ಸಿಂಗನಾಯಕನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷರಾಗಿ ಜಿ.ಸಿ.ಮಂಜುನಾಥ್ ಆಯ್ಕೆ :
ಯಲಹಂಕ : ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಆವಲಹಳ್ಳಿ ಗ್ರಾಮದ ಜಿ.ಸಿ.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಿಂಗನಾಯಕನಹಳ್ಳಿ ಗ್ರಾ.ಪಂ. ಯಲ್ಲಿ ಒಟ್ಟು 23 ಮಂದಿ ಸದಸ್ಯರಿದ್ದು, ಉಪಾಧ್ಯಕ್ಷರಾಗಿದ್ದ ಹೇಮಂತ್ ಕುಮಾರ್ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕಾಗಿ ಶುಕ್ರವಾರ ನಡೆದ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿ ಯಾರೂ ಸ್ಪರ್ದಿಸದ ಕಾರಣ ಜಿ.ಸಿ.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.
ನೂತನ ಉಪಾಧ್ಯಕ್ಷ ಮಂಜುನಾಥ್ ಅವರನ್ನು ಶಾಸಕ ಎಸ್ ಆರ್ ವಿಶ್ವನಾಥ್ ಅಭಿನಂದಿಸಿ, ಶುಭ ಹಾರೈಸಿದರು.
ನಂತರ ಅವರು ಮಾತನಾಡಿ ‘ಸಿಂಗನಾಯಕನಹಳ್ಳಿ ಗ್ರಾ.ಪಂ‌.ಪ್ರತಿಷ್ಠಿತ ಗ್ರಾಮ ಪಂಚಾಯ್ತಿಯಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಪಂಚಾಯಿತಿ ಯಾಗಿದೆ, ಅಭಿವೃದ್ಧಿ, ಮೂಲ ಸೌಕರ್ಯ ಒದಗಿಸುವುದು, ಗ್ರಾ.ಪಂ. ಆಡಳಿತ ವೈಖರಿ ಹೀಗೆ ಎಲ್ಲಾ ವಿಚಾರಗಳಲ್ಲಿ ಉತ್ತಮ ಹೆಸರು ಗಳಿಸಿದೆ. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಸಿ.ಮಂಜುನಾಥ್ ಹಲವು ವರ್ಷಗಳಿಂದ ಗ್ರಾ.ಪಂ‌.ಸದಸ್ಯರಾಗಿ ಸಾಕಷ್ಟು ಅನುಭವ ಪಡೆದುಕೊಂಡಿ ದ್ದಾರೆ. ಅವರ ಅನುಪಮ ಅನುಭವವನ್ನು ತಮ್ಮ ಉಪಾಧ್ಯಕ್ಷ ಸ್ಥಾನದ ಆಧಿಕಾರ ಅವಧಿಯಲ್ಲಿ ಅಭಿವೃದ್ಧಿಯ ಕಡೆಗೆ ಸಮರ್ಥ ರೀತಿಯಲ್ಲಿ ಬಳಸಿಕೊಳ್ಳು ವಂತಾಗಲಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಸ್.ಎನ್.ರಾಜಣ್ಣ, ದಿಬ್ಬೂರು ಜಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಆವಲಹಳ್ಳಿ ಕೇಶವಮೂರ್ತಿ, ನಂಜುಂಡೇಗೌಡ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಿಂಗನಾಯಕನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಮರಾವತಮ್ಮ, ಮಾಜಿ ಅಧ್ಯಕ್ಷರಾದ ಟಿ.ಮುನಿರೆಡ್ಡಿ, ನಿಕಟಪೂರ್ವ ಉಪಾಧ್ಯಕ್ಷ ಹೇಮಂತ್ ಕುಮಾರ್, ಮಾಜಿ ಉಪಾಧ್ಯಕ್ಷರಾದ ಎಸ್.ಜಿ.ಪ್ರಶಾಂತ್ ರೆಡ್ಡಿ, ಜೀವಿತಾ ಮುನಿಕೃಷ್ಣ, ಗ್ರಾ.ಪಂ.ಸದಸ್ಯರಾದ ಶಾಂತಲಾ ರಾಜಣ್ಣ, ಪದ್ಮಶ್ರೀ ನಾಗರಾಜರೆಡ್ಡಿ, ಭಾಗ್ಯಲಕ್ಷ್ಮಿ ಕಿರಣ್, ಚೈತ್ರ ಕೆಂಪೇಗೌಡ, ಶೋಭ ಗೋಪಾಲ್, ಸುಧಾರಾಣಿ, ಶೋಭ, ಸುನಂದ, ವೀಣಾ, ಮುನಿರತ್ನಮ್ಮ, ಬಾಬು ಕೆ., ಮಲ್ಲೇಶ್, ಹರೀಶ್ ಎನ್., ನಂಜೇಗೌಡ, ಮುನಿಯಪ್ಪ, ರವಿಚಂದ್ರ, ಪಿಡಿಓ ದಾಮೋದರ್, ಬಿಜೆಪಿ ಮುಂಖಂಡರಾದ ವಸಂತ್ ಅರಕೆರೆ, ಪ್ರಕಾಶ್ ಗೌಡ ಸೇರಿದಂತೆ ಗ್ರಾ.ಪಂ.ಇನ್ನಿತರ ಸದಸ್ಯರಿದ್ದರು.

Leave a Reply

Your email address will not be published. Required fields are marked *