ಸಿಂಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ :

ಬ್ಯಾಟರಾಯನಪುರ : ಕ್ಷೇತ್ರದ ಬಂಡಿಕೊಡಿಗೇಹಳ್ಳಿ ಗ್ರಾ.ಪಂ‌. ವ್ಯಾಪ್ತಿಯ ‘ಸಿಂಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ ನೂತನ ಅಧ್ಯಕ್ಷರಾಗಿ ಸಿಂಗಹಳ್ಳಿ ಗ್ರಾಮದ ಆರ್.ಹನುಮಂತಗೌಡ, ಉಪಾಧ್ಯಕ್ಷರಾಗಿ ಅರೇಬನ್ನಿಮಂಗಲ ಗ್ರಾಮದ ಬಿ.ಎಂ.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಿಂಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು 11 ಜನ ಸದಸ್ಯರಿದ್ದು, ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ 8 ಮತಗಳನ್ನು ಪಡೆಯುವ ಮೂಲಕ ಕ್ರಮವಾಗಿ ಅಧ್ಯಕ್ಷರಾಗಿ ಆರ್.ಹನುಮಂತಗೌಡ, ಉಪಾಧ್ಯಕ್ಷರಾಗಿ ಬಿ.ಎಂ.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಗ್ರಾ.ಪಂ.ಹಾಲಿ, ಮಾಜಿ ಅಧ್ಯಕ್ಷರು, ಸದಸ್ಯರು, ಬಿಜೆಪಿ ಮುಖಂಡರು, ಗ್ರಾಮಸ್ಥರು ಗೌರವ ಸನ್ಮಾನ ನೀಡಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಗದೀಶ್ ಎನ್., ಹಾಲಿ ಅಧ್ಯಕ್ಷೆ ಪವಿತ್ರ ಸುಬ್ರಮಣಿ, ಬಿಜೆಪಿ ಯುವ ಮುಖಂಡ ಬಿ.ಕೆ.ಚಂದ್ರಮುರಳಿ, ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತಿಮ್ಮೇಗೌಡ,ಗ್ರಾ.ಪಂ.ಮಾಜಿ ಅಧ್ಯಕ್ಷೆ ಚೈತ್ರ ರಾಜಶೇಖರ್, ಗ್ರಾ.ಪಂ.ಸದಸ್ಯರಾದ ಸಿಂಗಹಳ್ಳಿ ನವೀನ್, ನಾರಾಯಣಸ್ವಾಮಿ ಎನ್., ಮುಖಂಡರಾದ ಯು.ಕೇಶವಮೂರ್ತಿ, ಮುನೇಗೌಡ, ಗಿರೀಶ್, ಪ್ರದೀಪ್, ಹರೀಶ್, ಆಂಜಿನಪ್ಪ(ಮಯೂರ್), ಬಿ.ಎಂ‌.ನಾರಾಯಣಸ್ವಾಮಿ, ಜಗದೀಶ್ ಎಂ., ಗೋಪಾಲಪ್ಪ, ಮಂಜುನಾಥ್, ಸಹಕಾರ ಸಂಘದ ನಿರ್ದೇಶಕರಾದ ಬಿ.ವಿ.ಭಾಗ್ಯಲಕ್ಷ್ಮಿ, ಅನಿತಾ ಕೆ., ಜಿ.ಪ್ರಶಾಂತ್, ಆರ್.ಗೋವಿಂದಪ್ಪ, ಮುನಿಯಪ್ಪ(ಕಾಕಣ್ಣ), ಜಿ.ಪ್ರಕಾಶ್ (ರಾಮು) ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *