ಸಿಂಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಿಜೆಪಿ ತೆಕ್ಕೆಗೆ :

ಬ್ಯಾಟರಾಯನಪುರ : ಕ್ಷೇತ್ರದ ಸಿಂಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಒಟ್ಟು 11 ಸದಸ್ಯ ಬಲದ ಪೈಕಿ  ಬಿಜೆಪಿ ಬೆಂಬಲಿತ 9 ಜನ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲಾಗಿತ್ತು, ಇದರಲ್ಲಿ 8 ಜನ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸಿಂಗಹಳ್ಳಿ ಸಹಕಾರ ಸಂಘವು ಬಿಜೆಪಿ ತೆಕ್ಕೆಗೆ ಸೇರಿದಂತಾಗಿದೆ. ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿನ ಸಹಕಾರ ಸಂಘಗಳ ಪೈಕಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವ ಏಕೈಕ ಸಹಕಾರ ಸಂಘವಾಗಿ ಸಿಂಗಹಳ್ಳಿ ಸಹಕಾರ ಸಂಘ ಹೊರಹೊಮ್ಮಿದೆ. 

ಬ್ಯಾಟರಾಯನಪುರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನಿಸಿದ್ದರೂ ಸಹ ಸಿಂಗಹಳ್ಳಿ ಸಹಕಾರ ಸಂಘವನ್ನು ಬಿಜೆಪಿ ಯವರು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದು ಹೊಸದೊಂದು ಮೈಲಿಗಲ್ಲು ಮೂಡಿಸಿದಂತಾಗಿದೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ  ಸ್ಪರ್ಧಿಸಿದ್ದ ಆರ್.ಗೋವಿಂದಪ್ಪ, ಬಿ.ಎಂ.ಜಗನ್ನಾಥ್,  ಆರ್.ಹನುಮಂತಪ್ಪ, ಜಿ.ಪ್ರಶಾಂತ್ ಅನಿತಾ ಕೆ., ಬಿ.ವಿ.ಭಾಗ್ಯಲಕ್ಷ್ಮಿ, ಜಿ.ಪ್ರಕಾಶ್, ಮುನಿಯಪ್ಪ(ಕಾಕಣ್ಣ) ಸೇರಿದಂತೆ ಒಟ್ಟು 8 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಿಂಗಹಳ್ಳಿ ಯಲ್ಲಿ ಬಿಜೆಪಿ ಪಕ್ಷದ ಮುಖಂಡರು ತಮ್ಮ ಹಿಡಿತ ಸಾಧಿಸಿದ್ದಾರೆ.

ಉಳಿದಂತೆ ಬಿ.ಕೆ.ನಾರಾಯಣಸ್ವಾಮಿ, ಮುರಳಿ ಎನ್.,ಸುರೇಶ್ ಕೆ.(ಬಿಸಿಎಂ-ಎ) ಗೆಲುವು ಸಾಧಿಸಿದ್ದಾರೆ.

ಸಹಕಾರ ಸಂಘದ ನೂತನ ನಿರ್ದೇಶಕರನ್ನು ಗ್ರಾಮ ಪಂಚಾಯತಿ ಮಾಜಿ‌ ಅಧ್ಯಕ್ಷ ಜಗದೀಶ್ ಎನ್., ಸದಸ್ಯ ನವೀನ್ ಎನ್., ಬಿಜೆಪಿ ಮುಖಂಡರಾದ ಹನುಮಂತೇಗೌಡ, ತಿಮ್ಮೇಗೌಡ, ರಾಜಶೇಖರ್, ಸುಬ್ರಮಣಿ, ಸಿ.ಎನ್.ನಾರಾಯಣಸ್ವಾಮಿ ಮತ್ತಿತರರು ನೂತನ ನಿರ್ದೇಶಕರಿಗೆ ಪುಷ್ಪಮಾಲಿಕೆಯೊಂದಿಗೆ ಅಭಿನಂದಿಸಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *