







ಬೆಂ. ಡೈರಿ ಚುನಾವಣೆ : ಬೆಂ.ಉತ್ತರ ಕ್ಷೇತ್ರದ ಬಿಜೆಪಿ ಅಭ್ಯ ಅಭ್ಯರ್ಥಿ ಸತೀಶ್ ಕಡತನಮಲೆ ನಾಮಪತ್ರ ಸಲ್ಲಿಕೆ :
ಯಲಹಂಕ : ಬೆಂಗಳೂರು ಡೈರಿ ನಿರ್ದೇಶಕರ ಆಯ್ಕೆಗಾಗಿ ಮೇ.25ರಂದು ನಡೆಯಲಿರುವ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸತೀಶ್ ಕಡತನಮಲೆ ಅವರು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಮತ್ತು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರ ನೇತೃತ್ವದಲ್ಲಿ ಸೋಮವಾರ ಉಮೇದುವಾರಿಕೆ ನಾಮಪತ್ರ ಸಲ್ಲಿಸಿದರು.
ನಂತರ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಡೈರಿ ಚುನಾವಣೆಗೆ ಬೆಂ. ಉತ್ತರ ಕ್ಷೇತ್ರದಿಂದ ಒಬ್ಬ ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂಬ ವಿಷಯ ಕುರಿತು ಮುಖಂಡರೊಂದಿಗೆ ಸಮಾಲೋಚನೆ ನಡೆಸಿದಾಗ ವಕೀಲರು, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಆಗಿರುವ ಸತೀಶ್ ಕಡತನಮಲೆ ಯವರು ಸೂಕ್ತ ಎನಿಸಿತು. ಅದರಂತೆ ಸತೀಶ್ ಕಡತನಮಲೆ ಅವರಿಗೆ ಡೈರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿದ್ದೇವೆ. ಬೆಂ.ಉತ್ತರ ಭಾಗದ ಹಾಲು ಉತ್ಪಾದಕರ ವಿಶ್ವಾಸ ಮತ್ತು ಬೆಂಬಲವನ್ನು ಗಳಿಸಿಕೊಂಡಿರುವ ಸತೀಶ್ ಕಡತನಮಲೆ ಅವರು ಗೆಲ್ಲುವ ವಿಶ್ವಾಸವಿದೆ ಎಂದರು.
ಬೆಂ.ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕಡತನಮಲೆ ಮಾತನಾಡಿ ‘ಬೆಂಗಳೂರು ಉತ್ತರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣಾ ವ್ಯಾಪ್ತಿಗೆ ದಾಸನಪುರ ಹೋಬಳಿ, ಹೆಸರಘಟ್ಟ ಹೋಬಳಿ, ಯಲಹಂಕ ಹೋಬಳಿ, ಜಾಲ ಹೋಬಳಿ, ದಾಸರಹಳ್ಳಿ ಕ್ಷೇತ್ರ, ದೊಡ್ಡಬಳ್ಳಾಪುರ ಕ್ಷೇತ್ರದ ಮಧುರೆ ಹೋಬಳಿ ಸೇರಿದಂತೆ ಒಟ್ಟು176 ಸಹಕಾರ ಸಂಘಗಳು ಬರಲಿದ್ದು, ಯಲಹಂಕ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಸಹಕಾರ ಸಂಘಗಳಿರುವುದು ನಮಗೆ ವರದಾನವಾಗಲಿದೆ. ಈಗಾಗಲೇ ಎಸ್ ಆರ್ ವಿಶ್ವನಾಥ್ ಅವರು ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರುಗಳೊಂದಿಗೆ ಖುದ್ದು ಮಾತನಾಡಿ ಮತಯಾಚನೆ ನಡೆಸಿದ್ದು, ಶಾಸಕರ ಸಹಕಾರ ಮತ್ತು ಬೆಂಬಲದೊಂದಿಗೆ ಗೆಲ್ಲುವ ವಿಶ್ವಾಸವಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ರಾಮಮೂರ್ತಿ, ಚೊಕ್ಕನಹಳ್ಳಿ ವೆಂಕಟೇಶ್, ಡಿ.ಜಿ.ಅಪ್ಪಯ್ಯಣ್ಣ, ಮಂಜುನಾಥ್, ಜಿ.ಜೆ.ಮೂರ್ತಿ, ಎಚ್.ಸಿ.ರಾಜೇಶ್, ಎನ್.ಡಿ.ಜಗದೀಶ್, ಕೆ.ಆರ್.ತಿಮ್ಮೇಗೌಡ, ಎಂ.ಬಿ.ಕೃಷ್ಣಯ್ಯ, ಮಾದಪ್ಪನಹಳ್ಳಿ ವಿಜಯಕುಮಾರ್, ಕೃಷ್ಣಮೂರ್ತಿ, ಮುನಿದಾಸಪ್ಪ, ರಮೇಶ್, ಮುನಿರೆಡ್ಡಿ, ಎಸ್.ಜಿ.ಪ್ರಶಾಂತ್ ರೆಡ್ಡಿ ಸೇರಿದಂತೆ ಸಹಕಾರ ಸಂಘಗಳ ಅಧ್ಯಕ್ಷರುಗಳಿದ್ದರು.