





ಯುಕೆಜಿ ವಿದ್ಯಾರ್ಥಿಗಳಿಗಾಗಿ ಘಟಿಕೋತ್ಸವ
ಯಲಹಂಕ. ವಿದ್ಯಾರ್ಥಿಗಳು ಪದವಿಯ ಜೊತೆಗೆ ಉತ್ತಮ ಸಂವಹನ ಶೀಲತೆಯನ್ನು ಸಹ ಬೆಳೆಸಿಕೊಳ್ಳಬೇಕು ಎಂದು ಕೋಗಿಲಿನ ಆಕ್ಸ್ಫರ್ಡ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಹೇಳಿದರು.
ಅವರು ಆಕ್ಸ್ಫರ್ಡ್ ಆಂಗ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು 22.2.25 ಶನಿವಾರದಂದು ಏರ್ಪಡಿಸಿದ್ದ ಘಟಿಕೋತ್ಸವ ಹಾಗೂ ವಿದಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪದವಿಯನ್ನು ಪಡೆಯುವುದು ಅಷ್ಟೇ ಮುಖ್ಯ ಗುರಿಯಾಗಬಾರದು ಅದರೊಂದಿಗೆ ಉತ್ತಮ ಗುಣಗಳನ್ನು ಸಹ ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಯು.ಕೆ.ಜಿ ತೇರ್ಗಡೆಯಾಗುತ್ತಿರುವ ಮಕ್ಕಳಿಗೆ ಪದವಿ ಪ್ರಧಾನವನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ನೀಡಿದ ಪದವಿ ಪ್ರಮಾಣ ಪತ್ರವನ್ನು ಮಕ್ಕಳು ತಮ್ಮ ಪುಟ್ಟ ಪುಟ್ಟ ಕೈಗಳಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಯು.ಕೆ.ಜಿ ಮಕ್ಕಳಾದ ಅಜಿತ್ ಹಾಗೂ ಪ್ರಿನ್ಸ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಶ್ರೀಮತಿ ಉಷಾದೇವಿ ನಡೆಸಿಕೊಟ್ಟರೆ, ಪುಟಾಣಿಗಳಾದ ವೃಂದ,(ಇಂಗ್ಲಿಷ್) ಹರಿಣಿ(ಕನ್ನಡ) ಹಾಗೂ ಮೊಹಮ್ಮದ್ ಆತೇಶಾಮ್ ಅಹಮದ್ (Hindi) ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆದು ಮೆಚ್ಚುಗೆ ಪಡೆಯಿತು. ಹತ್ತನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿದಾಯ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿದಾಯ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಆಕ್ಸ್ಫರ್ಡ್ ಸಂಸ್ಥೆಯ ಪಿಯುಸಿ ನಿರ್ವಾಹಕರಾದ ಶ್ರೀಮತಿ ಶೋಭಾ ರಾಜ್ ಅವರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಈ ಘಟ್ಟ ಮುಖ್ಯವಾಗಿದ್ದು ಎಚ್ಚರಿಕೆಯಿಂದ ಮುನ್ನಡೆದು ಗುರಿಯನ್ನು ಸಾಧಿಸಬೇಕಾಗಿದೆ ಎಂದು ಹೇಳಿದರು.
ಉತ್ತಮ ಫಲಿತಾಂಶದೊಂದಿಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಅವರು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ನಿರೂಪ ನಿರೂಪಣೆಯನ್ನು ಶ್ರೀಮತಿ ಸಹನ ಹಾಗೂ ಶ್ರೀ ಶಶಿಧರ್ ಅವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಾದ ಮನೀಶ್ ಗೌಡ, ಏಬಲ್ ಚೌರಿ, ನೂರ್ ಫಾತಿಮಾ, ವಿನಯ್, ಹಜೀರ ಅಶೋಕ್, ರಿತಿಕಾ ಕತ್ರಿ, ವೈಭವಿ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಮತಿ ಮಂಗಳ ವಿಠಲ್ ಅವರು ಮಾಡಿದರು.
ಕಾರ್ಯಕ್ರಮದಲ್ಲಿ ಆಕ್ಸ್ಫರ್ಡ್ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಶ್ರೀ ರಾಜು ಶ್ರೀಮತಿ ಸುಜಾತ ರಾಜು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ಪೋಷಕರು ಪಾಲ್ಗೊಂಡಿದ್ದರು.