






ಇದೇ ಪೆ.26 ರಿಂದ ಮಾ. 2 ರವರೆಗೆ ಗೋಕುಳ ವೀರಭದ್ರೇಶ್ವರ ಅದ್ಧೂರಿ ಜಾತ್ರಾ ಮಹೋತ್ಸವ
ಬಯಲು ಸಿಂಹ ಸುದ್ಧಿ
ಬಸವಕಲ್ಯಾಣ: ತಾಲ್ಲೂಕಿನ ಗೋಕುಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ 9ನೇ ಜಾತ್ರಾ ಮಹೋತ್ಸವ ನಿಮಿತ್ತ ಇದೇ ಪೆ.26 ರಿಂದ ಮಾರ್ಚ್. 2, 2025ರ ವರೆಗೆ ಜರುಗಲಿದ್ದು, ಮಹಾಂತೇಶ್ವರ ಮಠ ಚಿನ್ಮಯಗಿರಿ ಹುಮನಾಬಾದ ವೀರ ರೇಣುಕಾ ಶಿವಾಚಾರ್ಯರ ಸಾನಿಧ್ಯದಲ್ಲಿ ತ್ರಿಪುರಾಂತ ಗವಿಮಠದ ಡಾ.ಅಭಿನವ ಘನಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಬುಧವಾರ ಮಹಾ ಶಿವರಾತ್ರಿ ಉತ್ಸವ ಮೂರ್ತಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮ ಹಾಗೂ ಸಾಯಂಕಾಲ 7 ಗಂಟೆಯಿಂದ 8ಗಂಟೆವರೆಗೆ ಉತ್ಸವ ಮೂರ್ತಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮ ಪೂಜ್ಯ. ಶ್ರೀ ಷ.ಬ್ರ.ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಂಸ್ಥಾನ ಗವಿ ಮಠ ತಿಪುರಾಂತ ಇವರು ಪ್ರವಚನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಫೆ. 27ರಂದು ಗುರುವಾರ ಬೆಳಿಗ್ಗೆ ಉತ್ಸವ ಮೂರ್ತಿಗೆ ನಿರಂತರ ರುದ್ರಾಭಿಷೇಕ ರಾತ್ರಿ. 8. ಗಂಟೆಗೆ ವೀರ ಮಹಾಂತ ಶಿವಾಚಾರ್ಯರು ಇವರಿಂದ ಪ್ರವಚನ ನಡೆಸಿಕೊಡಲಿದ್ದಾರೆ. ಫೆ.28ಕ್ಕೆ ಶುಕ್ರವಾರ. ಬೆಳಗ್ಗೆ. ಉತ್ಸವ ಮೂರ್ತಿಗೆ ನಿರಂತರ ಸಂಗೀತ ರುದ್ರಭಿಷೇಕ. ರಾತ್ರಿ. 8. ಗಂಟೆಗೆ ಪೂಜ್ಯ. ಷ. ಬ್ರ. ಶಿವಾನಂದ ಶಿವಾಚಾರ್ಯರು. ಶಿವಾನಂದ ಆಶ್ರಮ ತಮೂಲರ ಇವರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ .
ಸಂಜೆ ಸಾಂಸ್ಕೃತಿಕ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ತಡೋಳಾದ ರಾಜೇಶ್ವರ್ ಶಿವಾಚಾರ್ಯರಿಂದ ಜರುಗಲಿದ್ದು, ಮಾ. 1, 2025ರಂದು ಶನಿವಾರ ಬೆಳಗ್ಗೆ ಅಗ್ನಿ ಪೂಜೆ. ಸೇರಿದಂತೆ ಮಾ. 2ರಂದುರವಿವಾರ. ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ರಥೋತ್ಸವ ಜರುಗಲಿದೆ. ರಥೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ ಸೇರಿ ವಿವಿಧ ಪಕ್ಷಗಳ ರಾಜಕೀಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಗೋಕುಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಸಾಯಿ ಸಮಿತಿ ಹಾಗೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.