ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಸತೀಶ್ ಕಡತನಮಲೆ ಆಯ್ಕೆ :

ಯಲಹಂಕ : ಯಲಹಂಕ ಕ್ಷೇತ್ರದ ಅರಕೆರೆ ಗ್ರಾ.ಪಂ.ವ್ಯಾಪ್ತಿಯ ‘ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘ’ದ ನಿರ್ದೇಶಕರಾಗಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಆಯ್ಕೆಯಾಗಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದ ರಾಮಯ್ಯ ಎಂಬುವರ ರಾಜಿನಾಮೆ ಯಿಂದ ತೆರವಾದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಸತೀಶ್ ಕಡತನಮಲೆ ಅವರು 45 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದರು.

ನೂತನ ನಿರ್ದೇಶಕ ಸತೀಶ್ ಕಡತನಮಲೆ ಅವರನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ಅರಕೆರೆ ಗ್ರಾ.ಪಂ‌.ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ಹಾಲು ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಡತನಮಲೆ ಗ್ರಾಮದ ಮುಖಂಡರು ಅಭಿನಂದಿಸಿ, ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಎಚ್.ಡಿ.ಕೃಷ್ಣಪ್ಪ, ಬ್ಯಾತ ಸುರೇಶ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ನಂಜುಂಡಪ್ಪ, ಮಾಜಿ ತಾ.ಪಂ.ಅಧ್ಯಕ್ಷ ಮುನಿದಾಸಪ್ಪ, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಆರಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಗ್ರಾ.ಪಂ.ಉಪಾಧ್ಯಕ್ಷ ಮಂಜುನಾಥ್, ಸದಸ್ಯರಾದ ಕೆ.ಎಂ.ಅರಸೇಗೌಡ, ಗಾಯತ್ರಿ ಪ್ರಸನ್ನ, ಮುನಿಕೃಷ್ಣಪ್ಪ, ಚೊಕ್ಕನಹಳ್ಳಿ ನಾಗೇಶ್, ಸಿಎಲ್ಎನ್ ಗೌಡ, ಎಂ.ರಾಮಯ್ಯ, ಕೆ.ಎಂ.ಸುರೇಶ್, ಕೆ.ಎಂ.ಮಲ್ಲಿಕಾರ್ಜುನ, ಕಾರ್ಲಾಪುರ ಶ್ರೀನಿವಾಸ್, ಅರಕೆರೆ ತಿಮ್ಮೇಗೌಡ, ಅನಿಲ್ ಬೈರಾಪುರ, ರಾಜೇಂದ್ರ ಬೈರಾಪುರ,ಕಕ್ಕೇಹಳ್ಳಿ ತಿಮ್ಮೇಗೌಡ, ಹನುಮಂತ ರಾಯಪ್ಪ,ಕೆ.ಟಿ.ಚಿನ್ನಪ್ಪಯ್ಯ,ಕೆ.ಆರ್.ರಾಮಣ್ಣ, ಡಂಕಣಾಚಾರ್, ಕೃಷ್ಣಪ್ಪ, ಲಕ್ಷ್ಮೀನಾರಾಯಣಗೌಡ, ಲಕ್ಷ್ಮಣ್, ಮಂಜುನಾಥ್, ಬೈರಾಪುರ ಮುನಿಕೃಷ್ಣಪ್ಪ, ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಾಂಡುರಂಗಪ್ಪ, ನಿರ್ದೇಶಕರಾದ ನಂಜೇಗೌಡ, ಕೆ.ಸಿ.ಅರಸೇಗೌಡ, ಚನ್ನೇಗೌಡ ಕೆ.ಎಂ., ಜಿನ್ನರಾಜು, ಮುತ್ತುರಾಯಪ್ಪ, ನಾಗರಾಜ್, ಸೌಭಾಗ್ಯ, ಜಯಲಕ್ಷ್ಮಮ್ಮ, ನಾಗರತ್ನಮ್ಮ, ರಂಜಿತಾ ಸೇರಿದಂತೆ ಗ್ರಾಮಸ್ಥರು ಹಾಗೂ ಹಲವು ಮುಖಂಡರಿದ್ದರು.

Leave a Reply

Your email address will not be published. Required fields are marked *