








ಬೆಟ್ಟಹಲಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ್ ಬಿ.ಎನ್. ಅವಿರೋಧ ಆಯ್ಕೆ :
ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ‘ಬೆಟ್ಟಹಲಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ದ ಅಧ್ಯಕ್ಷರಾಗಿ ಬೆಟ್ಟಹಲಸೂರು ಗ್ರಾಮದ ಶ್ರೀನಿವಾಸ್ ಬಿ.ಎನ್. (ಪಂಚಮಿ), ಉಪಾಧ್ಯಕ್ಷರಾಗಿ ತರಹುಣಸೆ ಗ್ರಾಮದ ಶಿವಕುಮಾರ್ ಟಿ.ಪಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದಲ್ಲಿ ಒಟ್ಟು 12 ಜನ ಸದಸ್ಯರಿದ್ದು, ಬುಧವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕ್ರಮವಾಗಿ ಅಧ್ಯಕ್ಷರಾಗಿ ಶ್ರೀನಿವಾಸ್ ಬಿ.ಎನ್., ಉಪಾಧ್ಯಕ್ಷರಾಗಿ ಶಿವಕುಮಾರ್ ಟಿ.ಪಿ.ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಹಕಾರ ಸಂಘದ ನಿರ್ದೇಶಕರು, ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು, ಹಿತೈಷಿಗಳು ಗೌರವಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕೆ.ಅಶೋಕನ್, ಮಾಜಿ ಸದಸ್ಯ ದಾನೇಗೌಡ, ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಿ.ಕೆ.ಮಂಜುನಾಥ್ ಗೌಡ, ಬಿ.ಎಂ.ನಾಗೇಶ್, ಹಾಲಿ ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಕಾಂಗ್ರೆಸ್ ಮುಖಂಡರಾದ ಬಿ.ಕೆ.ರವೀಂದ್ರನಾಥಗೌಡ, ಮುನೇಗೌಡ, ಟಿ.ಎಸ್.ನವೀನ್, ಅಮರ್, ನಾಗೇಶ್, ಶಿವಣ್ಣ, ಬಿ.ಎನ್.ಗೋವಿಂದರಾಜು, ಬಿ.ಎನ್.ಆನಂದ್, ವೇಣುಗೋಪಾಲ್, ಜಗದೀಶ್, ದೊಡ್ಡಣ್ಣ, ಪಾಟೀಲ್, ಕೆಂಪರಾಜು, ದೇವನಾಥಗೌಡ, ಶ್ರೀನಿವಾಸಮೂರ್ತಿ, ಗೋವರ್ಧನ್, ರಾಜಗೋಪಾಲ್, ಮೈಲಾರಪ್ಪ, ನಂಜೇಮರಿಯಪ್ಪ, ಬಾಲರಾಜ್, ರಾಜಣ್ಣ, ಆನಂದ್, ಬಿ.ಎಂ.ಮುನಿವೆಂಕಟಪ್ಪ, ಸಂಜಯ್, ಚಂದ್ರಕಾಂತ್, ಅಶ್ವಥ್, ಶಶಿ, ಮನೋಜ್, ನಾಗೇಶ್, ವೆಂಕಟರಮಣ, ಪ್ರವೀಣ್, ಶುಬ್ರಮಣಿ, ಶ್ಯಾಮಣ್ಣ, ವಿಶ್ವ, ಸಹಕಾರ ಸಂಘದ ನಿರ್ದೇಶಕರಾದ ಬಿ.ಎಸ್.ನಾರಾಯಣಗೌಡ, ಮುನಿವೆಂಕಟೇಗೌಡ ಎಸ್.ಎಚ್., ಮಂಜುನಾಥ್ ಬಿ.ಎಮ್., ರಾಮಮೂರ್ತಿ, ಕಾಮಾಕ್ಷಮ್ಮ, ಶಶಿಕಲಾ ರಾಮನಾಥಗೌಡ, ನಾಗೇಶ್ ಬಿ.ಎನ್., ಅಕ್ಕಯ್ಯಮ್ಮ ತಿರುಮಳಪ್ಪ, ವೆಂಕಟೇಶ್ ಕೆ. ಸೇರಿದಂತೆ ಇನ್ನಿತರರಿದ್ದರು.