಲೆ ಮಾಡಿದ ಕ್ರೌರ್ಯ ಭಯೋತ್ಪಾಧನೆಗೆ ಸಮವಾಗಿದೆ. ಅಪರಾಧಿಗಳ ಕೂಡಲೇ ಬಂಧನ ಅಗಬೇಕು. ಪ್ರಾಣಿಗಳ ಮೇಲೆ ಹಲ್ಲೆ ನಡೆದಾಗ ಬೊಬ್ಬೆ ಹಾಕುವ ಪೇಟಾ ಸಂಸ್ಥೆಯು ಈಗ ಮೌನವಾಗಿರುವುದು ಖಂಡನೀಯವಾಗಿದೆ. ಎಲ್ಲರೂ ಸೇರಿ ಇಂತಹ ಅಪರಾಧಿಗಳ ಹೆಡೆಮುರಿ ಕಟ್ಟಬೇಕು. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.