

















ಯಲಹಂಕ ಸುದ್ದಿ :
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿ. ಎಸ್.ಆರ್ ಅನುದಾನದ ಅಡಿಯಲ್ಲಿ ಕಂಪ್ಯೂಟರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಕರ್ತವ್ಯದ ಅನುಭವಗಳನ್ನು ಹಂಚಿಕೊಂಡರು.
ಗ್ರಾಮಸ್ಥ ಸಂಪೂರ್ಣ ಸಹಕಾರವಿದೆ. ಇಲ್ಲಿ ಓದುವ ಶಾಲೆಯ ಮಕ್ಕಳು ಒಳ್ಳೆಯ ಪ್ರಜೆಗಳಾಗಬೇಕು ಇನ್ನು ಅನೇಕ ಹಿತನುಡಿಗಳನ್ನು ತಿಳಿಸಿದರು.
ಬೆಟ್ಟಹಲಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹೇಮಾವತಿಯವರು ಮಾತನಾಡಿ ಶಾಲೆಗೆ ಪಂಚಾಯಿತಿ ವತಿಯಿಂದ ಸಹಾಯ ಇದ್ದೇ ಇರುತ್ತೆ ಎಂಬ ವಿಚಾರವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಯುತ ಪ್ರವೀಣ್.ಆರ್. ನಿಕಟಪೂರ್ವ ಅಧ್ಯಕ್ಷರಾದ ಬಿ ಎಂ ನಾಗೇಶ್, ಅನಿಲ್ ಕುಮಾರ್, ಸದಸ್ಯರಾದ ರಾಮಾಂಜನಪ್ಪ, ಮಮತ ಪ್ರಶಾಂತ್, ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು. ಮತ್ತು. ಯೂತ್ ಫಾರ್ ಸೇವಾ ಸಂಸ್ಥೆಯ. ಲೋಹಿತ್ ಎ ಎಂ ಡಿ ಋತುಜ ಭಾಸ್ಕರ್. ಕೇಶವ್ ಮೂರ್ತಿ. ರವಿಶಂಕರ್ ಹೆಗಡೆ. ರೋಹಿತ್ ಸಂತೋಷ್ ಶಾನ್ಭಾಗ್ ಬೆಲಾನಿ. ಪವನ್ ಇನ್ನೂ ಅನೇಕರು ಭಾಗವಹಿಸಿದ್ದು ಕಾರ್ಯಕ್ರಮ ಬಹಳ ವಿಜೃಂಭಣೆ ನಡೆಯಿತು ಶಾಲೆಯ ಹಿರಿಯ ಶಿಕ್ಷಕರಾದ ದಾಸೇಗೌಡರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
[