
ದಿನಾಂಕ 23 -2 -2025ರ ಭಾನುವಾರ ಬಿ.ಕೆಮರಿಯಪ್ಪ ಧರ್ಮ ಸಂಸ್ಥೆ ಆಯೋಜಿಸಿದ್ದ ಅಂತರ ವಿದ್ಯಾರ್ಥಿನಿಲಯಗಳ ಸಾಹಿತ್ಯ ಮತ್ತು ಸಂಸ್ಕೃತಿ ಸ್ಪರ್ಧೆಗಳ ತೀರ್ಪುಗಾರರಾಗಿ ಬಸವೇಶ್ವರವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದ ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠ ರವರು ತೀರ್ಪು ನೀಡಿ ಚರ್ಚಾ ಸ್ಪರ್ಧೆ ಮತ್ತು ಆಶುಭಾಷಣ ಸ್ಪರ್ಧೆಗಳಿಂದ ವಿದ್ಯಾರ್ಥಿಗಳು ತಮ್ಮ ಭಾಷಣ ಕಲೆಯನ್ನು ವೃದ್ಧಿ ಪಡಿಸಿಕೊಳ್ಳಬಹುದೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಹತೀರ್ಪುಗಾರರಾಗಿ ತೀರ್ಪು ನೀಡಿದ ಸಹಾಯಕ ಪ್ರಾಧ್ಯಾಪಕರಾದ ಶ್ರೀಗಿರೀಶ್ ಪಿಹೆಚ್ ರವರು ಇಂತಹ ಸ್ಪರ್ಧೆಗಳು ಹಾಸ್ಟಲ್ ವಿದ್ಯಾರ್ಥಿಗಳು ಆದರ್ಶ ಸಂಬಂಧ ಹೊಂದಲು ಸಾಧ್ಯವಾಗುತ್ತದೆಯೆಂದು ತಿಳಿಸಿದರು. ಒಟ್ಟು 60 ಸ್ವರ್ಥಿಗಳು 15ವಿವಿಧ ಹಾಸ್ಟಲ್ಲುಗಳಿಂದ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.